<p><strong>ನವದೆಹಲಿ: </strong>ಸಿಬಿಐ ವಿಶೇಷ ನ್ಯಾಯಾಧೀಶರಾಗಿದ್ದ <a href="http://www.prajavani.net/news/article/2018/01/14/547309.html" target="_blank">ಬ್ರಿಜ್ಗೋಪಾಲ್ ಹರ್ಕಿಶನ್ ಲೋಯ</a> (ಬಿ.ಎಚ್. ಲೋಯ) ಅವರ ಅನುಮಾನಾಸ್ಪದ ಸಾವಿನ ಬಗ್ಗೆ ವಿಶೇಷ ತನಿಖಾ ತಂಡದಿಂದ (ಎಸ್ಐಟಿ) ತನಿಖೆ ನಡೆಸಬೇಕು ಎಂದು ಪ್ರತಿಪಕ್ಷಗಳು ರಾಷ್ಟ್ರಪತಿಗಳಿಗೆ ಮನವಿ ಮಾಡಿವೆ.</p>.<p>ಈ ಕುರಿತು, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ಸಿಪಿಎಂ ಸೇರಿದಂತೆ 15 ಪ್ರತಿಪಕ್ಷಗಳ 114 ಸಂಸದರ ಸಹಿ ಒಳಗೊಂಡ ಮನವಿ ಪತ್ರವನ್ನು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಗೆ ಸಲ್ಲಿಸಲಾಗಿದೆ.</p>.<p>ನಂತರ ಮಾಧ್ಯಮಗಳಿಗೆ ಮಾಹಿತಿ ನೀಡಿ ಮಾತನಾಡಿದ ರಾಹುಲ್ ಗಾಂಧಿ, ‘ನಮ್ಮ ಮನವಿಗೆ ರಾಷ್ಟ್ರಪತಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ’ ಎಂದು ಹೇಳಿದ್ದಾರೆ.</p>.<p>‘ಒಬ್ಬ ನ್ಯಾಯಾಧೀಶರು ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ. ಪ್ರಕರಣದ ಬಗ್ಗೆ ತನಿಖೆಯಾಗಬೇಕು ಮತ್ತು ಅದಕ್ಕಾಗಿ ಎಸ್ಐಟಿ ರಚಿಸಬೇಕು ಎಂದು ಅನೇಕ ಸಂಸದರು ಬಯಸಿದ್ದಾರೆ. ಈ ಕುರಿತ ಮನವಿ ಪತ್ರಕ್ಕೆ 15 ಪಕ್ಷಗಳ 114 ಸಂಸದರು ಸಹಿ ಹಾಕಿದ್ದಾರೆ. ಅವರ (<a href="http://www.prajavani.net/news/article/2018/01/16/547660.html" target="_blank">ಲೋಯ</a>) ಸಾವು ಅನುಮಾನಾಸ್ಪದ. ಇನ್ನೂ ಎರಡು ಅಂತಹ ಶಂಕಾಸ್ಪದ ಸಾವುಗಳಾಗಿವೆ. ರಾಷ್ಟ್ರಪತಿಗಳು ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ’ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.</p>.<p><strong>ಅಮಿತ್ ಶಾ ವಿರುದ್ಧದ ಪ್ರಕರಣದ ವಿಚಾರಣೆ ನಡೆಸುತ್ತಿದ್ದ <a href="http://www.prajavani.net/news/article/2018/01/21/548721.html" target="_blank">ಲೋಯ</a>: </strong>ಸೊಹ್ರಾಬುದ್ದೀನ್ ಶೇಖ್ ಎನ್ಕೌಂಟರ್ ಪ್ರಕರಣವನ್ನು <a href="http://www.prajavani.net/news/article/2018/01/31/551069.html" target="_blank">ಲೋಯ</a> ವಿಚಾರಣೆ ನಡೆಸುತ್ತಿದ್ದರು. ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಈ ಪ್ರಕರಣದಲ್ಲಿ ಆರೋಪಿಯಾಗಿದ್ದರು. ಈಗ ಅವರು ಖುಲಾಸೆಯಾಗಿದ್ದಾರೆ. 2014ರ ಡಿಸೆಂಬರ್ನಲ್ಲಿ <a href="http://www.prajavani.net/news/article/2018/01/17/547794.html" target="_blank">ಲೋಯ</a> ಮೃತಪಟ್ಟಿದ್ದಾರೆ.</p>.<p>**</p>.<p><strong>ಬಜೆಟ್ ಅಧಿವೇಶನ ಮುಂದೂಡಿಕೆ</strong></p>.<p>ಕೇಂದ್ರ ಬಜೆಟ್ನಲ್ಲಿ ಆಂಧ್ರ ಪ್ರದೇಶವನ್ನು ಕಡೆಗಣಿಸಲಾಗಿದೆ ಎಂಬ ಕಾರಣಕ್ಕೆ ಆ ರಾಜ್ಯದ ಸಂಸದರ ಪ್ರತಿಭಟನೆಯ ನಡುವೆಯೇ ಸಂಸತ್ತಿನ ಎರಡೂ ಸದನಗಳ ಕಲಾಪವನ್ನು ಮುಂದೂಡಲಾಗಿದೆ.</p>.<p>ಮಾರ್ಚ್ 5ರಂದು ಬಜೆಟ್ ಅಧಿವೇಶನ ಪುನರಾರಂಭವಾಗಲಿದೆ. ಈ ನಡುವಣ ಅವಧಿಯಲ್ಲಿ ಸಂಸತ್ತಿನ ಸ್ಥಾಯಿ ಸಮಿತಿಗಳು ಬಜೆಟ್ ಪ್ರಸ್ತಾವನೆಗಳನ್ನು ಪರಿಶೀಲಿಸಲಿವೆ. ಇದೇ 1ರಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಬಜೆಟ್ ಮಂಡಿಸಿದ್ದರು. ಏಪ್ರಿಲ್ 6ರವರೆಗೆ ಅಧಿವೇಶನ ನಡೆಯಲಿದೆ.</p>.<p>ಬಜೆಟ್ ಅಧಿವೇಶನದ ಮೊದಲ ಭಾಗದಲ್ಲಿ ಲೋಕಸಭೆಯಲ್ಲಿ ಏಳು ಮತ್ತು ರಾಜ್ಯಸಭೆಯಲ್ಲಿ ಎಂಟು ದಿನದ ಕಲಾಪ ನಡೆದಿದೆ.</p>.<p>ಲೋಕಸಭೆಯಲ್ಲಿ ಈ ಬಾರಿ ನಿಗದಿತ ಅವಧಿಯ ಶೇ 134.61ರಷ್ಟು ಕಲಾಪ ನಡೆದಿದೆ. ರಾಜ್ಯಸಭೆ ಶೇ 96.31ರಷ್ಟು ಕಾರ್ಯನಿರ್ವಹಿಸಿದೆ. ಮೂರು ದಿನ ಹೆಚ್ಚು ಹೊತ್ತು ಕಲಾಪ ನಡೆದದ್ದರಿಂದ ನಿಗದಿತ ಅವಧಿಗಿಂತ ಹೆಚ್ಚು ಕೆಲಸ ಮಾಡಲು ಸಾಧ್ಯವಾಗಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವಾಲಯ ಹೇಳಿದೆ.</p>.<p>ಆದರೆ, ಪ್ರಶ್ನೋತ್ತರ ಅವಧಿಯ ಹೆಚ್ಚಿನ ಸಮಯ ವ್ಯರ್ಥವಾಗಿದೆ. ಲೋಕಸಭೆಯಲ್ಲಿ ಶೇ 48 ಮತ್ತು ರಾಜ್ಯಸಭೆಯಲ್ಲಿ ಶೇ 39ರಷ್ಟು ಮಾತ್ರ ಕೆಲಸ ಆಗಿದೆ. ಅಧಿವೇಶನದ ಮೊದಲ ಭಾಗದಲ್ಲಿ ಶಾಸನ ರೂಪಿಸುವ ಯಾವ ಕೆಲಸವನ್ನೂ ಕೈಗೆತ್ತಿಕೊಳ್ಳಲಾಗಿಲ್ಲ.</p>.<p>ಅಧಿವೇಶನದ ಎರಡನೇ ಅವಧಿಯಲ್ಲಿ, ರಾಷ್ಟ್ರಪತಿ ಭಾಷಣಕ್ಕೆ ವಂದನಾ ನಿರ್ಣಯ ಮತ್ತು ಬಜೆಟ್ ಮೇಲೆ ಚರ್ಚೆ ನಡೆಯಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ: </strong>ಸಿಬಿಐ ವಿಶೇಷ ನ್ಯಾಯಾಧೀಶರಾಗಿದ್ದ <a href="http://www.prajavani.net/news/article/2018/01/14/547309.html" target="_blank">ಬ್ರಿಜ್ಗೋಪಾಲ್ ಹರ್ಕಿಶನ್ ಲೋಯ</a> (ಬಿ.ಎಚ್. ಲೋಯ) ಅವರ ಅನುಮಾನಾಸ್ಪದ ಸಾವಿನ ಬಗ್ಗೆ ವಿಶೇಷ ತನಿಖಾ ತಂಡದಿಂದ (ಎಸ್ಐಟಿ) ತನಿಖೆ ನಡೆಸಬೇಕು ಎಂದು ಪ್ರತಿಪಕ್ಷಗಳು ರಾಷ್ಟ್ರಪತಿಗಳಿಗೆ ಮನವಿ ಮಾಡಿವೆ.</p>.<p>ಈ ಕುರಿತು, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ಸಿಪಿಎಂ ಸೇರಿದಂತೆ 15 ಪ್ರತಿಪಕ್ಷಗಳ 114 ಸಂಸದರ ಸಹಿ ಒಳಗೊಂಡ ಮನವಿ ಪತ್ರವನ್ನು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಗೆ ಸಲ್ಲಿಸಲಾಗಿದೆ.</p>.<p>ನಂತರ ಮಾಧ್ಯಮಗಳಿಗೆ ಮಾಹಿತಿ ನೀಡಿ ಮಾತನಾಡಿದ ರಾಹುಲ್ ಗಾಂಧಿ, ‘ನಮ್ಮ ಮನವಿಗೆ ರಾಷ್ಟ್ರಪತಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ’ ಎಂದು ಹೇಳಿದ್ದಾರೆ.</p>.<p>‘ಒಬ್ಬ ನ್ಯಾಯಾಧೀಶರು ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ. ಪ್ರಕರಣದ ಬಗ್ಗೆ ತನಿಖೆಯಾಗಬೇಕು ಮತ್ತು ಅದಕ್ಕಾಗಿ ಎಸ್ಐಟಿ ರಚಿಸಬೇಕು ಎಂದು ಅನೇಕ ಸಂಸದರು ಬಯಸಿದ್ದಾರೆ. ಈ ಕುರಿತ ಮನವಿ ಪತ್ರಕ್ಕೆ 15 ಪಕ್ಷಗಳ 114 ಸಂಸದರು ಸಹಿ ಹಾಕಿದ್ದಾರೆ. ಅವರ (<a href="http://www.prajavani.net/news/article/2018/01/16/547660.html" target="_blank">ಲೋಯ</a>) ಸಾವು ಅನುಮಾನಾಸ್ಪದ. ಇನ್ನೂ ಎರಡು ಅಂತಹ ಶಂಕಾಸ್ಪದ ಸಾವುಗಳಾಗಿವೆ. ರಾಷ್ಟ್ರಪತಿಗಳು ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ’ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.</p>.<p><strong>ಅಮಿತ್ ಶಾ ವಿರುದ್ಧದ ಪ್ರಕರಣದ ವಿಚಾರಣೆ ನಡೆಸುತ್ತಿದ್ದ <a href="http://www.prajavani.net/news/article/2018/01/21/548721.html" target="_blank">ಲೋಯ</a>: </strong>ಸೊಹ್ರಾಬುದ್ದೀನ್ ಶೇಖ್ ಎನ್ಕೌಂಟರ್ ಪ್ರಕರಣವನ್ನು <a href="http://www.prajavani.net/news/article/2018/01/31/551069.html" target="_blank">ಲೋಯ</a> ವಿಚಾರಣೆ ನಡೆಸುತ್ತಿದ್ದರು. ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಈ ಪ್ರಕರಣದಲ್ಲಿ ಆರೋಪಿಯಾಗಿದ್ದರು. ಈಗ ಅವರು ಖುಲಾಸೆಯಾಗಿದ್ದಾರೆ. 2014ರ ಡಿಸೆಂಬರ್ನಲ್ಲಿ <a href="http://www.prajavani.net/news/article/2018/01/17/547794.html" target="_blank">ಲೋಯ</a> ಮೃತಪಟ್ಟಿದ್ದಾರೆ.</p>.<p>**</p>.<p><strong>ಬಜೆಟ್ ಅಧಿವೇಶನ ಮುಂದೂಡಿಕೆ</strong></p>.<p>ಕೇಂದ್ರ ಬಜೆಟ್ನಲ್ಲಿ ಆಂಧ್ರ ಪ್ರದೇಶವನ್ನು ಕಡೆಗಣಿಸಲಾಗಿದೆ ಎಂಬ ಕಾರಣಕ್ಕೆ ಆ ರಾಜ್ಯದ ಸಂಸದರ ಪ್ರತಿಭಟನೆಯ ನಡುವೆಯೇ ಸಂಸತ್ತಿನ ಎರಡೂ ಸದನಗಳ ಕಲಾಪವನ್ನು ಮುಂದೂಡಲಾಗಿದೆ.</p>.<p>ಮಾರ್ಚ್ 5ರಂದು ಬಜೆಟ್ ಅಧಿವೇಶನ ಪುನರಾರಂಭವಾಗಲಿದೆ. ಈ ನಡುವಣ ಅವಧಿಯಲ್ಲಿ ಸಂಸತ್ತಿನ ಸ್ಥಾಯಿ ಸಮಿತಿಗಳು ಬಜೆಟ್ ಪ್ರಸ್ತಾವನೆಗಳನ್ನು ಪರಿಶೀಲಿಸಲಿವೆ. ಇದೇ 1ರಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಬಜೆಟ್ ಮಂಡಿಸಿದ್ದರು. ಏಪ್ರಿಲ್ 6ರವರೆಗೆ ಅಧಿವೇಶನ ನಡೆಯಲಿದೆ.</p>.<p>ಬಜೆಟ್ ಅಧಿವೇಶನದ ಮೊದಲ ಭಾಗದಲ್ಲಿ ಲೋಕಸಭೆಯಲ್ಲಿ ಏಳು ಮತ್ತು ರಾಜ್ಯಸಭೆಯಲ್ಲಿ ಎಂಟು ದಿನದ ಕಲಾಪ ನಡೆದಿದೆ.</p>.<p>ಲೋಕಸಭೆಯಲ್ಲಿ ಈ ಬಾರಿ ನಿಗದಿತ ಅವಧಿಯ ಶೇ 134.61ರಷ್ಟು ಕಲಾಪ ನಡೆದಿದೆ. ರಾಜ್ಯಸಭೆ ಶೇ 96.31ರಷ್ಟು ಕಾರ್ಯನಿರ್ವಹಿಸಿದೆ. ಮೂರು ದಿನ ಹೆಚ್ಚು ಹೊತ್ತು ಕಲಾಪ ನಡೆದದ್ದರಿಂದ ನಿಗದಿತ ಅವಧಿಗಿಂತ ಹೆಚ್ಚು ಕೆಲಸ ಮಾಡಲು ಸಾಧ್ಯವಾಗಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವಾಲಯ ಹೇಳಿದೆ.</p>.<p>ಆದರೆ, ಪ್ರಶ್ನೋತ್ತರ ಅವಧಿಯ ಹೆಚ್ಚಿನ ಸಮಯ ವ್ಯರ್ಥವಾಗಿದೆ. ಲೋಕಸಭೆಯಲ್ಲಿ ಶೇ 48 ಮತ್ತು ರಾಜ್ಯಸಭೆಯಲ್ಲಿ ಶೇ 39ರಷ್ಟು ಮಾತ್ರ ಕೆಲಸ ಆಗಿದೆ. ಅಧಿವೇಶನದ ಮೊದಲ ಭಾಗದಲ್ಲಿ ಶಾಸನ ರೂಪಿಸುವ ಯಾವ ಕೆಲಸವನ್ನೂ ಕೈಗೆತ್ತಿಕೊಳ್ಳಲಾಗಿಲ್ಲ.</p>.<p>ಅಧಿವೇಶನದ ಎರಡನೇ ಅವಧಿಯಲ್ಲಿ, ರಾಷ್ಟ್ರಪತಿ ಭಾಷಣಕ್ಕೆ ವಂದನಾ ನಿರ್ಣಯ ಮತ್ತು ಬಜೆಟ್ ಮೇಲೆ ಚರ್ಚೆ ನಡೆಯಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>