‘ಪ್ರತಿಭಟನೆ ನಿರತ ರೈತರು ಕಿಸಾನ್ ಮಜ್ದೂರ್ ಆಜಾದ್ ಸಂಗ್ರಾಮ್ ದಿನ ಆಚರಿಸಿದರು. ಹಿರಿಯ ರೈತ ನಾಯಕ ಸತ್ನಾಮ್ ಸಿಂಗ್ (85) ಬೆಳಳಿಗ್ಗೆ 11 ಗಂಟೆಗೆ ಧ್ವಜಾರೋಹಣ ನೆರವೇರಿಸಿದರು. ಬಳಿಕ ನಿವೃತ್ತ ಸೈನಿಕರು ಪಥಸಂಚಲನ ನಡೆಸಿದರು. ಜಲಂಧರ್ನ ಡಿಎವಿ ಕಾಲೇಜಿನ ವಿದ್ಯಾರ್ಥಿಗಳು ಒಂದೂವರೆ ಗಂಟೆಗಳ ಕಾಲ ನೃತ್ಯ ಪ್ರದರ್ಶಿಸಿದರು. ಕಾರ್ಯಕ್ರಮ ಅಂದಾಜು ನಾಲ್ಕು ಗಂಟೆಗೆ ಮುಕ್ತಾಯವಾಯಿತು’ ಎಂದು ರೈತನಾಯಕ ರಾಮಿಂದರ್ ಸಿಂಗ್ ತಿಳಿಸಿದರು.