<p><strong>ಲಖನೌ:</strong> ‘ಉತ್ತರ ಪ್ರದೇಶದ ಜೈಲುಗಳು ಕೈದಿಗಳಿಂದ ತುಂಬಿ ತುಳುಕುತ್ತಿದ್ದು, ಸಾಮರ್ಥ್ಯ ಮೀರಿ ಸ್ಥಳಾವಕಾಶ ಕಲ್ಪಿಸಲಾಗಿದೆ’ ಎಂದು ಜೈಲು ಆಡಳಿತ ಹಾಗೂ ಸುಧಾರಣಾ ಇಲಾಖೆ ಸಚಿವ ದಾರಾ ಸಿಂಗ್ ಚವ್ಹಾಣ್ ಅವರು ಶುಕ್ರವಾರ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.</p><p>ಬಜೆಟ್ ಅಧಿವೇಶನದ ಏಳನೇ ದಿನ ಪ್ರಶ್ನೋತ್ತರದಲ್ಲಿ ಪಾಲ್ಗೊಂಡ ಅವರು, ಸಮಾಜವಾದಿ ಪಕ್ಷದ ಶಾಸಕ ರಾಜೇಂದ್ರ ಪ್ರಸಾದ್ ಚೌಧರಿ ಅವರ ಪ್ರಶ್ನೆಗೆ ಉತ್ತರಿಸಿ, ‘ರಾಜ್ಯದಲ್ಲಿರುವ 76 ಜೈಲುಗಳ ಸಾಮರ್ಥ್ಯ 76,475. ಆದರೆ ಸದ್ಯ 89,256 ಕೈದಿಗಳು ಇದ್ದಾರೆ’ ಎಂದಿದ್ದಾರೆ.</p><p>‘ಜ. 31ರವರೆಗೂ ಉತ್ತರ ಪ್ರದೇಶದಲ್ಲಿ ಒಟ್ಟು 76 ಜೈಲುಗಳಿವೆ. ಎಂಟು ಹೊಸ ಜೈಲುಗಳು ನಿರ್ಮಾಣ ಹಂತದಲ್ಲಿವೆ. ಇದರಿಂದ ಹೆಚ್ಚುವರಿಯಾಗಿ 9,165 ಕೈದಿಗಳನ್ನು ಇಡಬಹುದಾಗಿದೆ. 15 ಜಿಲ್ಲೆಗಳಲ್ಲಿ 16 ಹೊಸ ಜೈಲುಗಳನ್ನು ಭವಿಷ್ಯದಲ್ಲಿ ನಿರ್ಮಿಸುವ ಯೋಜನೆ ಇದ್ದು, ಇದರಲ್ಲಿ 21,408 ಕೈದಿಗಳನ್ನು ಇಡಬಹುದಾಗಿದೆ’ ಎಂದಿದ್ದಾರೆ.</p><p>‘ಇವುಗಳ ಜತೆಗೆ ಹಾಲಿ ಇರುವ ಜೈಲುಗಳಲ್ಲಿ ಬ್ಯಾರಕ್ಗಳ ಸಂಖ್ಯೆಯನ್ನೂ ಹೆಚ್ಚಿಸಲಾಗುತ್ತಿದೆ. ಇದರಿಂದ ಹೆಚ್ಚುವರಿ ಕೈದಿಗಳನ್ನು ಇಡಲು ಸಾಧ್ಯವಾಗಲಿದೆ’ ಎಂದು ಸಚಿವ ಚವ್ಹಾಣ್ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲಖನೌ:</strong> ‘ಉತ್ತರ ಪ್ರದೇಶದ ಜೈಲುಗಳು ಕೈದಿಗಳಿಂದ ತುಂಬಿ ತುಳುಕುತ್ತಿದ್ದು, ಸಾಮರ್ಥ್ಯ ಮೀರಿ ಸ್ಥಳಾವಕಾಶ ಕಲ್ಪಿಸಲಾಗಿದೆ’ ಎಂದು ಜೈಲು ಆಡಳಿತ ಹಾಗೂ ಸುಧಾರಣಾ ಇಲಾಖೆ ಸಚಿವ ದಾರಾ ಸಿಂಗ್ ಚವ್ಹಾಣ್ ಅವರು ಶುಕ್ರವಾರ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.</p><p>ಬಜೆಟ್ ಅಧಿವೇಶನದ ಏಳನೇ ದಿನ ಪ್ರಶ್ನೋತ್ತರದಲ್ಲಿ ಪಾಲ್ಗೊಂಡ ಅವರು, ಸಮಾಜವಾದಿ ಪಕ್ಷದ ಶಾಸಕ ರಾಜೇಂದ್ರ ಪ್ರಸಾದ್ ಚೌಧರಿ ಅವರ ಪ್ರಶ್ನೆಗೆ ಉತ್ತರಿಸಿ, ‘ರಾಜ್ಯದಲ್ಲಿರುವ 76 ಜೈಲುಗಳ ಸಾಮರ್ಥ್ಯ 76,475. ಆದರೆ ಸದ್ಯ 89,256 ಕೈದಿಗಳು ಇದ್ದಾರೆ’ ಎಂದಿದ್ದಾರೆ.</p><p>‘ಜ. 31ರವರೆಗೂ ಉತ್ತರ ಪ್ರದೇಶದಲ್ಲಿ ಒಟ್ಟು 76 ಜೈಲುಗಳಿವೆ. ಎಂಟು ಹೊಸ ಜೈಲುಗಳು ನಿರ್ಮಾಣ ಹಂತದಲ್ಲಿವೆ. ಇದರಿಂದ ಹೆಚ್ಚುವರಿಯಾಗಿ 9,165 ಕೈದಿಗಳನ್ನು ಇಡಬಹುದಾಗಿದೆ. 15 ಜಿಲ್ಲೆಗಳಲ್ಲಿ 16 ಹೊಸ ಜೈಲುಗಳನ್ನು ಭವಿಷ್ಯದಲ್ಲಿ ನಿರ್ಮಿಸುವ ಯೋಜನೆ ಇದ್ದು, ಇದರಲ್ಲಿ 21,408 ಕೈದಿಗಳನ್ನು ಇಡಬಹುದಾಗಿದೆ’ ಎಂದಿದ್ದಾರೆ.</p><p>‘ಇವುಗಳ ಜತೆಗೆ ಹಾಲಿ ಇರುವ ಜೈಲುಗಳಲ್ಲಿ ಬ್ಯಾರಕ್ಗಳ ಸಂಖ್ಯೆಯನ್ನೂ ಹೆಚ್ಚಿಸಲಾಗುತ್ತಿದೆ. ಇದರಿಂದ ಹೆಚ್ಚುವರಿ ಕೈದಿಗಳನ್ನು ಇಡಲು ಸಾಧ್ಯವಾಗಲಿದೆ’ ಎಂದು ಸಚಿವ ಚವ್ಹಾಣ್ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>