<p><strong>ಗುಮ್ಲಾ, ಜಾರ್ಖಂಡ:</strong> ವಿಪರೀತ ಬಡತನ, ನಕ್ಸಲರ ಹಾವಳಿಯಿಂದ ತತ್ತರಿಸಿದ್ದ ಈ ಜಿಲ್ಲೆ ಈಗ ಸದ್ದಿಲ್ಲದೇ ನಡೆಯುತ್ತಿರುವ ‘ರಾಗಿ ಕೃಷಿ’ಯಿಂದ ದೇಶದ ಗಮನ ಸೆಳೆಯುತ್ತಿದೆ.</p>.<p>ರಾಗಿ ಬೆಳೆಯುವ ಪ್ರದೇಶವು ಕ್ರಮೇಣ ಹೆಚ್ಚಾಗುತ್ತಿದ್ದು, ರಾಗಿ ಬಳಸಿ ಮಾಡಿದ ಪೌಷ್ಟಿಕ ಪದಾರ್ಥಗಳು ಜಿಲ್ಲೆಯ ಮಕ್ಕಳು, ಮಹಿಳೆಯರಲ್ಲಿನ ಅಪೌಷ್ಟಿಕತೆ ಸಮಸ್ಯೆ ನಿವಾರಣೆಗೂ ನೆರವಾಗುತ್ತಿದೆ.</p>.<p>ಈ ಮೌನ ಕ್ರಾಂತಿ, ಯುವ ಜಿಲ್ಲಾಧಿಕಾರಿಯಾಗಿರುವ ಸುಶಾಂತ್ ಗೌರವ ಅವರ ಕಾಳಜಿ, ಪರಿಶ್ರಮದ ಫಲ.</p>.<p>ಇವರ ಕಾರ್ಯವನ್ನು ಗುರುತಿಸಿರುವ ಸರ್ಕಾರ, ಇವರನ್ನು ‘ಸಾರ್ವಜನಿಕ ಆಡಳಿತದಲ್ಲಿ ಉತ್ಕೃಷ್ಟ ಸೇವೆಗಾಗಿ ಪ್ರಧಾನ ಮಂತ್ರಿಗಳ ಪ್ರಶಸ್ತಿಗೆ’ ಆಯ್ಕೆ ಮಾಡಿದೆ. ನವದೆಹಲಿಯ ವಿಜ್ಞಾನ ಭವನದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಸುಶಾಂತ್ ಅವರಿಗೆ ಈ ಪುರಸ್ಕಾರವನ್ನು ಪ್ರದಾನ ಮಾಡಲಾಗಿದೆ.</p>.<p>‘ಮಹತ್ವಾಕಾಂಕ್ಷೆ ಜಿಲ್ಲೆ ಯೋಜನೆ ಮೂಲಕ ಸಮಗ್ರ ಅಭಿವೃದ್ಧಿ’ ವಿಭಾಗದಡಿ ಗುಮ್ಲಾ ಜಿಲ್ಲೆಯನ್ನು ಆಯ್ಕೆ ಮಾಡಲಾಗಿದೆ.</p>.<p>ಮಹದಾಸೆ: ಜಿಲ್ಲೆಯಲ್ಲಿ ರಾಗಿ ಕೃಷಿಗೆ ಮತ್ತಷ್ಟು ಉತ್ತೇಜನ ನೀಡಬೇಕು. ರಾಗಿ ಬೆಳೆಯುವ ಪ್ರದೇಶವನ್ನು ವಿಸ್ತರಿಸಬೇಕು. ಆ ಮೂಲಕ ಗುಮ್ಲಾ ಜಿಲ್ಲೆಯನ್ನು ‘ಈಶಾನ್ಯ ಭಾರತದ ರಾಗಿ ರಾಜಧಾನಿ’ಯನ್ನಾಗಿ ಮಾಡಬೇಕು ಎಂಬುದೇ ನನ್ನ ಗುರಿ ಎನ್ನುತ್ತಾರೆ ಸುಶಾಂತ್ ಗೌರವ್.</p>.<p>ರಾಜಧಾನಿ ರಾಂಚಿಯಿಂದ 100 ಕಿ.ಮೀ. ದೂರದಲ್ಲಿ ಗುಮ್ಲಾ ಜಿಲ್ಲೆ ಇದೆ. ಜಿಲ್ಲೆಯ ರೈತರು ಕೃಷಿಗೆ ಮಳೆಯನ್ನೇ ನಂಬಿದ್ದು, ವರ್ಷದಲ್ಲಿ ಒಂದು ಬಾರಿ ಭತ್ತ ಬೆಳೆಯುತ್ತಾರೆ.</p>.<p>‘ರಾಷ್ಟ್ರೀಯ ಬೀಜ ನಿಗಮದಿಂದ ಉತ್ತಮ ಗುಣಮಟ್ದದ ರಾಗಿ ಖರೀದಿಸಿ, ಬಿತ್ತನೆ ಆರಂಭಿಸಲಾಯಿತು’ ಎಂದು ಸುಶಾಂತ್ ಸುದ್ದಿಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.</p>.<p>‘ಆರಂಭದಲ್ಲಿ 1,600 ಎಕರೆ ಪ್ರದೇಶದಲ್ಲಿ ರಾಗಿ ಬಿತ್ತನೆ ಮಾಡಲಾಗಿತ್ತು. ಕ್ರಮೇಣ ಬಿತ್ತನೆ ಪ್ರದೇಶ 3,600 ಎಕರೆಗೆ ಏರಿಕೆಯಾಗಿದೆ. ಒಟ್ಟು ಇಳುವರಿ ಪ್ರಮಾಣದಲ್ಲಿ ಶೇ 300ರಷ್ಟು ಹೆಚ್ಚಳ ಕಂಡುಬಂದಿದೆ’ ಎಂದು ವಿವರಿಸಿದ್ದಾರೆ.</p>.<p>‘ರಾಗಿ ಕೃಷಿಯಲ್ಲಿನ ಈ ಯಶೋಗಾಥೆಯ ಸಂಪೂರ್ಣ ‘ಶ್ರೇಯ ಸಖಿ ಮಂಡಲ ಸಮೂಹ’ ಎಂಬ ಮಹಿಳಾ ಸ್ವಸಹಾಯ ಗುಂಪಿಗೆ ಸೇರಬೇಕು. ಈ ಸಂಘಟನೆ ದೊಡ್ಡ ಪ್ರಮಾಣದಲ್ಲಿ ರಾಗಿಯನ್ನು ಖರೀದಿಸುತ್ತಿದೆ’ ಎಂದು ಹೇಳಿದ್ದಾರೆ.</p>.<p>‘ನಾವು ರಾಗಿ ಸಂಸ್ಕರಣಾ ಘಟಕವನ್ನು ಸ್ಥಾಪಿಸಿದ್ದು, ಇದು ಜಾರ್ಖಂಡ್ದಲ್ಲಿಯೇ ಮೊದಲ ಘಟಕವಾಗಿದೆ. ಜಿಲ್ಲೆಯಲ್ಲಿ ಕೃಷಿ ಆಧಾರಿತ ಉದ್ದಿಮೆಗಳನ್ನು ಸ್ಥಾಪಿಸಿ, ಅವುಗಳ ಮೂಲಕ ರಾಗಿ ಲಡ್ಡು, ಭುಜಿಯಾದಂತಹ ತಿನಿಸುಗಳನ್ನು ಉತ್ಪಾದನೆ ಮಾಡಲಾಗುತ್ತಿದೆ’.</p>.<p>‘ರಾಗಿ ಬಳಸಿ ತಯಾರಿಸುವ ಉತ್ಪನ್ನಗಳು ಪ್ರೊಟೀನ್, ಕ್ಯಾಲ್ಸಿಯಂ ಹಾಗೂ ಕಬ್ಬಿಣಾಂಶಗಳಿಂದ ಕೂಡಿರುತ್ತವೆ. ಇವು ಅಪೌಷ್ಟಿಕತೆ ಹಾಗೂ ರಕ್ತಹೀನತೆ ಸಮಸ್ಯೆ ನಿವಾರಣೆಗೆ ನೆರವಾಗುತ್ತವೆ’ ಎಂದು ಸುಶಾಂತ್ ಗೌರವ್ ವಿವರಿಸಿದ್ದಾರೆ.</p>.<p>‘ರಾಗಿ ಸಂಸ್ಕರಣೆ ಘಟಕಗಳನ್ನು ಮಹಿಳೆಯರೇ ನಡೆಸುತ್ತಿದ್ದಾರೆ. ದಿನಕ್ಕೆ ಒಂದು ಟನ್ನಷ್ಟು ರಾಗಿ ಹಿಟ್ಟು, 300 ಪಾಕೆಟ್ಗಳಷ್ಟು ರಾಗಿ ಲಡ್ಡು, ರಾಗಿಯಿಂದ ಮಾಡಿದ ತಿನಿಸುಗಳ 200 ಪಾಕೆಟ್ಗಳನ್ನು ‘ಜೋಹರ್ ರಾಗಿ’ ‘ಬ್ರ್ಯಾಂಡ್ನಡಿ ಉತ್ಪಾದಿಸಲಾಗುತ್ತದೆ’ ಎಂದು ಯಶಸ್ಸಿನ ಕಥೆಯನ್ನು ವಿವರಿಸಿದ್ದಾರೆ.</p>.<p>‘ರಾಗಿ ಕೃಷಿಯಲ್ಲಿನ ಈ ಯಶಸ್ಸಿನಿಂದ ಪ್ರೇರಿತರಾಗಿರುವ ಸಾಕಷ್ಟು ಜನ ರೈತರು. ಈ ಧಾನ್ಯದ ಬೇಸಾಯಕ್ಕೆ ಮುಂದೆ ಬರುತ್ತಿದ್ದಾರೆ. ಎರಡೇ ವರ್ಷಗಳಲ್ಲಿ ಈ ಬದಲಾವಣೆ ಕಂಡುಬಂದಿದೆ’ ಎಂದು ಹೇಳಿದ್ದಾರೆ.</p>.<p>ಪಸರಿಸಿದ ಖ್ಯಾತಿ: ಗುಮ್ಲಾ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ಸುಶಾಂತ್ ಗೌರವ್ ಅವರು ಮಾಡಿರುವ ಈ ಕ್ರಾಂತಿಯ ಖ್ಯಾತಿ ದೂರದ ಹಾರ್ವರ್ಡ್ ವಿಶ್ವವಿದ್ಯಾಲಯವನ್ನೂ ತಲುಪಿದೆ.</p>.<p>ಕೌಶಲ ಅಭಿವೃದ್ಧಿ ಸಚಿವಾಲಯದ ‘ಮಹಾತ್ಮ ಗಾಂಧಿ ರಾಷ್ಡ್ರೀಯ ಫೆಲೊ’ ಆಗಿರುವ ಅವಿನಾಶ್ ಕುಮಾರ್ ಅವರು ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲ್ನಲ್ಲಿ, ಈ ಕುರಿತು ಅಧ್ಯಯನ ವರದಿ ಮಂಡಿಸಿದ್ದಾರೆ. ಈ ‘ಗುಮ್ಲಾ ಮಾದರಿ’ ಕುರಿತು ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲ್ ಅಧ್ಯಯನ ಕೈಗೊಂಡಿದ್ದು, ಈ ‘ಮೌನ ಕ್ರಾಂತಿ’ಯ ಕುರಿತು ವಿಶ್ವದ ಇತರ ಬ್ಯುಸಿನೆಸ್ ಸ್ಕೂಲ್ಗಳಿಗೆ ಮಾಹಿತಿ ನೀಡಲಿದೆ. ಅಧಿಕಾರಿಗಳಿಗೆ ತರಬೇತಿ ನೀಡಲು ಈ ಅಧ್ಯಯನ ವರದಿಯನ್ನು ಬಳಸಿಕೊಳ್ಳಲಾಗುತ್ತದೆ</p>.<p>ಮುಖ್ಯಾಂಶಗಳು</p>.<p>ಇದೇ ಮೊದಲ ಬಾರಿಗೆ ಜಾರ್ಖಂಡನ ಜಿಲ್ಲೆಯೊಂದು ಪ್ರಶಸ್ತಿಗೆ ಆಯ್ಕೆ</p>.<p>ಅಪೌಷ್ಟಿಕತೆ: 400 ಮಾದರಿ ಅಂಗನವಾಡಿಗಳ ಮೂಲಕ ಮೇಲ್ವಿಚಾರಣೆ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗುಮ್ಲಾ, ಜಾರ್ಖಂಡ:</strong> ವಿಪರೀತ ಬಡತನ, ನಕ್ಸಲರ ಹಾವಳಿಯಿಂದ ತತ್ತರಿಸಿದ್ದ ಈ ಜಿಲ್ಲೆ ಈಗ ಸದ್ದಿಲ್ಲದೇ ನಡೆಯುತ್ತಿರುವ ‘ರಾಗಿ ಕೃಷಿ’ಯಿಂದ ದೇಶದ ಗಮನ ಸೆಳೆಯುತ್ತಿದೆ.</p>.<p>ರಾಗಿ ಬೆಳೆಯುವ ಪ್ರದೇಶವು ಕ್ರಮೇಣ ಹೆಚ್ಚಾಗುತ್ತಿದ್ದು, ರಾಗಿ ಬಳಸಿ ಮಾಡಿದ ಪೌಷ್ಟಿಕ ಪದಾರ್ಥಗಳು ಜಿಲ್ಲೆಯ ಮಕ್ಕಳು, ಮಹಿಳೆಯರಲ್ಲಿನ ಅಪೌಷ್ಟಿಕತೆ ಸಮಸ್ಯೆ ನಿವಾರಣೆಗೂ ನೆರವಾಗುತ್ತಿದೆ.</p>.<p>ಈ ಮೌನ ಕ್ರಾಂತಿ, ಯುವ ಜಿಲ್ಲಾಧಿಕಾರಿಯಾಗಿರುವ ಸುಶಾಂತ್ ಗೌರವ ಅವರ ಕಾಳಜಿ, ಪರಿಶ್ರಮದ ಫಲ.</p>.<p>ಇವರ ಕಾರ್ಯವನ್ನು ಗುರುತಿಸಿರುವ ಸರ್ಕಾರ, ಇವರನ್ನು ‘ಸಾರ್ವಜನಿಕ ಆಡಳಿತದಲ್ಲಿ ಉತ್ಕೃಷ್ಟ ಸೇವೆಗಾಗಿ ಪ್ರಧಾನ ಮಂತ್ರಿಗಳ ಪ್ರಶಸ್ತಿಗೆ’ ಆಯ್ಕೆ ಮಾಡಿದೆ. ನವದೆಹಲಿಯ ವಿಜ್ಞಾನ ಭವನದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಸುಶಾಂತ್ ಅವರಿಗೆ ಈ ಪುರಸ್ಕಾರವನ್ನು ಪ್ರದಾನ ಮಾಡಲಾಗಿದೆ.</p>.<p>‘ಮಹತ್ವಾಕಾಂಕ್ಷೆ ಜಿಲ್ಲೆ ಯೋಜನೆ ಮೂಲಕ ಸಮಗ್ರ ಅಭಿವೃದ್ಧಿ’ ವಿಭಾಗದಡಿ ಗುಮ್ಲಾ ಜಿಲ್ಲೆಯನ್ನು ಆಯ್ಕೆ ಮಾಡಲಾಗಿದೆ.</p>.<p>ಮಹದಾಸೆ: ಜಿಲ್ಲೆಯಲ್ಲಿ ರಾಗಿ ಕೃಷಿಗೆ ಮತ್ತಷ್ಟು ಉತ್ತೇಜನ ನೀಡಬೇಕು. ರಾಗಿ ಬೆಳೆಯುವ ಪ್ರದೇಶವನ್ನು ವಿಸ್ತರಿಸಬೇಕು. ಆ ಮೂಲಕ ಗುಮ್ಲಾ ಜಿಲ್ಲೆಯನ್ನು ‘ಈಶಾನ್ಯ ಭಾರತದ ರಾಗಿ ರಾಜಧಾನಿ’ಯನ್ನಾಗಿ ಮಾಡಬೇಕು ಎಂಬುದೇ ನನ್ನ ಗುರಿ ಎನ್ನುತ್ತಾರೆ ಸುಶಾಂತ್ ಗೌರವ್.</p>.<p>ರಾಜಧಾನಿ ರಾಂಚಿಯಿಂದ 100 ಕಿ.ಮೀ. ದೂರದಲ್ಲಿ ಗುಮ್ಲಾ ಜಿಲ್ಲೆ ಇದೆ. ಜಿಲ್ಲೆಯ ರೈತರು ಕೃಷಿಗೆ ಮಳೆಯನ್ನೇ ನಂಬಿದ್ದು, ವರ್ಷದಲ್ಲಿ ಒಂದು ಬಾರಿ ಭತ್ತ ಬೆಳೆಯುತ್ತಾರೆ.</p>.<p>‘ರಾಷ್ಟ್ರೀಯ ಬೀಜ ನಿಗಮದಿಂದ ಉತ್ತಮ ಗುಣಮಟ್ದದ ರಾಗಿ ಖರೀದಿಸಿ, ಬಿತ್ತನೆ ಆರಂಭಿಸಲಾಯಿತು’ ಎಂದು ಸುಶಾಂತ್ ಸುದ್ದಿಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.</p>.<p>‘ಆರಂಭದಲ್ಲಿ 1,600 ಎಕರೆ ಪ್ರದೇಶದಲ್ಲಿ ರಾಗಿ ಬಿತ್ತನೆ ಮಾಡಲಾಗಿತ್ತು. ಕ್ರಮೇಣ ಬಿತ್ತನೆ ಪ್ರದೇಶ 3,600 ಎಕರೆಗೆ ಏರಿಕೆಯಾಗಿದೆ. ಒಟ್ಟು ಇಳುವರಿ ಪ್ರಮಾಣದಲ್ಲಿ ಶೇ 300ರಷ್ಟು ಹೆಚ್ಚಳ ಕಂಡುಬಂದಿದೆ’ ಎಂದು ವಿವರಿಸಿದ್ದಾರೆ.</p>.<p>‘ರಾಗಿ ಕೃಷಿಯಲ್ಲಿನ ಈ ಯಶೋಗಾಥೆಯ ಸಂಪೂರ್ಣ ‘ಶ್ರೇಯ ಸಖಿ ಮಂಡಲ ಸಮೂಹ’ ಎಂಬ ಮಹಿಳಾ ಸ್ವಸಹಾಯ ಗುಂಪಿಗೆ ಸೇರಬೇಕು. ಈ ಸಂಘಟನೆ ದೊಡ್ಡ ಪ್ರಮಾಣದಲ್ಲಿ ರಾಗಿಯನ್ನು ಖರೀದಿಸುತ್ತಿದೆ’ ಎಂದು ಹೇಳಿದ್ದಾರೆ.</p>.<p>‘ನಾವು ರಾಗಿ ಸಂಸ್ಕರಣಾ ಘಟಕವನ್ನು ಸ್ಥಾಪಿಸಿದ್ದು, ಇದು ಜಾರ್ಖಂಡ್ದಲ್ಲಿಯೇ ಮೊದಲ ಘಟಕವಾಗಿದೆ. ಜಿಲ್ಲೆಯಲ್ಲಿ ಕೃಷಿ ಆಧಾರಿತ ಉದ್ದಿಮೆಗಳನ್ನು ಸ್ಥಾಪಿಸಿ, ಅವುಗಳ ಮೂಲಕ ರಾಗಿ ಲಡ್ಡು, ಭುಜಿಯಾದಂತಹ ತಿನಿಸುಗಳನ್ನು ಉತ್ಪಾದನೆ ಮಾಡಲಾಗುತ್ತಿದೆ’.</p>.<p>‘ರಾಗಿ ಬಳಸಿ ತಯಾರಿಸುವ ಉತ್ಪನ್ನಗಳು ಪ್ರೊಟೀನ್, ಕ್ಯಾಲ್ಸಿಯಂ ಹಾಗೂ ಕಬ್ಬಿಣಾಂಶಗಳಿಂದ ಕೂಡಿರುತ್ತವೆ. ಇವು ಅಪೌಷ್ಟಿಕತೆ ಹಾಗೂ ರಕ್ತಹೀನತೆ ಸಮಸ್ಯೆ ನಿವಾರಣೆಗೆ ನೆರವಾಗುತ್ತವೆ’ ಎಂದು ಸುಶಾಂತ್ ಗೌರವ್ ವಿವರಿಸಿದ್ದಾರೆ.</p>.<p>‘ರಾಗಿ ಸಂಸ್ಕರಣೆ ಘಟಕಗಳನ್ನು ಮಹಿಳೆಯರೇ ನಡೆಸುತ್ತಿದ್ದಾರೆ. ದಿನಕ್ಕೆ ಒಂದು ಟನ್ನಷ್ಟು ರಾಗಿ ಹಿಟ್ಟು, 300 ಪಾಕೆಟ್ಗಳಷ್ಟು ರಾಗಿ ಲಡ್ಡು, ರಾಗಿಯಿಂದ ಮಾಡಿದ ತಿನಿಸುಗಳ 200 ಪಾಕೆಟ್ಗಳನ್ನು ‘ಜೋಹರ್ ರಾಗಿ’ ‘ಬ್ರ್ಯಾಂಡ್ನಡಿ ಉತ್ಪಾದಿಸಲಾಗುತ್ತದೆ’ ಎಂದು ಯಶಸ್ಸಿನ ಕಥೆಯನ್ನು ವಿವರಿಸಿದ್ದಾರೆ.</p>.<p>‘ರಾಗಿ ಕೃಷಿಯಲ್ಲಿನ ಈ ಯಶಸ್ಸಿನಿಂದ ಪ್ರೇರಿತರಾಗಿರುವ ಸಾಕಷ್ಟು ಜನ ರೈತರು. ಈ ಧಾನ್ಯದ ಬೇಸಾಯಕ್ಕೆ ಮುಂದೆ ಬರುತ್ತಿದ್ದಾರೆ. ಎರಡೇ ವರ್ಷಗಳಲ್ಲಿ ಈ ಬದಲಾವಣೆ ಕಂಡುಬಂದಿದೆ’ ಎಂದು ಹೇಳಿದ್ದಾರೆ.</p>.<p>ಪಸರಿಸಿದ ಖ್ಯಾತಿ: ಗುಮ್ಲಾ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ಸುಶಾಂತ್ ಗೌರವ್ ಅವರು ಮಾಡಿರುವ ಈ ಕ್ರಾಂತಿಯ ಖ್ಯಾತಿ ದೂರದ ಹಾರ್ವರ್ಡ್ ವಿಶ್ವವಿದ್ಯಾಲಯವನ್ನೂ ತಲುಪಿದೆ.</p>.<p>ಕೌಶಲ ಅಭಿವೃದ್ಧಿ ಸಚಿವಾಲಯದ ‘ಮಹಾತ್ಮ ಗಾಂಧಿ ರಾಷ್ಡ್ರೀಯ ಫೆಲೊ’ ಆಗಿರುವ ಅವಿನಾಶ್ ಕುಮಾರ್ ಅವರು ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲ್ನಲ್ಲಿ, ಈ ಕುರಿತು ಅಧ್ಯಯನ ವರದಿ ಮಂಡಿಸಿದ್ದಾರೆ. ಈ ‘ಗುಮ್ಲಾ ಮಾದರಿ’ ಕುರಿತು ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲ್ ಅಧ್ಯಯನ ಕೈಗೊಂಡಿದ್ದು, ಈ ‘ಮೌನ ಕ್ರಾಂತಿ’ಯ ಕುರಿತು ವಿಶ್ವದ ಇತರ ಬ್ಯುಸಿನೆಸ್ ಸ್ಕೂಲ್ಗಳಿಗೆ ಮಾಹಿತಿ ನೀಡಲಿದೆ. ಅಧಿಕಾರಿಗಳಿಗೆ ತರಬೇತಿ ನೀಡಲು ಈ ಅಧ್ಯಯನ ವರದಿಯನ್ನು ಬಳಸಿಕೊಳ್ಳಲಾಗುತ್ತದೆ</p>.<p>ಮುಖ್ಯಾಂಶಗಳು</p>.<p>ಇದೇ ಮೊದಲ ಬಾರಿಗೆ ಜಾರ್ಖಂಡನ ಜಿಲ್ಲೆಯೊಂದು ಪ್ರಶಸ್ತಿಗೆ ಆಯ್ಕೆ</p>.<p>ಅಪೌಷ್ಟಿಕತೆ: 400 ಮಾದರಿ ಅಂಗನವಾಡಿಗಳ ಮೂಲಕ ಮೇಲ್ವಿಚಾರಣೆ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>