‘ಕಿಕ್ಬ್ಯಾಕ್ ಬೇಡಿಕೆಯಲ್ಲೂ ಭಾಗಿ’
‘ಕೇಜ್ರಿವಾಲ್ ಅವರು ಕಿಕ್ಬ್ಯಾಕ್ ಬೇಡಿಕೆಯಲ್ಲೂ ತೊಡಗಿಸಿಕೊಂಡಿದ್ದಾರೆ. ಅದು ಅಪರಾಧದ ಮತ್ತಷ್ಟು ಆದಾಯವನ್ನು ಗಳಿಸಿದೆ. ಹೀಗಾಗಿ ಎಎಪಿ ಮಾತ್ರವಲ್ಲದೇ ಕೇಜ್ರಿವಾಲ್ ಅವರೂ ಪಿಎಂಎಲ್ಎ ಸೆಕ್ಷನ್ 4ರ ಅಡಿ ಶಿಕ್ಷಾರ್ಹ ಅಪರಾಧ ಎಸಗಿದ್ದಾರೆ. ಅಲ್ಲದೆ ಅವರು ಪಿಎಂಎಲ್ಎ ಸೆಕ್ಷನ್ 70ರ ಅಡಿಯಲ್ಲೂ ಕಾನೂನು ಕ್ರಮ ಮತ್ತು ಶಿಕ್ಷೆಗೆ ಗುರಿಯಾಗುತ್ತಾರೆ’ ಎಂದು ಜಾರಿ ನಿರ್ದೇಶನಾಲಯ ಹೇಳಿದೆ. ‘ದೆಹಲಿಯ ಮುಖ್ಯಮಂತ್ರಿ ಸ್ಥಾನವನ್ನು ಬಳಸಿಕೊಂಡು ಅವರು ಹಣ ಅಕ್ರಮ ವರ್ಗಾವಣೆಯನ್ನು ಸುಲಭಗೊಳಿಸಿದರು‘ ಎಂದು ಹೇಳಿರುವ ಜಾರಿ ನಿರ್ದೇಶನಾಲಯ ತನ್ನ ಬಂಧನವನ್ನು ಪ್ರಶ್ನಿಸಿ ಕೇಜ್ರಿವಾಲ್ ಸಲ್ಲಿಸಿರುವ ಅರ್ಜಿಯಲ್ಲಿ ಅರ್ಹತೆಯ ಅಂಶಗಳಿಲ್ಲವಾಗಿದ್ದು ವಜಾಗೊಳಿಸಲು ಸೂಕ್ತವಾಗಿದೆ ಎಂದು ಹೇಳಿದೆ.