<p><strong>ಚೆನ್ನೈ</strong>: ಮಾಜಿ ಮುಖ್ಯಮಂತ್ರಿ ಸಿ.ಎನ್. ಅಣ್ಣಾದೊರೈ ಅವರ ಜನ್ಮ ದಿನಾಚರಣೆಯಂದು ಎಐಎಡಿಎಂಕೆ ಬಣಗಳ ನಾಯಕರು ವಿಲೀನಕ್ಕೆ ಧ್ವನಿ ಎತ್ತಿದ್ದಾರೆ.</p><p>ಮುಂದಿನ ವರ್ಷದ ವಿಧಾನಸಭಾ ಚುನಾವಣೆಗೆ ಮುನ್ನ ಎಐಎಡಿಎಂಕೆ ಬಣಗಳ ವಿಲೀನಕ್ಕೆ ಎಐಎಡಿಎಂಕೆಯ ಪದಚ್ಯುತ ಮಧ್ಯಂತರ ಪ್ರಧಾನ ಕಾರ್ಯದರ್ಶಿ ವಿ.ಕೆ. ಶಶಿಕಲಾ ಮನವಿ ಮಾಡಿದ್ದಾರೆ.</p><p>ಪಕ್ಷದ ಕಾರ್ಯಕರ್ತರು ಒಗ್ಗಟ್ಟಿನ ಎಐಎಡಿಎಂಕೆಯನ್ನು ನೋಡಲು ಬಯಸುತ್ತಾರೆ. ಪಕ್ಷದ ಚುನಾವಣಾ ನಿರೀಕ್ಷೆಗಳು ಅದರ ವಿಲೀನದ ಮೇಲೆ ಅವಲಂಬಿತವಾಗಿದೆ ಎಂದು ಅವರು ಪುನರುಚ್ಚರಿಸಿದರು.</p><p>2026ರ ವಿಧಾನಸಭೆ ಚುನಾವಣೆಗೂ ಮುನ್ನ ಎಐಎಡಿಎಂಕೆಯ ವಿವಿಧ ಬಣಗಳು ಒಂದುಗೂಡಬೇಕೆಂಬುದು ಎಲ್ಲರ ಬಯಕೆಯಾಗಿದೆ. ನನಗೂ ಅದು ಆಗಬೇಕು ಎನಿಸುತ್ತದೆ ಎಂದು ಶಶಿಕಲಾ ಪತ್ರಕರ್ತರಿಗೆ ತಿಳಿಸಿದ್ದಾರೆ.</p><p> ವಿಲೀನ ಸಾಧ್ಯತೆಗಳ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಶಿಕಲಾ, ತಿರಸ್ಕರಿಸುವುದು ಅತ್ಯಂತ ಸುಲಭದ ಕೆಲಸ. ಆದರೆ, ಎಲ್ಲರನ್ನೂ ಒಗ್ಗೂಡಿಸುವುದು ಕಷ್ಟದ ಕೆಲಸ. ಅದಕ್ಕೆ ಸ್ವಲ್ಪ ಸಮಯವಾಗುತ್ತದೆ ಎಂದಿದ್ದಾರೆ.</p><p>ಡಿಎಂಕೆ ಆಡಳಿತ ಅಂತ್ಯಗೊಳಿಸುವುದು ಮತ್ತು ಅಮ್ಮ(ಜಯಲಲಿತಾ) ಮಾದರಿ ಆಡಳಿತವನ್ನು ಮರುಸ್ಥಾಪಿಸುವುದು ಎಐಎಡಿಎಂಕೆ ಗುರಿಯಾಗಿದೆ. ನನ್ನ ಕೆಲಸ ಪಕ್ಷದ ಒಗ್ಗೂಡುವಿಕೆ ಮತ್ತು ಗೆಲುವು ಸಾಧಿಸುವತ್ತ ಆಗಿರುತ್ತದೆ ಎಂದಿದ್ದಾರೆ.</p><p>ಹಿಂದೆ ಆಗಿದ್ದಾಯ್ತು.. ಮುಂದೆ ಒಳ್ಳೆಯ ಉದ್ದೇಶದೊಂದಿಗೆ ಮುನ್ನಡೆಯೋಣ ಎಂದು ಅಣ್ಣಾದೊರೈ ಚಿತ್ರವಿರುವ ಪಕ್ಷದ ಧ್ವಜವನ್ನು ಹಿಡಿದು ಶಶಿಕಲಾ ಹೇಳಿದರು.</p><p> ಎಐಎಡಿಎಂಕೆ ಹಿರಿಯ ನಾಯಕ ಕೆ.ಎ. ಸೆಂಗೋಟ್ಟೈಯನ್ ಸಹ ಇದೇ ಮಾತುಗಳನ್ನಾಡಿದ್ದು, ಇಂದು ನನಗೆ ಅಣ್ಣಾದೊರೈಅವರ ಬಂಗಾರದ ಮಾತು ನೆನಪಾಗುತ್ತಿದೆ. ಅದೇನೆಂದರೆ, ನಾವು ಪರಸ್ಪರ ಆಗಿರುವುದನ್ನು ಮರೆತು ಕ್ಷಮಿಸೋಣ. ನಾವು ಮುಂದುವರಿಯಬೇಕಾದ ಮಾರ್ಗ ಅದು ಎಂದಿದ್ದಾರೆ.</p><p>‘ಎಐಎಡಿಎಂಕೆ ಬಲಗೊಳ್ಳಲು ಒಗ್ಗೂಡಬೇಕು ಎಂಬ ನನ್ನ ಅಭಿಪ್ರಾಯವನ್ನು ಸೆಪ್ಟೆಂಬರ್ 5ರಂದು ಈರೋಡ್ನಲ್ಲಿ ವರದಿಗಾರರಿಗೆ ತಿಳಿಸಿದ್ದೇನೆ’ ಎಂದು ಸೆಂಗೋಟ್ಟೈಯನ್ ಹೇಳಿದರು. ಪಕ್ಷದ ನಾಯಕರಾದ ಎಂಜಿಆರ್ ಮತ್ತು ಜಯಲಲಿತಾ ಅವರ ಕನಸನ್ನು ನನಸಾಗಿಸುವ ಅಗತ್ಯತೆಯ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದೇನೆ ಎಂದರು.</p><p>ಈ ಮಧ್ಯೆ, ಅಮ್ಮ ಮಕ್ಕಳ್ ಮುನ್ನೇತ್ರ ಕಾಳಗಂ ಪ್ರಧಾನ ಕಾರ್ಯದರ್ಶಿ, ಎಐಎಡಿಎಂಕೆಯ ಉಚ್ಚಾಟಿತ ನಾಯಕ ಟಿಟಿವಿ ದಿನಕರನ್, 2026ರ ಚುನಾವಣೆಯಲ್ಲಿ ಪಳನಿಸ್ವಾಮಿಯನ್ನು ಮುಖ್ಯಮಂತ್ರಿ ಎಂದು ಜನ ಒಪ್ಪಿಕೊಳ್ಳುವ ಸಾಧ್ಯತೆ ಇಲ್ಲ ಎಂದರು.</p> .ಮೊಹಮ್ಮದ್ ಸಿರಾಜ್ಗೆ ಆಗಸ್ಟ್ ತಿಂಗಳ ಐಸಿಸಿ ತಿಂಗಳ ಆಟಗಾರ ಪ್ರಶಸ್ತಿ.Asia Cup: ಭಾರತ–ಪಾಕ್ ಪಂದ್ಯದ ವೇಳೆ ₹1.5 ಲಕ್ಷ ಕೋಟಿ ಜೂಜು; ರಾವುತ್.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚೆನ್ನೈ</strong>: ಮಾಜಿ ಮುಖ್ಯಮಂತ್ರಿ ಸಿ.ಎನ್. ಅಣ್ಣಾದೊರೈ ಅವರ ಜನ್ಮ ದಿನಾಚರಣೆಯಂದು ಎಐಎಡಿಎಂಕೆ ಬಣಗಳ ನಾಯಕರು ವಿಲೀನಕ್ಕೆ ಧ್ವನಿ ಎತ್ತಿದ್ದಾರೆ.</p><p>ಮುಂದಿನ ವರ್ಷದ ವಿಧಾನಸಭಾ ಚುನಾವಣೆಗೆ ಮುನ್ನ ಎಐಎಡಿಎಂಕೆ ಬಣಗಳ ವಿಲೀನಕ್ಕೆ ಎಐಎಡಿಎಂಕೆಯ ಪದಚ್ಯುತ ಮಧ್ಯಂತರ ಪ್ರಧಾನ ಕಾರ್ಯದರ್ಶಿ ವಿ.ಕೆ. ಶಶಿಕಲಾ ಮನವಿ ಮಾಡಿದ್ದಾರೆ.</p><p>ಪಕ್ಷದ ಕಾರ್ಯಕರ್ತರು ಒಗ್ಗಟ್ಟಿನ ಎಐಎಡಿಎಂಕೆಯನ್ನು ನೋಡಲು ಬಯಸುತ್ತಾರೆ. ಪಕ್ಷದ ಚುನಾವಣಾ ನಿರೀಕ್ಷೆಗಳು ಅದರ ವಿಲೀನದ ಮೇಲೆ ಅವಲಂಬಿತವಾಗಿದೆ ಎಂದು ಅವರು ಪುನರುಚ್ಚರಿಸಿದರು.</p><p>2026ರ ವಿಧಾನಸಭೆ ಚುನಾವಣೆಗೂ ಮುನ್ನ ಎಐಎಡಿಎಂಕೆಯ ವಿವಿಧ ಬಣಗಳು ಒಂದುಗೂಡಬೇಕೆಂಬುದು ಎಲ್ಲರ ಬಯಕೆಯಾಗಿದೆ. ನನಗೂ ಅದು ಆಗಬೇಕು ಎನಿಸುತ್ತದೆ ಎಂದು ಶಶಿಕಲಾ ಪತ್ರಕರ್ತರಿಗೆ ತಿಳಿಸಿದ್ದಾರೆ.</p><p> ವಿಲೀನ ಸಾಧ್ಯತೆಗಳ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಶಿಕಲಾ, ತಿರಸ್ಕರಿಸುವುದು ಅತ್ಯಂತ ಸುಲಭದ ಕೆಲಸ. ಆದರೆ, ಎಲ್ಲರನ್ನೂ ಒಗ್ಗೂಡಿಸುವುದು ಕಷ್ಟದ ಕೆಲಸ. ಅದಕ್ಕೆ ಸ್ವಲ್ಪ ಸಮಯವಾಗುತ್ತದೆ ಎಂದಿದ್ದಾರೆ.</p><p>ಡಿಎಂಕೆ ಆಡಳಿತ ಅಂತ್ಯಗೊಳಿಸುವುದು ಮತ್ತು ಅಮ್ಮ(ಜಯಲಲಿತಾ) ಮಾದರಿ ಆಡಳಿತವನ್ನು ಮರುಸ್ಥಾಪಿಸುವುದು ಎಐಎಡಿಎಂಕೆ ಗುರಿಯಾಗಿದೆ. ನನ್ನ ಕೆಲಸ ಪಕ್ಷದ ಒಗ್ಗೂಡುವಿಕೆ ಮತ್ತು ಗೆಲುವು ಸಾಧಿಸುವತ್ತ ಆಗಿರುತ್ತದೆ ಎಂದಿದ್ದಾರೆ.</p><p>ಹಿಂದೆ ಆಗಿದ್ದಾಯ್ತು.. ಮುಂದೆ ಒಳ್ಳೆಯ ಉದ್ದೇಶದೊಂದಿಗೆ ಮುನ್ನಡೆಯೋಣ ಎಂದು ಅಣ್ಣಾದೊರೈ ಚಿತ್ರವಿರುವ ಪಕ್ಷದ ಧ್ವಜವನ್ನು ಹಿಡಿದು ಶಶಿಕಲಾ ಹೇಳಿದರು.</p><p> ಎಐಎಡಿಎಂಕೆ ಹಿರಿಯ ನಾಯಕ ಕೆ.ಎ. ಸೆಂಗೋಟ್ಟೈಯನ್ ಸಹ ಇದೇ ಮಾತುಗಳನ್ನಾಡಿದ್ದು, ಇಂದು ನನಗೆ ಅಣ್ಣಾದೊರೈಅವರ ಬಂಗಾರದ ಮಾತು ನೆನಪಾಗುತ್ತಿದೆ. ಅದೇನೆಂದರೆ, ನಾವು ಪರಸ್ಪರ ಆಗಿರುವುದನ್ನು ಮರೆತು ಕ್ಷಮಿಸೋಣ. ನಾವು ಮುಂದುವರಿಯಬೇಕಾದ ಮಾರ್ಗ ಅದು ಎಂದಿದ್ದಾರೆ.</p><p>‘ಎಐಎಡಿಎಂಕೆ ಬಲಗೊಳ್ಳಲು ಒಗ್ಗೂಡಬೇಕು ಎಂಬ ನನ್ನ ಅಭಿಪ್ರಾಯವನ್ನು ಸೆಪ್ಟೆಂಬರ್ 5ರಂದು ಈರೋಡ್ನಲ್ಲಿ ವರದಿಗಾರರಿಗೆ ತಿಳಿಸಿದ್ದೇನೆ’ ಎಂದು ಸೆಂಗೋಟ್ಟೈಯನ್ ಹೇಳಿದರು. ಪಕ್ಷದ ನಾಯಕರಾದ ಎಂಜಿಆರ್ ಮತ್ತು ಜಯಲಲಿತಾ ಅವರ ಕನಸನ್ನು ನನಸಾಗಿಸುವ ಅಗತ್ಯತೆಯ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದೇನೆ ಎಂದರು.</p><p>ಈ ಮಧ್ಯೆ, ಅಮ್ಮ ಮಕ್ಕಳ್ ಮುನ್ನೇತ್ರ ಕಾಳಗಂ ಪ್ರಧಾನ ಕಾರ್ಯದರ್ಶಿ, ಎಐಎಡಿಎಂಕೆಯ ಉಚ್ಚಾಟಿತ ನಾಯಕ ಟಿಟಿವಿ ದಿನಕರನ್, 2026ರ ಚುನಾವಣೆಯಲ್ಲಿ ಪಳನಿಸ್ವಾಮಿಯನ್ನು ಮುಖ್ಯಮಂತ್ರಿ ಎಂದು ಜನ ಒಪ್ಪಿಕೊಳ್ಳುವ ಸಾಧ್ಯತೆ ಇಲ್ಲ ಎಂದರು.</p> .ಮೊಹಮ್ಮದ್ ಸಿರಾಜ್ಗೆ ಆಗಸ್ಟ್ ತಿಂಗಳ ಐಸಿಸಿ ತಿಂಗಳ ಆಟಗಾರ ಪ್ರಶಸ್ತಿ.Asia Cup: ಭಾರತ–ಪಾಕ್ ಪಂದ್ಯದ ವೇಳೆ ₹1.5 ಲಕ್ಷ ಕೋಟಿ ಜೂಜು; ರಾವುತ್.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>