ನವದೆಹಲಿ: ಸಂಸದ ಕುಲದೀಪ್ ರೈ ಶರ್ಮಾ ಹಾಗೂ ಶಾಸಕ ರಾಮಿಂದರ್ ಸಿಂಗ್ ಆವ್ಲಾ ಅವರನ್ನು ಕರ್ನಾಟಕ ಉಸ್ತುವಾರಿ ಕಾರ್ಯದರ್ಶಿಗಳನ್ನಾಗಿ ಕಾಂಗ್ರೆಸ್ ಪಕ್ಷವು ಸೋಮವಾರ ನೇಮಕ ಮಾಡಿದೆ.
ಶರ್ಮಾ ಅವರು ಅಂಡಮಾನ್ ನಿಕೋಬಾರ್ ಲೋಕಸಭೆ ಕ್ಷೇತ್ರ ಪ್ರತಿನಿಧಿಸುತ್ತಿದ್ದು, ಆವ್ಲಾ ಅವರು ಪಂಜಾಬ್ನ ಜಲಾಲಾಬಾದ್ ವಿಧಾನಸಭೆ ಕ್ಷೇತ್ರದ ಶಾಸಕ.
ಈ ಇಬ್ಬರನ್ನೂ ಪಕ್ಷದ ರಾಜ್ಯ ಉಸ್ತುವಾರಿಯಾಗಿರುವ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲಾ ಅವರೊಂದಿಗೆ ಕಾರ್ಯ ನಿರ್ವಹಿಸಲು ಸೂಚಿಸಿ ನೇಮಕ ಮಾಡಲಾಗಿದೆ ಎಂದು ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ತಿಳಿಸಿದ್ದಾರೆ.