<p><strong>ಭುವನೇಶ್ವರ</strong>: ಗಂಭೀರ ಸ್ಥಿತಿಯಲ್ಲಿದ್ದ ಗರ್ಭಿಣಿಗೆ ರಕ್ತದಾನ ಮಾಡುವ ಮೂಲಕ ಒಡಿಶಾ ರಾಜಧಾನಿ ಭುವನೇಶ್ವರದ ಏಮ್ಸ್ ಆಸ್ಪತ್ರೆ ವೈದ್ಯ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.</p>.<p>ಆಸ್ಪತ್ರೆಯ ರಕ್ತ ಪೂರೈಕೆ ವಿಭಾಗದ ವೈದ್ಯ ಡಾ. ದೇಬಶಿಶ್ ಮಿಶ್ರಾ, ಗಂಭೀರ ಸ್ಥಿತಿಯಲ್ಲಿದ್ದ ಗರ್ಭಿಣಿಗೆ ಬಿ–ನೆಗೆಟಿವ್ ರಕ್ತದಾನ ಮಾಡಿದ್ದಾರೆ. ನವೆಂಬರ್ 3 ರಂದು ಈ ಘಟನೆ ನಡೆದಿದ್ದು, ತಡವಾಗಿ ಮಾಹಿತಿ ಹೊರಬಿದ್ದಿದೆ. ನವೆಂಬರ್ 19ರಂದು ಮಹಿಳೆ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ.</p>.<p>ನವೆಂಬರ್ 3ರಂದು ಗರ್ಭಿಣಿಗೆ ತುರ್ತು ರಕ್ತ ಅಗತ್ಯವಿರುವ ಬಗ್ಗೆ ಕರ್ತವ್ಯದಲ್ಲಿದ್ದ ವೈದ್ಯರ ಗಮನಕ್ಕೆ ಬಂದಿದೆ. ಆದರೆ, ಆಕೆಯ ಸಂಬಂಧಿಕರಲ್ಲಿ ಅಗತ್ಯವಿದ್ದ ಮಾದರಿಯ ರಕ್ತ ಪತ್ತೆಯಾಗಿಲ್ಲ. ಈ ಸಂದರ್ಭ ಸ್ವಯಂಪ್ರೇರಿತವಾಗಿ ಮುಂದೆ ಬಂದ ವೈದ್ಯ ದೇಬಶಿಶ್ ಮಿಶ್ರಾ, ರಕ್ತದಾನ ಮಾಡಿ ಮಹಿಳೆಯ ಜೀವ ಉಳಿಸಿದ್ದಾರೆ.</p>.<p>ಈ ಬಗ್ಗೆ ಸೋಮವಾರ ಹೇಳಿಕೆ ಬಿಡುಗಡೆ ಮಾಡಿರುವ ಆಸ್ಪತ್ರೆ, ಆ ದಿನ ಮಹಿಳೆಗೆ ಅಗತ್ಯವಿದ್ದ ಬಿ–ನೆಗೆಟಿವ್ ರಕ್ತವು ರಕ್ತ ನಿಧಿ ಕೇಂದ್ರದಲ್ಲಿ ಲಭ್ಯವಿರಲಿಲ್ಲ ಎಂದು ತಿಳಿಸಿದೆ.</p>.<p>‘ರೋಗಿಗೆ ಅಗತ್ಯವಿದ್ದ ರಕ್ತ ಸಿಗದೆ ಹೋಗಿದ್ದಿದ್ದರೆ, ಆಕೆ ಸಾವಿಗೀಡಾಗುತ್ತಿದ್ದರು’ ಎಂದು ಮಹಿಳೆಗೆ ಚಿಕಿತ್ಸೆ ನೀಡಿದ ಮತ್ತೊಬ್ಬ ವೈದ್ಯರು ತಿಳಿಸಿದ್ದಾರೆ.</p>.<p>ಡಾ. ಮಿಶ್ರಾ ಅವರ ನೆರವನ್ನು ಏಮ್ಸ್ ಆಸ್ಪತ್ರೆ ನಿರ್ದೇಶಕ ಪ್ರೊಫೆಸರ್ ಅಶುತೋಷ್ ಬಿಶ್ವಾಸ್ ಶ್ಲಾಘಿಸಿದ್ದಾರೆ.</p>.<p>ವೈದ್ಯರು ಕೇವಲ ಚಿಕಿತ್ಸೆ ನೀಡುವುದಲ್ಲ. ಅಗತ್ಯವಿರುವವರಿಗೆ ನೆರವು ನೀಡುವ ಚಿನ್ನದಂಥ ಹೃದಯ ಹೊಂದಿರಬೇಕು. ಆ ವಿಷಯದಲ್ಲಿ, ಮಿಶ್ರಾ ಇತರ ವೈದ್ಯರಿಗೆ ಉದಾಹರಣೆಯಾಗಿದ್ದಾರೆ ಎಂದ ಬಿಶ್ವಾಸ್ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಭುವನೇಶ್ವರ</strong>: ಗಂಭೀರ ಸ್ಥಿತಿಯಲ್ಲಿದ್ದ ಗರ್ಭಿಣಿಗೆ ರಕ್ತದಾನ ಮಾಡುವ ಮೂಲಕ ಒಡಿಶಾ ರಾಜಧಾನಿ ಭುವನೇಶ್ವರದ ಏಮ್ಸ್ ಆಸ್ಪತ್ರೆ ವೈದ್ಯ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.</p>.<p>ಆಸ್ಪತ್ರೆಯ ರಕ್ತ ಪೂರೈಕೆ ವಿಭಾಗದ ವೈದ್ಯ ಡಾ. ದೇಬಶಿಶ್ ಮಿಶ್ರಾ, ಗಂಭೀರ ಸ್ಥಿತಿಯಲ್ಲಿದ್ದ ಗರ್ಭಿಣಿಗೆ ಬಿ–ನೆಗೆಟಿವ್ ರಕ್ತದಾನ ಮಾಡಿದ್ದಾರೆ. ನವೆಂಬರ್ 3 ರಂದು ಈ ಘಟನೆ ನಡೆದಿದ್ದು, ತಡವಾಗಿ ಮಾಹಿತಿ ಹೊರಬಿದ್ದಿದೆ. ನವೆಂಬರ್ 19ರಂದು ಮಹಿಳೆ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ.</p>.<p>ನವೆಂಬರ್ 3ರಂದು ಗರ್ಭಿಣಿಗೆ ತುರ್ತು ರಕ್ತ ಅಗತ್ಯವಿರುವ ಬಗ್ಗೆ ಕರ್ತವ್ಯದಲ್ಲಿದ್ದ ವೈದ್ಯರ ಗಮನಕ್ಕೆ ಬಂದಿದೆ. ಆದರೆ, ಆಕೆಯ ಸಂಬಂಧಿಕರಲ್ಲಿ ಅಗತ್ಯವಿದ್ದ ಮಾದರಿಯ ರಕ್ತ ಪತ್ತೆಯಾಗಿಲ್ಲ. ಈ ಸಂದರ್ಭ ಸ್ವಯಂಪ್ರೇರಿತವಾಗಿ ಮುಂದೆ ಬಂದ ವೈದ್ಯ ದೇಬಶಿಶ್ ಮಿಶ್ರಾ, ರಕ್ತದಾನ ಮಾಡಿ ಮಹಿಳೆಯ ಜೀವ ಉಳಿಸಿದ್ದಾರೆ.</p>.<p>ಈ ಬಗ್ಗೆ ಸೋಮವಾರ ಹೇಳಿಕೆ ಬಿಡುಗಡೆ ಮಾಡಿರುವ ಆಸ್ಪತ್ರೆ, ಆ ದಿನ ಮಹಿಳೆಗೆ ಅಗತ್ಯವಿದ್ದ ಬಿ–ನೆಗೆಟಿವ್ ರಕ್ತವು ರಕ್ತ ನಿಧಿ ಕೇಂದ್ರದಲ್ಲಿ ಲಭ್ಯವಿರಲಿಲ್ಲ ಎಂದು ತಿಳಿಸಿದೆ.</p>.<p>‘ರೋಗಿಗೆ ಅಗತ್ಯವಿದ್ದ ರಕ್ತ ಸಿಗದೆ ಹೋಗಿದ್ದಿದ್ದರೆ, ಆಕೆ ಸಾವಿಗೀಡಾಗುತ್ತಿದ್ದರು’ ಎಂದು ಮಹಿಳೆಗೆ ಚಿಕಿತ್ಸೆ ನೀಡಿದ ಮತ್ತೊಬ್ಬ ವೈದ್ಯರು ತಿಳಿಸಿದ್ದಾರೆ.</p>.<p>ಡಾ. ಮಿಶ್ರಾ ಅವರ ನೆರವನ್ನು ಏಮ್ಸ್ ಆಸ್ಪತ್ರೆ ನಿರ್ದೇಶಕ ಪ್ರೊಫೆಸರ್ ಅಶುತೋಷ್ ಬಿಶ್ವಾಸ್ ಶ್ಲಾಘಿಸಿದ್ದಾರೆ.</p>.<p>ವೈದ್ಯರು ಕೇವಲ ಚಿಕಿತ್ಸೆ ನೀಡುವುದಲ್ಲ. ಅಗತ್ಯವಿರುವವರಿಗೆ ನೆರವು ನೀಡುವ ಚಿನ್ನದಂಥ ಹೃದಯ ಹೊಂದಿರಬೇಕು. ಆ ವಿಷಯದಲ್ಲಿ, ಮಿಶ್ರಾ ಇತರ ವೈದ್ಯರಿಗೆ ಉದಾಹರಣೆಯಾಗಿದ್ದಾರೆ ಎಂದ ಬಿಶ್ವಾಸ್ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>