<p>ನವದೆಹಲಿ: ಪತನಗೊಂಡ ಏರ್ಇಂಡಿಯಾ ವಿಮಾನದ ವಿದ್ಯುತ್ ವ್ಯವಸ್ಥೆಯ ವೈಫಲ್ಯದಿಂದಲೂ ಎಂಜಿನ್ಗಳಿಗೆ ಇಂಧನ ಪೂರೈಸುವ ಸ್ವಿಚ್ಗಳು ‘ಕಟ್ ಆಫ್’ ಸ್ಥಿತಿ ತಲುಪಿರಬಹುದು ಎಂದು ಕ್ಯಾಪ್ಟನ್ (ನಿವೃತ್ತ) ಎಹಸಾನ್ ಖಾಲಿದ್ ಅವರು ಬುಧವಾರ ಅಭಿಪ್ರಾಯಪಟ್ಟರು.</p>.<p>ವಿಮಾನ ಅಪಘಾತ ತನಿಖಾ ಬ್ಯೂರೊ (ಎಎಐಬಿ) ತನ್ನ ಪ್ರಾಥಮಿಕ ವರದಿಯಲ್ಲಿ, ‘ವಿಮಾನವು ಟೇಕ್ಆಫ್ ಆದ ಒಂದೇ ಸೆಕೆಂಡ್ನಲ್ಲಿ ಎರಡೂ ಎಂಜಿನ್ಗಳಿಗೆ ಇಂಧನ ಪೂರೈಸುವ ಸ್ವಿಚ್ಗಳು ‘ಕಟ್ ಆಫ್’ ಆಗಿದ್ದವು. ಇದರಿಂದ ಕಾಕ್ಪಿಟ್ನಲ್ಲಿ ಗೊಂದಲ ಉಂಟಾಗಿತ್ತು’ ಎಂದು ತಿಳಿಸಿತ್ತು.</p>.<p>ವರದಿಯಲ್ಲಿ ದುರಂತಕ್ಕೆ ಕಾರಣ ಏನು ಎಂಬ ಬಗ್ಗೆ ಅಂತಿಮ ನಿರ್ಣಯ ನೀಡದಿದ್ದರೂ ಪೈಲಟ್ಗಳಿಂದಲೇ ತಪ್ಪಾಗಿರುವ ಸಾಧ್ಯತೆ ಇದೆ ಎಂದು ಬೊಟ್ಟು ಮಾಡಲಾಗುತ್ತಿದೆ.</p>.<p>ಪಿಟಿಐ ಸುದ್ದಿಸಂಸ್ಥೆಯೊಂದಿಗೆ ಸಂದರ್ಶನದಲ್ಲಿ ಮಾತನಾಡಿದ ಖಾಲಿದ್ ಅವರು, ‘ಎಎಐಬಿಯು ಕಾಕ್ಪಿಟ್ನ ಪೂರ್ಣ ವಾಯ್ಸ್ ರೆಕಾರ್ಡ್ ಬಿಡುಗಡೆ ಮಾಡಲಿ. ಆಗ ಎಲ್ಲ ಪ್ರಶ್ನೆಗಳಿಗೂ ಉತ್ತರ ಲಭ್ಯವಾಗಲಿದೆ. ಪೈಲಟ್ಗಳು ವಿಮಾನದ ಸುರಕ್ಷತೆಯನ್ನು ಬಯಸುವ ಗೋಲ್ ಕೀಪರ್ಗಳಂತೆ ನನ್ನ ಕಣ್ಣಿಗೆ ಭಾಸವಾಗುತ್ತಾರೆ’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನವದೆಹಲಿ: ಪತನಗೊಂಡ ಏರ್ಇಂಡಿಯಾ ವಿಮಾನದ ವಿದ್ಯುತ್ ವ್ಯವಸ್ಥೆಯ ವೈಫಲ್ಯದಿಂದಲೂ ಎಂಜಿನ್ಗಳಿಗೆ ಇಂಧನ ಪೂರೈಸುವ ಸ್ವಿಚ್ಗಳು ‘ಕಟ್ ಆಫ್’ ಸ್ಥಿತಿ ತಲುಪಿರಬಹುದು ಎಂದು ಕ್ಯಾಪ್ಟನ್ (ನಿವೃತ್ತ) ಎಹಸಾನ್ ಖಾಲಿದ್ ಅವರು ಬುಧವಾರ ಅಭಿಪ್ರಾಯಪಟ್ಟರು.</p>.<p>ವಿಮಾನ ಅಪಘಾತ ತನಿಖಾ ಬ್ಯೂರೊ (ಎಎಐಬಿ) ತನ್ನ ಪ್ರಾಥಮಿಕ ವರದಿಯಲ್ಲಿ, ‘ವಿಮಾನವು ಟೇಕ್ಆಫ್ ಆದ ಒಂದೇ ಸೆಕೆಂಡ್ನಲ್ಲಿ ಎರಡೂ ಎಂಜಿನ್ಗಳಿಗೆ ಇಂಧನ ಪೂರೈಸುವ ಸ್ವಿಚ್ಗಳು ‘ಕಟ್ ಆಫ್’ ಆಗಿದ್ದವು. ಇದರಿಂದ ಕಾಕ್ಪಿಟ್ನಲ್ಲಿ ಗೊಂದಲ ಉಂಟಾಗಿತ್ತು’ ಎಂದು ತಿಳಿಸಿತ್ತು.</p>.<p>ವರದಿಯಲ್ಲಿ ದುರಂತಕ್ಕೆ ಕಾರಣ ಏನು ಎಂಬ ಬಗ್ಗೆ ಅಂತಿಮ ನಿರ್ಣಯ ನೀಡದಿದ್ದರೂ ಪೈಲಟ್ಗಳಿಂದಲೇ ತಪ್ಪಾಗಿರುವ ಸಾಧ್ಯತೆ ಇದೆ ಎಂದು ಬೊಟ್ಟು ಮಾಡಲಾಗುತ್ತಿದೆ.</p>.<p>ಪಿಟಿಐ ಸುದ್ದಿಸಂಸ್ಥೆಯೊಂದಿಗೆ ಸಂದರ್ಶನದಲ್ಲಿ ಮಾತನಾಡಿದ ಖಾಲಿದ್ ಅವರು, ‘ಎಎಐಬಿಯು ಕಾಕ್ಪಿಟ್ನ ಪೂರ್ಣ ವಾಯ್ಸ್ ರೆಕಾರ್ಡ್ ಬಿಡುಗಡೆ ಮಾಡಲಿ. ಆಗ ಎಲ್ಲ ಪ್ರಶ್ನೆಗಳಿಗೂ ಉತ್ತರ ಲಭ್ಯವಾಗಲಿದೆ. ಪೈಲಟ್ಗಳು ವಿಮಾನದ ಸುರಕ್ಷತೆಯನ್ನು ಬಯಸುವ ಗೋಲ್ ಕೀಪರ್ಗಳಂತೆ ನನ್ನ ಕಣ್ಣಿಗೆ ಭಾಸವಾಗುತ್ತಾರೆ’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>