<p>ಪುಣೆ: ‘ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿದರೆ ನಗರಕ್ಕೆ ಅನುದಾನದ ಕೊರತೆಯಾಗದಂತೆ ನೋಡಿಕೊಳ್ಳುತ್ತೇನೆ;ನೀವು ತಿರಸ್ಕರಿಸಿದರೆ ನಾನೂ ನಿಮ್ಮನ್ನು ತಿರಸ್ಕರಿಸುತ್ತೇನೆ’</p><p>– ಪುಣೆಯ ಮಾಲೆಗಾಂವ್ನ ಮತದಾರರಿಗೆ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಹೇಳಿದ ಮಾತುಗಳಿವು.</p>.ಅಜಿತ್ ಪವಾರ್ ಸಿಎಂ ಆಗುತ್ತಾರೆ: ‘ಶಾಶ್ವತ DCM’ ಎಂದ MVAಗೆ ಫಡಣವೀಸ್.<p>ಬಾರಾಮತಿ ತೆಹಸಿಲ್ನ ಮಾಲೆಗಾಂವ್ ನಗರ ಪಂಚಾಯತ್ ಚುನಾವಣೆಗೆ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ (ಎನ್ಸಿಪಿ) ಅಭ್ಯರ್ಥಿಗಳ ಪರವಾಗಿ ಶುಕ್ರವಾರ ಪ್ರಚಾರ ಮಾಡುವ ವೇಳೆ ಅವರು ಹೀಗೆ ಹೇಳಿದ್ದಾರೆ.</p><p>ಬಿಜೆಪಿ–ಎನ್ಸಿಪಿ–ಶಿವಸೇನಾ ಸಮ್ಮಿಶ್ರ ಸರ್ಕಾರದಲ್ಲಿ ಅಜಿತ್ ಪವಾರ್ ಹಣಕಾಸು ಸಚಿವರೂ ಹೌದು.</p>.ಶರದ್ ಪವಾರ್ ಹುಟ್ಟುಹಬ್ಬದಲ್ಲಿ ಭಾಗಿಯಾದ ಅಜಿತ್ ಪವಾರ್ ಕುಟುಂಬ.<p>‘18 ಎನ್ಸಿಪಿ ಅಭ್ಯರ್ಥಿಗಳನ್ನು ನೀವು ಆಯ್ಕೆ ಮಾಡಿದರೆ, ಹಣಕಾಸಿನ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುತ್ತೇನೆ. ಭರವಸೆ ನೀಡಿದ್ದನ್ನು ಈಡೇರಿಸಲೂ ಸಿದ್ಧನಿದ್ದೇನೆ. ನೀವೇನಾದರೂ ತಿರಸ್ಕರಿಸಿದರೆ ನಾನೂ ತಿರಸ್ಕರಿಸುವೆ. ನಿಮ್ಮ ಬಳಿ ಓಟು ಇದೆ, ನನ್ನ ಬಳಿ ಹಣ ಇದೆ’ ಎಂದು ಹೇಳಿದ್ದಾರೆ.</p><p>ಪವಾರ್ ಅವರ ಈ ಮಾತುಗಳು ವಿರೋಧ ಪಕ್ಷಗಳ ಟೀಕೆಗೆ ಗುರಿಯಾಗಿದ್ದು, ‘ಇದು ಮತದಾರರನ್ನು ಬೆದರಿಸುವ ತಂತ್ರ’ ಎಂದು ಶಿವಸೇನಾ (ಯುಟಿಬಿ) ನಾಯಕ ಅಂಬಾದಾಸ್ ದಾವ್ನೆ ಹೇಳಿದ್ದಾರೆ.</p>.ಮಹಿಳಾ IPS ಅಧಿಕಾರಿಗೆ DCM ಧಮಕಿ: ಕಳ್ಳರ ರಕ್ಷಣೆಗೆ ನಿಂತ ಪವಾರ್ ಎಂದ ರಾವುತ್.<p>‘ಹಣವನ್ನು ಜನರು ಪಾವತಿ ಮಾಡುವ ತೆರಿಗೆಯಿಂದ ನೀಡಲಾಗುತ್ತಿದೆಯೇ ವಿನಾ ಅಜಿತ್ ಪವಾರ್ ಅವರ ಮನೆಯಿಂದ ಕೊಡುತ್ತಿಲ್ಲ. ಅಜಿತ್ ಪವಾರ್ರಂತಹ ನಾಯಕರು ಮತದಾರರನ್ನು ಬೆದರಿಸುತ್ತಿರುವಾಗ ಚುನಾವಣಾ ಆಯೋಗ ಏನು ಮಾಡುತ್ತಿದೆ’ ಎಂದು ಅವರು ಪ್ರಶ್ನಿಸಿದ್ದಾರೆ.</p><p>ನಗರ ಪಂಚಾಯತ್ ಚುನಾವಣೆಗಳು ಡಿಸೆಂಬರ್ 2ರಂದು ನಿಗದಿಯಾಗಿದ್ದು, ಎನ್ಸಿಪಿ ಹಾಗೂ ಬಿಜೆಪಿ ಮೈತ್ರಿ ಮಾಡಿಕೊಂಡು ಸ್ಪರ್ಧಿಸಿವೆ.</p>.ಮರಾಠ ಮೀಸಲಾತಿ ಹೋರಾಟ | ಪರಿಹಾರಕ್ಕೆ ಮಹಾರಾಷ್ಟ್ರ ಸರ್ಕಾರದ ಪ್ರಯತ್ನ: ಪವಾರ್.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಪುಣೆ: ‘ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿದರೆ ನಗರಕ್ಕೆ ಅನುದಾನದ ಕೊರತೆಯಾಗದಂತೆ ನೋಡಿಕೊಳ್ಳುತ್ತೇನೆ;ನೀವು ತಿರಸ್ಕರಿಸಿದರೆ ನಾನೂ ನಿಮ್ಮನ್ನು ತಿರಸ್ಕರಿಸುತ್ತೇನೆ’</p><p>– ಪುಣೆಯ ಮಾಲೆಗಾಂವ್ನ ಮತದಾರರಿಗೆ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಹೇಳಿದ ಮಾತುಗಳಿವು.</p>.ಅಜಿತ್ ಪವಾರ್ ಸಿಎಂ ಆಗುತ್ತಾರೆ: ‘ಶಾಶ್ವತ DCM’ ಎಂದ MVAಗೆ ಫಡಣವೀಸ್.<p>ಬಾರಾಮತಿ ತೆಹಸಿಲ್ನ ಮಾಲೆಗಾಂವ್ ನಗರ ಪಂಚಾಯತ್ ಚುನಾವಣೆಗೆ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ (ಎನ್ಸಿಪಿ) ಅಭ್ಯರ್ಥಿಗಳ ಪರವಾಗಿ ಶುಕ್ರವಾರ ಪ್ರಚಾರ ಮಾಡುವ ವೇಳೆ ಅವರು ಹೀಗೆ ಹೇಳಿದ್ದಾರೆ.</p><p>ಬಿಜೆಪಿ–ಎನ್ಸಿಪಿ–ಶಿವಸೇನಾ ಸಮ್ಮಿಶ್ರ ಸರ್ಕಾರದಲ್ಲಿ ಅಜಿತ್ ಪವಾರ್ ಹಣಕಾಸು ಸಚಿವರೂ ಹೌದು.</p>.ಶರದ್ ಪವಾರ್ ಹುಟ್ಟುಹಬ್ಬದಲ್ಲಿ ಭಾಗಿಯಾದ ಅಜಿತ್ ಪವಾರ್ ಕುಟುಂಬ.<p>‘18 ಎನ್ಸಿಪಿ ಅಭ್ಯರ್ಥಿಗಳನ್ನು ನೀವು ಆಯ್ಕೆ ಮಾಡಿದರೆ, ಹಣಕಾಸಿನ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುತ್ತೇನೆ. ಭರವಸೆ ನೀಡಿದ್ದನ್ನು ಈಡೇರಿಸಲೂ ಸಿದ್ಧನಿದ್ದೇನೆ. ನೀವೇನಾದರೂ ತಿರಸ್ಕರಿಸಿದರೆ ನಾನೂ ತಿರಸ್ಕರಿಸುವೆ. ನಿಮ್ಮ ಬಳಿ ಓಟು ಇದೆ, ನನ್ನ ಬಳಿ ಹಣ ಇದೆ’ ಎಂದು ಹೇಳಿದ್ದಾರೆ.</p><p>ಪವಾರ್ ಅವರ ಈ ಮಾತುಗಳು ವಿರೋಧ ಪಕ್ಷಗಳ ಟೀಕೆಗೆ ಗುರಿಯಾಗಿದ್ದು, ‘ಇದು ಮತದಾರರನ್ನು ಬೆದರಿಸುವ ತಂತ್ರ’ ಎಂದು ಶಿವಸೇನಾ (ಯುಟಿಬಿ) ನಾಯಕ ಅಂಬಾದಾಸ್ ದಾವ್ನೆ ಹೇಳಿದ್ದಾರೆ.</p>.ಮಹಿಳಾ IPS ಅಧಿಕಾರಿಗೆ DCM ಧಮಕಿ: ಕಳ್ಳರ ರಕ್ಷಣೆಗೆ ನಿಂತ ಪವಾರ್ ಎಂದ ರಾವುತ್.<p>‘ಹಣವನ್ನು ಜನರು ಪಾವತಿ ಮಾಡುವ ತೆರಿಗೆಯಿಂದ ನೀಡಲಾಗುತ್ತಿದೆಯೇ ವಿನಾ ಅಜಿತ್ ಪವಾರ್ ಅವರ ಮನೆಯಿಂದ ಕೊಡುತ್ತಿಲ್ಲ. ಅಜಿತ್ ಪವಾರ್ರಂತಹ ನಾಯಕರು ಮತದಾರರನ್ನು ಬೆದರಿಸುತ್ತಿರುವಾಗ ಚುನಾವಣಾ ಆಯೋಗ ಏನು ಮಾಡುತ್ತಿದೆ’ ಎಂದು ಅವರು ಪ್ರಶ್ನಿಸಿದ್ದಾರೆ.</p><p>ನಗರ ಪಂಚಾಯತ್ ಚುನಾವಣೆಗಳು ಡಿಸೆಂಬರ್ 2ರಂದು ನಿಗದಿಯಾಗಿದ್ದು, ಎನ್ಸಿಪಿ ಹಾಗೂ ಬಿಜೆಪಿ ಮೈತ್ರಿ ಮಾಡಿಕೊಂಡು ಸ್ಪರ್ಧಿಸಿವೆ.</p>.ಮರಾಠ ಮೀಸಲಾತಿ ಹೋರಾಟ | ಪರಿಹಾರಕ್ಕೆ ಮಹಾರಾಷ್ಟ್ರ ಸರ್ಕಾರದ ಪ್ರಯತ್ನ: ಪವಾರ್.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>