<p><strong>ಲಖನೌ: ‘</strong>ಮಹಾಕುಂಭ ಮೇಳಕ್ಕೆ ಭೇಟಿ ನೀಡಲು ಬಯಸಿರುವ ಜನರಿಗೆ ಅನುಕೂಲ ಆಗುವಂತೆ ಮೇಳದ ಅವಧಿಯನ್ನು ವಿಸ್ತರಿಸಬೇಕು ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಒತ್ತಾಯಿಸಿದ್ದಾರೆ.</p>.<p>ಮಹಾಕುಂಭ ಮೇಳದ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ವಿಫಲವಾಗಿದ್ದು, ಇದರಿಂದಾಗಿ ರಾಜ್ಯದ ವರ್ಚಸ್ಸಿಗೆ ವಿಶ್ವಮಟ್ಟದಲ್ಲಿ ಧಕ್ಕೆಯಾಗಿದೆ ಎಂದು ಟೀಕಿಸಿದರು.</p>.<p>ಮಹಾಕುಂಭ ಮೇಳವು ಜನವರಿ 14ರಂದು ಆರಂಭವಾಗಿದ್ದು, ಮಹಾಶಿವರಾತ್ರಿ ದಿನವಾದ ಫೆಬ್ರುವರಿ 26ರಂದು ಮುಗಿಯಲಿದೆ.</p>.<p>ಸಂಚಾರ, ಜನ ದಟ್ಟಣೆ ನಿರ್ವಹಣೆಯಲ್ಲಿ ಲೋಪದಿಂದಾಗಿ ಪ್ರಯಾಗರಾಜ್ ಜಿಲ್ಲೆಯ ಸಾವಿರಾರು ನಿವಾಸಿಗಳಿಗೂ ಪುಣ್ಯಸ್ನಾನ ಮಾಡಲು ಆಗಿಲ್ಲ ಎಂದು ಅಭಿಪ್ರಾಯಪಟ್ಟರು.</p>.<p><strong>ಡಿಜಿಟಲ್ ಕೇಂದ್ರದಿಂದಾಗಿ ತಮ್ಮವರ ಮರಳಿ ಸೇರಿದ 20 ಸಾವಿರ ಮಂದಿ:</strong> ಕುಂಭಮೇಳದಲ್ಲಿ ತಮ್ಮವರಿಂದ ದೂರವಾಗಿ ಕಳೆದುಹೋದವರನ್ನು ಮತ್ತೆ ಸೇರಿಸಲು ಅನುವು ಮಾಡಿಕೊಡಲು ರೂಪಿಸಲಾದ ಡಿಜಿಟಲ್ ಕೇಂದ್ರದಿಂದಾಗಿ 20 ಸಾವಿರ ಮಂದಿಗೆ ಅನುಕೂಲವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪುಣ್ಯಸ್ನಾನ ಮಾಡುವ ದಿನಗಳಲ್ಲಿ ಅತಿ ಹೆಚ್ಚು ಜನಸಂದಣಿ ಇರುವಾಗ ತಮ್ಮವರಿಂದ ಕಳೆದುಹೋಗುವವರನ್ನು ಪತ್ತೆ ಮಾಡುವುದು ಈ ವ್ಯವಸ್ಥೆಯಿಂದ ಸಾಧ್ಯವಾಗಿದೆ ಎಂದಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲಖನೌ: ‘</strong>ಮಹಾಕುಂಭ ಮೇಳಕ್ಕೆ ಭೇಟಿ ನೀಡಲು ಬಯಸಿರುವ ಜನರಿಗೆ ಅನುಕೂಲ ಆಗುವಂತೆ ಮೇಳದ ಅವಧಿಯನ್ನು ವಿಸ್ತರಿಸಬೇಕು ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಒತ್ತಾಯಿಸಿದ್ದಾರೆ.</p>.<p>ಮಹಾಕುಂಭ ಮೇಳದ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ವಿಫಲವಾಗಿದ್ದು, ಇದರಿಂದಾಗಿ ರಾಜ್ಯದ ವರ್ಚಸ್ಸಿಗೆ ವಿಶ್ವಮಟ್ಟದಲ್ಲಿ ಧಕ್ಕೆಯಾಗಿದೆ ಎಂದು ಟೀಕಿಸಿದರು.</p>.<p>ಮಹಾಕುಂಭ ಮೇಳವು ಜನವರಿ 14ರಂದು ಆರಂಭವಾಗಿದ್ದು, ಮಹಾಶಿವರಾತ್ರಿ ದಿನವಾದ ಫೆಬ್ರುವರಿ 26ರಂದು ಮುಗಿಯಲಿದೆ.</p>.<p>ಸಂಚಾರ, ಜನ ದಟ್ಟಣೆ ನಿರ್ವಹಣೆಯಲ್ಲಿ ಲೋಪದಿಂದಾಗಿ ಪ್ರಯಾಗರಾಜ್ ಜಿಲ್ಲೆಯ ಸಾವಿರಾರು ನಿವಾಸಿಗಳಿಗೂ ಪುಣ್ಯಸ್ನಾನ ಮಾಡಲು ಆಗಿಲ್ಲ ಎಂದು ಅಭಿಪ್ರಾಯಪಟ್ಟರು.</p>.<p><strong>ಡಿಜಿಟಲ್ ಕೇಂದ್ರದಿಂದಾಗಿ ತಮ್ಮವರ ಮರಳಿ ಸೇರಿದ 20 ಸಾವಿರ ಮಂದಿ:</strong> ಕುಂಭಮೇಳದಲ್ಲಿ ತಮ್ಮವರಿಂದ ದೂರವಾಗಿ ಕಳೆದುಹೋದವರನ್ನು ಮತ್ತೆ ಸೇರಿಸಲು ಅನುವು ಮಾಡಿಕೊಡಲು ರೂಪಿಸಲಾದ ಡಿಜಿಟಲ್ ಕೇಂದ್ರದಿಂದಾಗಿ 20 ಸಾವಿರ ಮಂದಿಗೆ ಅನುಕೂಲವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪುಣ್ಯಸ್ನಾನ ಮಾಡುವ ದಿನಗಳಲ್ಲಿ ಅತಿ ಹೆಚ್ಚು ಜನಸಂದಣಿ ಇರುವಾಗ ತಮ್ಮವರಿಂದ ಕಳೆದುಹೋಗುವವರನ್ನು ಪತ್ತೆ ಮಾಡುವುದು ಈ ವ್ಯವಸ್ಥೆಯಿಂದ ಸಾಧ್ಯವಾಗಿದೆ ಎಂದಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>