ಕೋಯಿಕ್ಕೋಡ್: ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ಸಿಆರ್ಪಿಎಫ್ ಯೋಧ ವಸಂತ ಕುಮಾರ್ ಮೃತದೇಹದ ಮುಂದೆ ನಿಂತು ಸೆಲ್ಫಿ ಕ್ಲಿಕ್ಕಿಸಿದ ಕೇಂದ್ರಸಚಿವ ಅಲ್ಫೋನ್ಸ್ ಕಣ್ಣಂತ್ತಾನಂ ವಿರುದ್ದ ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ವಸಂತ ಕುಮಾರ್ ಅವರ ಅಂತ್ಯ ಸಂಸ್ಕಾರ ನಡೆಯುತ್ತಿದ್ದ ವೇಳೆ ಮೃತದೇಹದ ಮುಂದ ನಿಂತು ಕ್ಲಿಕ್ಕಿಸಿದ ಸೆಲ್ಫಿಯನ್ನು ಕಣ್ಣಂತ್ತಾನಂ ತಮ್ಮ ಫೇಸ್ಬುಕ್ ಪುಟದಲ್ಲಿ ಶೇರ್ ಮಾಡಿದ್ದರು.
ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಧೀರ ಯೋಧ ವಿ.ವಿ ವಸಂತಕುಮಾರ್ ಅವರ ಅಂತ್ಯ ಸಂಸ್ಕಾರಅವರ ನಿವಾಸದಲ್ಲಿ ನಡೆದಿದೆ.ವಸಂತ ಕುಮಾರ್ ಅವರಂಥಾ ಧೀರ ಯೋಧರ ತ್ಯಾಗದಿಂದಾಗಿ ನಾವು ಇಲ್ಲಿ ಸುರಕ್ಷಿತವಾಗಿ ಬದುಕಲು ಸಾಧ್ಯವಾಗಿರುವುದು ಎಂದು ಕಣ್ಣಂತ್ತಾನಂ ಫೇಸ್ಬುಕ್ನಲ್ಲಿ ಸ್ಟೇಟಸ್ ಅಪ್ಡೇಟ್ ಮಾಡಿದ್ದರು.
ಆದರೆ ಮೃತದೇಹದ ಮುಂದೆ ನಿಂತು ಸೆಲ್ಫಿ ಕ್ಲಿಕ್ಕಿಸಿ ಅದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಮಾಡಿದ್ದ ಸಚಿವರ ವಿರುದ್ಧ ನೆಟಿಜನ್ಗಳು ಕಾಮೆಂಟ್ ದಾಳಿ ನಡೆಸಿದ್ದಾರೆ.ಸಾವಿನ ಮನೆಯಲ್ಲಿಯೂ ರಾಜಕೀಯ ಬುದ್ದಿ ತೋರಿಸುತ್ತೀರಾ ಎಂದು ಕೆಲವರು ಪ್ರಶ್ನಿಸಿದ್ದರೆ, ಸ್ವಲ್ಪ ಬುದ್ಧಿ ಇದ್ದಿದ್ದರೆ ನೀವು ಈ ರೀತಿ ಮಾಡುತ್ತಿರಲಿಲ್ಲ ಎಂದು ಕೆಲವರು ಕಾಮೆಂಟಿಸಿದ್ದಾರೆ.
Sir, you should have used a better camera for this selfie, can't see the shame on your face
— Paresh (@hi_paresh) February 16, 2019
What a shame Mr.Alphonce Kannanthanam..Taking selfie infront of our soldiers dead body..#shameOnYouAlphonse pic.twitter.com/G534QNm4N4
— Shan Shakir (@ShanShakir1) February 16, 2019
@alphonstourism ,former beauracrat and presently BJP minister, in the most insensitive manner, poses for a selfie during the funeral of Swntham Kumar who was killed in #PulwamaAttack !
— balu sunil (@balusunil2) February 16, 2019
Moral of the story: Cracking civil service is no benchmark for anything. pic.twitter.com/7UwViYcPpv
Narcissism at its Peak.
— Bijoy (@BijoyBijoyummer) February 16, 2019
This #Proverb suits
"As The King So Is The Minister"#minister #alphonse #kannanthanam pic.twitter.com/0MXYD69zOf
ಫೇಸ್ಬುಕ್ ಪೋಸ್ಟ್ ವಿರುದ್ಧ ನೆಟಿಜನ್ಗಳ ಆಕ್ರೋಶ ತೀವ್ರವಾಗುತ್ತಿದ್ದಂತೆ ಕಣ್ಣಂತ್ತಾನಂ ಆ ಪೋಸ್ಟ್ ಡಿಲೀಟ್ ಮಾಡಿದ್ದಾರೆ.ಆದರೆ ಬೆಂಬಿಡದ ನೆಟಿಜನ್ಗಳು ಅವರ ಇತರ ಪೋಸ್ಟ್ ಗಳಿಗೂ ಬೈದು ಕಾಮೆಂಟ್ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.