<p><strong>ನವದೆಹಲಿ:</strong> ದೆಹಲಿ ಮಹಾನಗರ ಪಾಲಿಕೆಯು ದಕ್ಷಿಣ ದೆಹಲಿಯಲ್ಲಿ ಇರುವ ಲಾಲಾ ಲಜಪತ್ ರಾಯ್ ಮಾರ್ಗದ ಒಂದು ಭಾಗದ ರಸ್ತೆಗೆ ಬೋಡೊ ಸಮುದಾಯದ ನೇತಾರ ‘ಬೋಡೊಫಾ’ ಉಪೇಂದ್ರನಾಥ ಬ್ರಹ್ಮ ಅವರ ಹೆಸರನ್ನು ಮರುನಾಮಕರಣ ಮಾಡಿದೆ.</p>.<p>ಈ ರಸ್ತೆಯು ಕೈಲಾಶ್ ಕಾಲೊನಿಯ ಮೆಟ್ರೊ ನಿಲ್ದಾಣ ಬಳಿಯಿಂದ ಬೋಡೊಲ್ಯಾಂಡ್ ಅತಿಥಿ ಗೃಹದವರೆಗೆ ವಿಸ್ತರಿಸಿದೆ.</p>.<p>ಉಪೇಂದ್ರ ನಾಥ ಅವರನ್ನು ‘ಬೋಡೊಫಾ’ ಎಂದು ಕರೆಯಲಾಗುತ್ತದೆ. ಬೋಡೊಗಳ ರಕ್ಷಕ ಎಂಬುದು ಇದರರ್ಥ. ಅವರು ಆಲ್ ಬೋಡೊ ಸ್ಟೂಡೆಂಟ್ಸ್ ಯೂನಿಯನ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಈ ಸಮುದಾಯದ ಶಿಕ್ಷಣ ಮತ್ತು ಅಭಿವೃದ್ಧಿಗೆ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದು ಅವರ ಹೆಗ್ಗಳಿಕೆ. </p>.<p>ಮೇ 1ರಂದು ಕೈಲಾಸ್ ಕಾಲೊನಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮರುನಾಮಕರಣಗೊಂಡಿರುವ ರಸ್ತೆ ಹಾಗೂ ಉಪೇಂದ್ರನಾಥ ಅವರ ಪ್ರತಿಮೆಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅನಾವರಣ ಮಾಡಲಿದ್ದಾರೆ.</p>.<p>ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ, ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತ, ಬೋಡೊಲ್ಯಾಂಡ್ ಪ್ರಾದೇಶಿಕ ಮಂಡಳಿಯ ಕಾರ್ಯ ನಿರ್ವಾಹಕ ಸದಸ್ಯ ಪ್ರಮೋದ್ ಬೋರೊ, ದೆಹಲಿ ಮಹಾನಗರ ಪಾಲಿಕೆಯ ಮೇಯರ್ ರಾಜಾ ಇಕ್ಬಾಲ್ ಸಿಂಗ್ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.</p>.<p>ಉಪೇಂದ್ರನಾಥ ಬ್ರಹ್ಮ ಅವರ 35ನೇ ವರ್ಷ ಸಂಸ್ಮರಣೆ ಅಂಗವಾಗಿ ಅಸ್ಸಾಂ ಸರ್ಕಾರವು ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ದೆಹಲಿ ಮಹಾನಗರ ಪಾಲಿಕೆಯು ದಕ್ಷಿಣ ದೆಹಲಿಯಲ್ಲಿ ಇರುವ ಲಾಲಾ ಲಜಪತ್ ರಾಯ್ ಮಾರ್ಗದ ಒಂದು ಭಾಗದ ರಸ್ತೆಗೆ ಬೋಡೊ ಸಮುದಾಯದ ನೇತಾರ ‘ಬೋಡೊಫಾ’ ಉಪೇಂದ್ರನಾಥ ಬ್ರಹ್ಮ ಅವರ ಹೆಸರನ್ನು ಮರುನಾಮಕರಣ ಮಾಡಿದೆ.</p>.<p>ಈ ರಸ್ತೆಯು ಕೈಲಾಶ್ ಕಾಲೊನಿಯ ಮೆಟ್ರೊ ನಿಲ್ದಾಣ ಬಳಿಯಿಂದ ಬೋಡೊಲ್ಯಾಂಡ್ ಅತಿಥಿ ಗೃಹದವರೆಗೆ ವಿಸ್ತರಿಸಿದೆ.</p>.<p>ಉಪೇಂದ್ರ ನಾಥ ಅವರನ್ನು ‘ಬೋಡೊಫಾ’ ಎಂದು ಕರೆಯಲಾಗುತ್ತದೆ. ಬೋಡೊಗಳ ರಕ್ಷಕ ಎಂಬುದು ಇದರರ್ಥ. ಅವರು ಆಲ್ ಬೋಡೊ ಸ್ಟೂಡೆಂಟ್ಸ್ ಯೂನಿಯನ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಈ ಸಮುದಾಯದ ಶಿಕ್ಷಣ ಮತ್ತು ಅಭಿವೃದ್ಧಿಗೆ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದು ಅವರ ಹೆಗ್ಗಳಿಕೆ. </p>.<p>ಮೇ 1ರಂದು ಕೈಲಾಸ್ ಕಾಲೊನಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮರುನಾಮಕರಣಗೊಂಡಿರುವ ರಸ್ತೆ ಹಾಗೂ ಉಪೇಂದ್ರನಾಥ ಅವರ ಪ್ರತಿಮೆಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅನಾವರಣ ಮಾಡಲಿದ್ದಾರೆ.</p>.<p>ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ, ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತ, ಬೋಡೊಲ್ಯಾಂಡ್ ಪ್ರಾದೇಶಿಕ ಮಂಡಳಿಯ ಕಾರ್ಯ ನಿರ್ವಾಹಕ ಸದಸ್ಯ ಪ್ರಮೋದ್ ಬೋರೊ, ದೆಹಲಿ ಮಹಾನಗರ ಪಾಲಿಕೆಯ ಮೇಯರ್ ರಾಜಾ ಇಕ್ಬಾಲ್ ಸಿಂಗ್ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.</p>.<p>ಉಪೇಂದ್ರನಾಥ ಬ್ರಹ್ಮ ಅವರ 35ನೇ ವರ್ಷ ಸಂಸ್ಮರಣೆ ಅಂಗವಾಗಿ ಅಸ್ಸಾಂ ಸರ್ಕಾರವು ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>