<p><strong>ಅಮರಾವತಿ:</strong> ತೆಲುಗುದೇಶಂ ಪಾರ್ಟಿ (ಟಿಡಿಪಿ) ಮುಖ್ಯಸ್ಥ ಎನ್. ಚಂದ್ರಬಾಬು ನಾಯ್ಡು ಅವರು, ಪಕ್ಷದ ಚಟುವಟಿಕೆಗಳಿಗಾಗಿ ತಮ್ಮ ಅಧಿಕಾರಾವಧಿಯಲ್ಲಿ ನಿರ್ಮಿಸಿದ್ದ ‘ಪ್ರಜಾ ವೇದಿಕೆ’ ಕಟ್ಟಡವನ್ನು ವಶಪಡಿಸಿಕೊಳ್ಳುವ ಕಾರ್ಯವನ್ನು ಆಂಧ್ರಪ್ರದೇಶದ ‘ರಾಜಧಾನಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ’ವು (ಸಿಆರ್ಡಿಎ) ಆರಂಭಿಸಿದೆ.</p>.<p>ನಾಯ್ಡು ಅವರು ಮುಖ್ಯಮಂತ್ರಿಯಾಗಿದ್ದಾಗ ಸರ್ಕಾರದ ಹಣದಿಂದಲೇ ಈ ಕಟ್ಟಡವನ್ನು ನಿರ್ಮಿಸಿದ್ದರು. ಈ ಕಟ್ಟಡವನ್ನು ಖಾಲಿ ಮಾಡುವಂತೆ ಸಿಆರ್ಡಿಎ ಈಚೆಗೆ ಟಿಡಿಪಿಗೆ ನೋಟಿಸ್ ನೀಡಿತ್ತು. ಇದಾದ ಬಳಿಕ, ‘ಕಟ್ಟಡವನ್ನು ಪಕ್ಷದ ಚಟುವಟಿಕೆಗಳಿಗಾಗಿ<br />ನಿರ್ಮಿಸಲಾಗಿತ್ತು, ಆ ಉದ್ದೇಶಕ್ಕೆ ಬಳಸಲು ಅನುಮತಿ ಕೊಡಬೇಕು’ ಎಂದು ನಾಯ್ಡು ಅವರು ಸಿಆರ್ಡಿಎಗೆ ಪತ್ರ ಮುಖೇನ ಮನವಿ ಮಾಡಿಕೊಂಡಿದ್ದರು. ಆದರೆ ಜಗನ್ಮೋಹನ್ ನೇತೃತ್ವದ ಸರ್ಕಾರವು ಅದನ್ನು ಒಪ್ಪದೆ, ಟಿಡಿಪಿಗೆ ಸೇರಿದ್ದ ಎಲ್ಲಾ ವಸ್ತುಗಳನ್ನು ಕಟ್ಟಡದೊಳಗಿಂದ ತೆರವು ಮಾಡುವ ಕೆಲಸ ಆರಂಭಿಸಿದೆ.</p>.<p>ಜಗನ್ಮೋಹನ್ ಅವರು ಇದೇ ಮೊದಲ ಬಾರಿಗೆ ಆಂಧ್ರಪ್ರದೇಶದ ಜಿಲ್ಲಾಧಿಕಾರಿಗಳ ಸಮ್ಮೇಳನವನ್ನು ಆಯೋಜಿಸಿದ್ದು, ಸಮ್ಮೇಳನವು ಸೋಮವಾರ (ಜೂನ್ 24) ನಡೆಯಲಿದೆ. ಅದನ್ನು ಸರ್ಕಾರಿ ಕಟ್ಟಡದಲ್ಲಿರುವ ಸಭಾಂಗಣದ ಬದಲು ಉಂದವಳ್ಳಿಯ ‘ಪ್ರಜಾ ವೇದಿಕೆ’ ಕಟ್ಟಡದಲ್ಲಿ ನಡೆಸಲು ನಿರ್ಧರಿಸಲಾಗಿದೆ. ಈ ನಿರ್ಧಾರ ಕೈಗೊಂಡ ಕೂಡಲೇ ಸಿಆರ್ಡಿಎಯವರು ಕಟ್ಟಡವನ್ನು ವಶಕ್ಕೆ ತೆಗೆದುಕೊಳ್ಳುವ ಪ್ರಕ್ರಿಯೆ ಆರಂಭಿಸಿದರು.</p>.<p>‘ನಾಯ್ಡು ನೆಲೆಸಿರುವ ಮನೆಯನ್ನು ಅಕ್ರಮವಾಗಿ ನಿರ್ಮಿಸಲಾಗಿದ್ದು ಅದನ್ನು ಶೀಘ್ರದಲ್ಲೇ ಕೆಡವಲಾಗುವುದು’ ಎಂದು ಮಂಗಳಗಿರಿ ಕ್ಷೇತ್ರದ ವೈಎಸ್ಆರ್ಸಿ ಶಾಸಕ ಈಚೆಗೆ ಎಚ್ಚರಿಕೆ ನೀಡಿದ್ದರು.</p>.<p>*ನಮ್ಮ ಅರ್ಜಿ ಇತ್ಯರ್ಥವಾಗುವ ಮೊದಲೇ ಕಟ್ಟಡವನ್ನು ಖಾಲಿಮಾಡಲು ಸರ್ಕಾರ ಮುಂದಾಗಿರುವುದು ಅನೈತಿಕ ನಡೆ</p>.<p><strong>ಪ್ರತಿಪತಿ ಪುಲ್ಲ ರಾವ್,</strong> ಟಿಡಿಪಿ ನಾಯಕ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅಮರಾವತಿ:</strong> ತೆಲುಗುದೇಶಂ ಪಾರ್ಟಿ (ಟಿಡಿಪಿ) ಮುಖ್ಯಸ್ಥ ಎನ್. ಚಂದ್ರಬಾಬು ನಾಯ್ಡು ಅವರು, ಪಕ್ಷದ ಚಟುವಟಿಕೆಗಳಿಗಾಗಿ ತಮ್ಮ ಅಧಿಕಾರಾವಧಿಯಲ್ಲಿ ನಿರ್ಮಿಸಿದ್ದ ‘ಪ್ರಜಾ ವೇದಿಕೆ’ ಕಟ್ಟಡವನ್ನು ವಶಪಡಿಸಿಕೊಳ್ಳುವ ಕಾರ್ಯವನ್ನು ಆಂಧ್ರಪ್ರದೇಶದ ‘ರಾಜಧಾನಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ’ವು (ಸಿಆರ್ಡಿಎ) ಆರಂಭಿಸಿದೆ.</p>.<p>ನಾಯ್ಡು ಅವರು ಮುಖ್ಯಮಂತ್ರಿಯಾಗಿದ್ದಾಗ ಸರ್ಕಾರದ ಹಣದಿಂದಲೇ ಈ ಕಟ್ಟಡವನ್ನು ನಿರ್ಮಿಸಿದ್ದರು. ಈ ಕಟ್ಟಡವನ್ನು ಖಾಲಿ ಮಾಡುವಂತೆ ಸಿಆರ್ಡಿಎ ಈಚೆಗೆ ಟಿಡಿಪಿಗೆ ನೋಟಿಸ್ ನೀಡಿತ್ತು. ಇದಾದ ಬಳಿಕ, ‘ಕಟ್ಟಡವನ್ನು ಪಕ್ಷದ ಚಟುವಟಿಕೆಗಳಿಗಾಗಿ<br />ನಿರ್ಮಿಸಲಾಗಿತ್ತು, ಆ ಉದ್ದೇಶಕ್ಕೆ ಬಳಸಲು ಅನುಮತಿ ಕೊಡಬೇಕು’ ಎಂದು ನಾಯ್ಡು ಅವರು ಸಿಆರ್ಡಿಎಗೆ ಪತ್ರ ಮುಖೇನ ಮನವಿ ಮಾಡಿಕೊಂಡಿದ್ದರು. ಆದರೆ ಜಗನ್ಮೋಹನ್ ನೇತೃತ್ವದ ಸರ್ಕಾರವು ಅದನ್ನು ಒಪ್ಪದೆ, ಟಿಡಿಪಿಗೆ ಸೇರಿದ್ದ ಎಲ್ಲಾ ವಸ್ತುಗಳನ್ನು ಕಟ್ಟಡದೊಳಗಿಂದ ತೆರವು ಮಾಡುವ ಕೆಲಸ ಆರಂಭಿಸಿದೆ.</p>.<p>ಜಗನ್ಮೋಹನ್ ಅವರು ಇದೇ ಮೊದಲ ಬಾರಿಗೆ ಆಂಧ್ರಪ್ರದೇಶದ ಜಿಲ್ಲಾಧಿಕಾರಿಗಳ ಸಮ್ಮೇಳನವನ್ನು ಆಯೋಜಿಸಿದ್ದು, ಸಮ್ಮೇಳನವು ಸೋಮವಾರ (ಜೂನ್ 24) ನಡೆಯಲಿದೆ. ಅದನ್ನು ಸರ್ಕಾರಿ ಕಟ್ಟಡದಲ್ಲಿರುವ ಸಭಾಂಗಣದ ಬದಲು ಉಂದವಳ್ಳಿಯ ‘ಪ್ರಜಾ ವೇದಿಕೆ’ ಕಟ್ಟಡದಲ್ಲಿ ನಡೆಸಲು ನಿರ್ಧರಿಸಲಾಗಿದೆ. ಈ ನಿರ್ಧಾರ ಕೈಗೊಂಡ ಕೂಡಲೇ ಸಿಆರ್ಡಿಎಯವರು ಕಟ್ಟಡವನ್ನು ವಶಕ್ಕೆ ತೆಗೆದುಕೊಳ್ಳುವ ಪ್ರಕ್ರಿಯೆ ಆರಂಭಿಸಿದರು.</p>.<p>‘ನಾಯ್ಡು ನೆಲೆಸಿರುವ ಮನೆಯನ್ನು ಅಕ್ರಮವಾಗಿ ನಿರ್ಮಿಸಲಾಗಿದ್ದು ಅದನ್ನು ಶೀಘ್ರದಲ್ಲೇ ಕೆಡವಲಾಗುವುದು’ ಎಂದು ಮಂಗಳಗಿರಿ ಕ್ಷೇತ್ರದ ವೈಎಸ್ಆರ್ಸಿ ಶಾಸಕ ಈಚೆಗೆ ಎಚ್ಚರಿಕೆ ನೀಡಿದ್ದರು.</p>.<p>*ನಮ್ಮ ಅರ್ಜಿ ಇತ್ಯರ್ಥವಾಗುವ ಮೊದಲೇ ಕಟ್ಟಡವನ್ನು ಖಾಲಿಮಾಡಲು ಸರ್ಕಾರ ಮುಂದಾಗಿರುವುದು ಅನೈತಿಕ ನಡೆ</p>.<p><strong>ಪ್ರತಿಪತಿ ಪುಲ್ಲ ರಾವ್,</strong> ಟಿಡಿಪಿ ನಾಯಕ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>