<p><strong>ನವದೆಹಲಿ:</strong> ಅರಾವಳಿ ಬೆಟ್ಟ ಶ್ರೇಣಿಗಳ ಬಗೆಗಿನ ಮರುವ್ಯಾಖ್ಯಾನ ಕುರಿತು ಸುಪ್ರೀಂ ಕೋರ್ಟ್ ನಿರ್ದೇಶನದಿಂದ ತೀವ್ರ ನೋವಾಗಿದ್ದು, ಇದೀಗ ನವೆಂಬರ್ 20 ನಿರ್ದೇಶನಗಳಿಗೆ ತಡೆ ನೀಡಿರುವುದನ್ನು ಸ್ವಾಗತಿಸುವುದಾಗಿ ಪರಿಸರ ಹೋರಾಟಗಾರ, 'ವಾಟರ್ಮ್ಯಾನ್ ಆಫ್ ಇಂಡಿಯಾ' ಖ್ಯಾತಿಯ ರಾಜೇಂದ್ರ ಸಿಂಗ್ ಹೇಳಿದ್ದಾರೆ. </p><p>ಇದಕ್ಕೂ ಮೊದಲು ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿಗೆ ಈ ಸಂಬಂಧ ಸವಿವರ ಪತ್ರ ಬರೆದಿದ್ದ ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ರಾಜೇಂದ್ರ ಸಿಂಗ್ ಅವರು, ಇದರಿಂದ ಅರಾವಳಿ ಬೆಟ್ಟ ಶ್ರೇಣಿಗಳ ಸಮಗ್ರತೆಗೆ ಧಕ್ಕೆಯಾಗಲಿದೆ. ಅಲ್ಲದೆ ಅರಾವಳಿಯ ಸಂರಕ್ಷಿತ ಪ್ರದೇಶಗಳಲ್ಲಿ ಗಣಿಗಾರಿಕೆ ನಡೆಯುವ ಅಪಾಯದ ಕುರಿತು ಕಳವಳ ವ್ಯಕ್ತಪಡಿಸಿದ್ದರು.</p>.ಅರಾವಳಿ ಗಣಿಗಾರಿಕೆ|ಪರ್ವತಗಳ ಉಳಿವಿಗೆ ಪ್ರತ್ಯೇಕ ಕಾನೂನು ಬೇಕು: ರಾಜೇಂದ್ರ ಸಿಂಗ್.ಅರಾವಳಿ ಪರ್ವತ ಶ್ರೇಣಿಯ ವ್ಯಾಖ್ಯಾನಕ್ಕೆ ಸುಪ್ರೀಂ ತಡೆ, ಪರಿಶೀಲನೆಗೆ ಸಮಿತಿ. <p>'ನನ್ನ ಇಡೀ ಜೀವನವನ್ನೇ ಪ್ರಕೃತಿ, ಜಲ ಮತ್ತು ಭೂಮಿಯ ರಕ್ಷಣೆಯ ಹೋರಾಟಕ್ಕಾಗಿ ಮುಡಿಪಾಗಿಟ್ಟಿದ್ದೇನೆ. ಈ ಹೋರಾಟ ಮುಂದುವರಿಯಲಿದೆ' ಎಂದು ಅವರು ಹೇಳಿದ್ದಾರೆ. </p><p>'ಅರಾವಳಿ, ಬೆಟ್ಟ ಶ್ರೇಣಿಗಳ ಪರಿಸರ ವ್ಯವಸ್ಥೆಯಾಗಿದೆ. ಗಾಳಿ, ಅಂತರ್ಜಲ, ಜಲ ವ್ಯವಸ್ಥೆ, ಸಸ್ಯವರ್ಗ, ಅರಣ್ಯ, ವನ್ಯಜೀವಿಗಳು ಸೇರಿದಂತೆ ಎಲ್ಲ ವಿಧದ ಜೀವವೈವಿಧ್ಯಗಳು ಒಟ್ಟಾಗಿ ಹಲವಾರು ವರ್ಷಗಳಿಂದ ಅರಾವಳಿಯನ್ನು ರೂಪಿಸಿವೆ. ಈ ಜೀವವೈವಿಧ್ಯಗಳು ಒಟ್ಟಾಗಿ ಅವುಗಳನ್ನು ಉಳಿಸಿಕೊಳ್ಳುತ್ತವೆ' ಎಂದಿದ್ದಾರೆ. </p><p>'ಹಾಗಿರುವಾಗ ಅದನ್ನು ಮರುವ್ಯಾಖ್ಯಾನಿಸಲು ಸಾಧ್ಯವೆ? ಇಂತಹ ಪರಿಸರ ವ್ಯವಸ್ಥೆಯನ್ನು ಸಂರಕ್ಷಿಸುವುದು ನಮ್ಮೆಲ್ಲರ ಕರ್ತ್ಯವ್ಯವಾಗಿದೆ. ಪ್ರಕೃತಿಗೆ ಸಂಬಂಧಿಸಿದ ಮೂಲಭೂತ ಸಾಂವಿಧಾನಿಕ ತತ್ವಗಳು ಅದನ್ನೇ ಸಾರಿ ಹೇಳುತ್ತವೆ' ಎಂದಿದ್ದಾರೆ. </p><p>'ಅರಾವಳಿಯ ಭೌಗೋಳಿಕ ಮಹತ್ವ ಎಲ್ಲರಿಗೂ ತಿಳಿದಿದೆ. ಇದರ ಮಹತ್ವವನ್ನು ಸುಪ್ರೀಂ ಕೋರ್ಟ್ ಸಹ ಒಪ್ಪಿಕೊಂಡಿದೆ. ಹಿಮಾಲಯ, ಸಮುದ್ರ ಮತ್ತು ಸುತ್ತುಮುತ್ತಲಿನ ಸಹ್ಯಾದ್ರಿ ಶ್ರೇಣಿಗಳ ಸಂರಚನೆಯಲ್ಲೂ ಅರಾವಳಿ ಪಾತ್ರ ವಹಿಸಿದೆ. ಹವಾಮಾನ ಬದಲಾವಣೆಯ ಈ ಸಮಯದಲ್ಲಿ ಅರಾವಳಿಗೆ ಹಾನಿಯನ್ನುಂಟು ಮಾಡುವ ಸ್ಥಿತಿಯನ್ನು ಊಹಿಸಲು ಸಾಧ್ಯವೇ?' ಎಂದು ಪ್ರಶ್ನಿಸಿದ್ದಾರೆ. </p><p>'ಅರಾವಳಿಯ ಸಂರಕ್ಷಣೆ ಹಾಗೂ ಅದರ ಹಸಿರನ್ನು ಸಮೃದ್ಧವಾಗಿಡುವುಡುವುದು ಈಗಿನ ಅಗತ್ಯವಾಗಿದೆ. ಇದರಿಂದ ನೈಸರ್ಗಿಕ ವಿಕೋಪಗಳಿಂದ ರಕ್ಷಣೆ ಪಡೆಯಲು ಸಾಧ್ಯ. ಹಾಗಾಗಿ ಅರಾವಳಿಗೆ ಹಾನಿಯಾಗುವ ಯಾವುದೇ ಗಣಿಗಾರಿಕೆ ಅಥವಾ ಅಭಿವೃದ್ಧಿ ಕಾಮಗಾರಿಗಳನ್ನು ತಿರಸ್ಕರಿಸಬೇಕು' ಎಂದು ವಿನಂತಿಸಿದ್ದಾರೆ. </p><p>1994ರಲ್ಲಿ ನಾನು ಸಲ್ಲಿಸಿದ ಅರ್ಜಿಯ ಅಧಾರದಲ್ಲಿ ನ್ಯಾಯಮೂರ್ತಿ ವೆಂಕಟಚಯ್ಯ ನೇತೃತ್ವದ ಪೀಠವು ಸರಿಸ್ಕಾದಲ್ಲಿ 478 ಗಣಿಗಳನ್ನು ಮುಚ್ಚಲು ಆದೇಶಿಸಿತ್ತು ಮತ್ತು ಅರಾವಳಿಯಾದ್ಯಂತ ಗಣಿಗಾರಿಕೆಯನ್ನು ನಿಲ್ಲಿಸಿತು ಎಂದು ಅವರು ಉಲ್ಲೇಖಿಸಿದ್ದಾರೆ. </p><p>ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಅರಾವಳಿ ಬೆಟ್ಟ ಮತ್ತು ಶ್ರೇಣಿಗಳ ರಕ್ಷಣೆಗಾಗಿ ಸುಪ್ರೀಂ ಕೋರ್ಟ್ ಅಗತ್ಯ ಕ್ರಮ ಕೈಗೊಳ್ಳುವಂತೆ ವಿನಂತಿಸಿದ್ದಾರೆ. </p><p>ಅರಾವಳಿ ಬೆಟ್ಟ ಮತ್ತು ಶ್ರೇಣಿಗಳ ಬಗೆಗಿನ ಮರುವ್ಯಾಖ್ಯಾನ ಕುರಿತು ನವೆಂಬರ್ 20ರ ತೀರ್ಪಿನಲ್ಲಿನ ನಿರ್ದೇಶನಗಳನ್ನು ಸುಪ್ರೀಂ ಕೋರ್ಟ್ ಇಂದು (ಡಿ.29) ತಡೆ ಹಿಡಿದಿದೆ. ಅಲ್ಲದೆ ಈ ವಿಷಯದ ಕುರಿತು ಸಮಗ್ರವಾಗಿ ಪರಿಶೀಲಿಸಲು ತಜ್ಞರನ್ನು ಒಳಗೊಂಡ ಉನ್ನತ ಸಮಿತಿಯನ್ನು ರಚಿಸಲು ಪ್ರಸ್ತಾಪಿಸಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಅರಾವಳಿ ಬೆಟ್ಟ ಶ್ರೇಣಿಗಳ ಬಗೆಗಿನ ಮರುವ್ಯಾಖ್ಯಾನ ಕುರಿತು ಸುಪ್ರೀಂ ಕೋರ್ಟ್ ನಿರ್ದೇಶನದಿಂದ ತೀವ್ರ ನೋವಾಗಿದ್ದು, ಇದೀಗ ನವೆಂಬರ್ 20 ನಿರ್ದೇಶನಗಳಿಗೆ ತಡೆ ನೀಡಿರುವುದನ್ನು ಸ್ವಾಗತಿಸುವುದಾಗಿ ಪರಿಸರ ಹೋರಾಟಗಾರ, 'ವಾಟರ್ಮ್ಯಾನ್ ಆಫ್ ಇಂಡಿಯಾ' ಖ್ಯಾತಿಯ ರಾಜೇಂದ್ರ ಸಿಂಗ್ ಹೇಳಿದ್ದಾರೆ. </p><p>ಇದಕ್ಕೂ ಮೊದಲು ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿಗೆ ಈ ಸಂಬಂಧ ಸವಿವರ ಪತ್ರ ಬರೆದಿದ್ದ ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ರಾಜೇಂದ್ರ ಸಿಂಗ್ ಅವರು, ಇದರಿಂದ ಅರಾವಳಿ ಬೆಟ್ಟ ಶ್ರೇಣಿಗಳ ಸಮಗ್ರತೆಗೆ ಧಕ್ಕೆಯಾಗಲಿದೆ. ಅಲ್ಲದೆ ಅರಾವಳಿಯ ಸಂರಕ್ಷಿತ ಪ್ರದೇಶಗಳಲ್ಲಿ ಗಣಿಗಾರಿಕೆ ನಡೆಯುವ ಅಪಾಯದ ಕುರಿತು ಕಳವಳ ವ್ಯಕ್ತಪಡಿಸಿದ್ದರು.</p>.ಅರಾವಳಿ ಗಣಿಗಾರಿಕೆ|ಪರ್ವತಗಳ ಉಳಿವಿಗೆ ಪ್ರತ್ಯೇಕ ಕಾನೂನು ಬೇಕು: ರಾಜೇಂದ್ರ ಸಿಂಗ್.ಅರಾವಳಿ ಪರ್ವತ ಶ್ರೇಣಿಯ ವ್ಯಾಖ್ಯಾನಕ್ಕೆ ಸುಪ್ರೀಂ ತಡೆ, ಪರಿಶೀಲನೆಗೆ ಸಮಿತಿ. <p>'ನನ್ನ ಇಡೀ ಜೀವನವನ್ನೇ ಪ್ರಕೃತಿ, ಜಲ ಮತ್ತು ಭೂಮಿಯ ರಕ್ಷಣೆಯ ಹೋರಾಟಕ್ಕಾಗಿ ಮುಡಿಪಾಗಿಟ್ಟಿದ್ದೇನೆ. ಈ ಹೋರಾಟ ಮುಂದುವರಿಯಲಿದೆ' ಎಂದು ಅವರು ಹೇಳಿದ್ದಾರೆ. </p><p>'ಅರಾವಳಿ, ಬೆಟ್ಟ ಶ್ರೇಣಿಗಳ ಪರಿಸರ ವ್ಯವಸ್ಥೆಯಾಗಿದೆ. ಗಾಳಿ, ಅಂತರ್ಜಲ, ಜಲ ವ್ಯವಸ್ಥೆ, ಸಸ್ಯವರ್ಗ, ಅರಣ್ಯ, ವನ್ಯಜೀವಿಗಳು ಸೇರಿದಂತೆ ಎಲ್ಲ ವಿಧದ ಜೀವವೈವಿಧ್ಯಗಳು ಒಟ್ಟಾಗಿ ಹಲವಾರು ವರ್ಷಗಳಿಂದ ಅರಾವಳಿಯನ್ನು ರೂಪಿಸಿವೆ. ಈ ಜೀವವೈವಿಧ್ಯಗಳು ಒಟ್ಟಾಗಿ ಅವುಗಳನ್ನು ಉಳಿಸಿಕೊಳ್ಳುತ್ತವೆ' ಎಂದಿದ್ದಾರೆ. </p><p>'ಹಾಗಿರುವಾಗ ಅದನ್ನು ಮರುವ್ಯಾಖ್ಯಾನಿಸಲು ಸಾಧ್ಯವೆ? ಇಂತಹ ಪರಿಸರ ವ್ಯವಸ್ಥೆಯನ್ನು ಸಂರಕ್ಷಿಸುವುದು ನಮ್ಮೆಲ್ಲರ ಕರ್ತ್ಯವ್ಯವಾಗಿದೆ. ಪ್ರಕೃತಿಗೆ ಸಂಬಂಧಿಸಿದ ಮೂಲಭೂತ ಸಾಂವಿಧಾನಿಕ ತತ್ವಗಳು ಅದನ್ನೇ ಸಾರಿ ಹೇಳುತ್ತವೆ' ಎಂದಿದ್ದಾರೆ. </p><p>'ಅರಾವಳಿಯ ಭೌಗೋಳಿಕ ಮಹತ್ವ ಎಲ್ಲರಿಗೂ ತಿಳಿದಿದೆ. ಇದರ ಮಹತ್ವವನ್ನು ಸುಪ್ರೀಂ ಕೋರ್ಟ್ ಸಹ ಒಪ್ಪಿಕೊಂಡಿದೆ. ಹಿಮಾಲಯ, ಸಮುದ್ರ ಮತ್ತು ಸುತ್ತುಮುತ್ತಲಿನ ಸಹ್ಯಾದ್ರಿ ಶ್ರೇಣಿಗಳ ಸಂರಚನೆಯಲ್ಲೂ ಅರಾವಳಿ ಪಾತ್ರ ವಹಿಸಿದೆ. ಹವಾಮಾನ ಬದಲಾವಣೆಯ ಈ ಸಮಯದಲ್ಲಿ ಅರಾವಳಿಗೆ ಹಾನಿಯನ್ನುಂಟು ಮಾಡುವ ಸ್ಥಿತಿಯನ್ನು ಊಹಿಸಲು ಸಾಧ್ಯವೇ?' ಎಂದು ಪ್ರಶ್ನಿಸಿದ್ದಾರೆ. </p><p>'ಅರಾವಳಿಯ ಸಂರಕ್ಷಣೆ ಹಾಗೂ ಅದರ ಹಸಿರನ್ನು ಸಮೃದ್ಧವಾಗಿಡುವುಡುವುದು ಈಗಿನ ಅಗತ್ಯವಾಗಿದೆ. ಇದರಿಂದ ನೈಸರ್ಗಿಕ ವಿಕೋಪಗಳಿಂದ ರಕ್ಷಣೆ ಪಡೆಯಲು ಸಾಧ್ಯ. ಹಾಗಾಗಿ ಅರಾವಳಿಗೆ ಹಾನಿಯಾಗುವ ಯಾವುದೇ ಗಣಿಗಾರಿಕೆ ಅಥವಾ ಅಭಿವೃದ್ಧಿ ಕಾಮಗಾರಿಗಳನ್ನು ತಿರಸ್ಕರಿಸಬೇಕು' ಎಂದು ವಿನಂತಿಸಿದ್ದಾರೆ. </p><p>1994ರಲ್ಲಿ ನಾನು ಸಲ್ಲಿಸಿದ ಅರ್ಜಿಯ ಅಧಾರದಲ್ಲಿ ನ್ಯಾಯಮೂರ್ತಿ ವೆಂಕಟಚಯ್ಯ ನೇತೃತ್ವದ ಪೀಠವು ಸರಿಸ್ಕಾದಲ್ಲಿ 478 ಗಣಿಗಳನ್ನು ಮುಚ್ಚಲು ಆದೇಶಿಸಿತ್ತು ಮತ್ತು ಅರಾವಳಿಯಾದ್ಯಂತ ಗಣಿಗಾರಿಕೆಯನ್ನು ನಿಲ್ಲಿಸಿತು ಎಂದು ಅವರು ಉಲ್ಲೇಖಿಸಿದ್ದಾರೆ. </p><p>ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಅರಾವಳಿ ಬೆಟ್ಟ ಮತ್ತು ಶ್ರೇಣಿಗಳ ರಕ್ಷಣೆಗಾಗಿ ಸುಪ್ರೀಂ ಕೋರ್ಟ್ ಅಗತ್ಯ ಕ್ರಮ ಕೈಗೊಳ್ಳುವಂತೆ ವಿನಂತಿಸಿದ್ದಾರೆ. </p><p>ಅರಾವಳಿ ಬೆಟ್ಟ ಮತ್ತು ಶ್ರೇಣಿಗಳ ಬಗೆಗಿನ ಮರುವ್ಯಾಖ್ಯಾನ ಕುರಿತು ನವೆಂಬರ್ 20ರ ತೀರ್ಪಿನಲ್ಲಿನ ನಿರ್ದೇಶನಗಳನ್ನು ಸುಪ್ರೀಂ ಕೋರ್ಟ್ ಇಂದು (ಡಿ.29) ತಡೆ ಹಿಡಿದಿದೆ. ಅಲ್ಲದೆ ಈ ವಿಷಯದ ಕುರಿತು ಸಮಗ್ರವಾಗಿ ಪರಿಶೀಲಿಸಲು ತಜ್ಞರನ್ನು ಒಳಗೊಂಡ ಉನ್ನತ ಸಮಿತಿಯನ್ನು ರಚಿಸಲು ಪ್ರಸ್ತಾಪಿಸಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>