<p><strong>ನವದೆಹಲಿ:</strong> ದೆಹಲಿಯಿಂದ ಗುಜರಾತ್ವರೆಗೆ ಸುಮಾರು 700 ಕಿ.ಮೀ ಉದ್ದ ಹರಡಿಕೊಂಡಿರುವ ಅರಾವಳಿ ಪರ್ವತ ಶ್ರೇಣಿಯ ಮರು ಅರಣ್ಯೀಕರಣ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವ ಪರಿಸರ ದಿನವಾದ ಗುರುವಾರ ಚಾಲನೆ ನೀಡಿದರು.</p>.<p>‘ಭೂಮಿಯ ಅತ್ಯಂತ ಹಳೆಯ ಪರ್ವತಶ್ರೇಣಿಗಳಲ್ಲಿ ಒಂದಾಗಿರುವ ಅರಾವಳಿಯು ಗುಜರಾತ್, ರಾಜಸ್ಥಾನ, ಹರಿಯಾಣ ಮತ್ತು ದೆಹಲಿಯಲ್ಲಿ ಹರಡಿಕೊಂಡಿದೆ. ಈ ಭಾಗವು ಹಲವು ವರ್ಷಗಳಿಂದ ನಾನಾ ಬಗೆಯ ಪರಿಸರ ಸವಾಲುಗಳನ್ನು ಎದುರಿಸುತ್ತಿದೆ. ಅವುಗಳನ್ನು ನಿವಾರಿಸಲು ಸರ್ಕಾರ ಬದ್ಧವಾಗಿದೆ’ ಎಂದು ಮೋದಿ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ. </p>.<p>‘ಈ ಪರ್ವತ ಶ್ರೇಣಿಯ ಜತೆಗೆ ಹೊಂದಿಕೊಂಡಿರುವ ಪ್ರದೇಶವನ್ನು ಪುನಶ್ಚೇತನಗೊಳಿಸುವುದಕ್ಕೆ ಆದ್ಯತೆ ನೀಡಲಿದ್ದೇವೆ. ಸ್ಥಳಿಯ ಆಡಳಿತದ ಜತೆಗೂಡಿ ಜಲ ವ್ಯವಸ್ಥೆ ಸುಧಾರಿಸುವ, ದೂಳಿನ ಬಿರುಗಾಳಿಯನ್ನು ಕಡಿಮೆಗೊಳಿಸುವ, ಪೂರ್ವ ಭಾಗದಲ್ಲಿ ಥಾರ್ ಮರುಭೂಮಿಯ ವಿಸ್ತರಣೆಯನ್ನು ತಡೆಯಯುವ ಹಲವು ಮಹತ್ವದ ಕ್ರಮಗಳನ್ನು ಈ ಯೋಜನೆ ಮೂಲಕ ಕೈಗೊಳ್ಳಲಿದ್ದೇವೆ. ದೇಶದ ಯುವ ಜನರು ಈ ಅಭಿಯಾನದಲ್ಲಿ ಪಾಲ್ಗೊಳ್ಳಬೇಕು’ ಎಂದು ಅವರು ಕರೆ ನೀಡಿದರು.</p>.<p><strong>ಯೋಜನೆ ಪ್ರಮುಖಾಂಶ:</strong> </p><p>* ದೆಹಲಿ ಹರಿಯಾಣ ರಾಜಸ್ಥಾನ ಮತ್ತು ಗುಜರಾತಿನ 29 ಜಿಲ್ಲೆಗಳಲ್ಲಿ ವ್ಯಾಪಿಸಿರುವ ಅರಾವಳಿ ಪರ್ವತ ಶ್ರೇಣಿಯ ಸುತ್ತಲಿನ ಐದು ಕಿ.ಮೀ ಬಫರ್ ಪ್ರದೇಶದಲ್ಲಿ ಹಸಿರು ಹೊದಿಕೆಯ ವಿಸ್ತರಣೆ </p><p>* ಈ ರಾಜ್ಯಗಳಲ್ಲಿ ವಾಯು ಮಾಲಿನ್ಯ ತಗ್ಗಿಸಲು ನೆರವಾಗುವುದರ ಜತೆಗೆ ಸಾರ ಕಳೆದುಕೊಂಡಿರುವ 2.60 ಕೋಟಿ ಹೆಕ್ಟೇರ್ ಪ್ರದೇಶವನ್ನು 2030ರ ವೇಳೆಗೆ ಪುನಶ್ಚೇತನಗೊಳಿಸುವ ಗುರಿ </p><p>* ಅರಾವಳಿ ಪ್ರದೇಶದಲ್ಲಿ ಅರಣ್ಯೀಕರಣ ಜಲ ಮೂಲಗಳ ಪುನಶ್ಚೇತನದ ಮೂಲಕ ಜೀವವೈವಿಧ್ಯದ ಸಂರಕ್ಷಣೆ ಮತ್ತು ವೃದ್ಧಿಗೆ ಕ್ರಮ </p><p>* ಸ್ಥಳೀಯ ಸಮುದಾಯಗಳಿಗೆ ಉದ್ಯೋಗಾವಕಾಶ ಸೃಷ್ಟಿಯ ಜತೆಗೆ ಅವರ ಆದಾಯ ಹೆಚ್ಚಿಸಲು ನೆರವು </p><p>* ಈ 29 ಜಿಲ್ಲೆಗಳಲ್ಲಿ ಸುಮಾರು 1000 ನರ್ಸರಿಗಳ ಅಭಿವೃದ್ಧಿಗೆ ಒತ್ತು </p><p>* ಥಾರ್ ಮರುಭೂಮಿಯ ವಿಸ್ತರಣೆ ತಡೆಯುವ ಮೂಲಕ ದಹೆಲಿ ಜೈಪುರ ಗುರುಗ್ರಾಮ ಸೇರಿದಂತೆ ಹಲವು ನಗರಗಳನ್ನು ಅಪಾಯದಿಂದ ತಪ್ಪಿಸುವ ಗುರಿ</p>.<p><strong>ಅಪಾಯಕ್ಕೆ ಸಿಲುಕಿರುವ ಅರಾವಳಿ</strong> </p><p>ಚಂಬಲ್ ಸಬರಮತಿ ಮತ್ತು ಲುನಿಯಂಥ ಪ್ರಮುಖ ನದಿಗಳು ಅರಾವಳಿ ಪರ್ವತ ಶ್ರೇಣಿಯಲ್ಲಿ ಹರಿಯುತ್ತವೆ. ಅರಣ್ಯ ಪ್ರದೇಶ ಹುಲ್ಲುಗಾವಲು ಮತ್ತು ಜೌಗು ಪ್ರದೇಶಗಳಿಂದ ಕೂಡಿರುವ ಈ ಶ್ರೇಣಿಯಲ್ಲಿ ಹಲವು ಬಗೆಯ ಪ್ರಾಣಿ ಪಕ್ಷಿ ಜೀವಸಂಕುಲ ಆಶ್ರಯ ಪಡೆದಿವೆ. ಅಲ್ಲದೆ ಅಳಿವಿನಂಚಿನಲ್ಲಿ ಇರುವ ಹಲವು ಪ್ರಭೇದದ ಸಸ್ಯ ಮತ್ತು ಪ್ರಾಣಿಗಳೂ ಇಲ್ಲಿ ನೆಲೆ ಕಂಡುಕೊಂಡಿವೆ. ಈ ಶ್ರೇಣಿಯಲ್ಲಿ ಅರಣ್ಯ ನಾಶ ಗಣಿಗಾರಿಕೆ ಜಾನುವಾರುಗಳ ಮೇಯಿಸುವಿಕೆ ಅರಣ್ಯ ಒತ್ತುವರಿ ನದಿಗಳ ಬತ್ತುವಿಕೆಯಿಂದ ಮರುಭೂಮಿ ಪ್ರದೇಶ ವಿಸ್ತರಿಸುತ್ತಿದೆ. ಇದರಿಂದ ಇಲ್ಲಿನ ವನ್ಯ ಜೀವಿ ಸಂಕುಲ ಅಪಾಯಕ್ಕೆ ಸಿಲುಕುತ್ತಿವೆ. ಸಾರ ಕಳೆದುಕೊಂಡಿರುವ ಈ ಭಾಗದ ಭೂ ಪ್ರದೇಶದ ಪೈಕಿ ರಾಜಸ್ಥಾನದಲ್ಲಿ ಶೇ 81 ಗುಜರಾತಿನಲ್ಲಿ ಶೇ 15.8 ಹರಿಯಾಣದಲ್ಲಿ ಶೇ 1.7 ಹಾಗೂ ದೆಹಲಿಯಲ್ಲಿ ಶೇ 1.6ರಷ್ಟು ಪಾಲನ್ನು ಹೊಂದಿವೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ದೆಹಲಿಯಿಂದ ಗುಜರಾತ್ವರೆಗೆ ಸುಮಾರು 700 ಕಿ.ಮೀ ಉದ್ದ ಹರಡಿಕೊಂಡಿರುವ ಅರಾವಳಿ ಪರ್ವತ ಶ್ರೇಣಿಯ ಮರು ಅರಣ್ಯೀಕರಣ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವ ಪರಿಸರ ದಿನವಾದ ಗುರುವಾರ ಚಾಲನೆ ನೀಡಿದರು.</p>.<p>‘ಭೂಮಿಯ ಅತ್ಯಂತ ಹಳೆಯ ಪರ್ವತಶ್ರೇಣಿಗಳಲ್ಲಿ ಒಂದಾಗಿರುವ ಅರಾವಳಿಯು ಗುಜರಾತ್, ರಾಜಸ್ಥಾನ, ಹರಿಯಾಣ ಮತ್ತು ದೆಹಲಿಯಲ್ಲಿ ಹರಡಿಕೊಂಡಿದೆ. ಈ ಭಾಗವು ಹಲವು ವರ್ಷಗಳಿಂದ ನಾನಾ ಬಗೆಯ ಪರಿಸರ ಸವಾಲುಗಳನ್ನು ಎದುರಿಸುತ್ತಿದೆ. ಅವುಗಳನ್ನು ನಿವಾರಿಸಲು ಸರ್ಕಾರ ಬದ್ಧವಾಗಿದೆ’ ಎಂದು ಮೋದಿ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ. </p>.<p>‘ಈ ಪರ್ವತ ಶ್ರೇಣಿಯ ಜತೆಗೆ ಹೊಂದಿಕೊಂಡಿರುವ ಪ್ರದೇಶವನ್ನು ಪುನಶ್ಚೇತನಗೊಳಿಸುವುದಕ್ಕೆ ಆದ್ಯತೆ ನೀಡಲಿದ್ದೇವೆ. ಸ್ಥಳಿಯ ಆಡಳಿತದ ಜತೆಗೂಡಿ ಜಲ ವ್ಯವಸ್ಥೆ ಸುಧಾರಿಸುವ, ದೂಳಿನ ಬಿರುಗಾಳಿಯನ್ನು ಕಡಿಮೆಗೊಳಿಸುವ, ಪೂರ್ವ ಭಾಗದಲ್ಲಿ ಥಾರ್ ಮರುಭೂಮಿಯ ವಿಸ್ತರಣೆಯನ್ನು ತಡೆಯಯುವ ಹಲವು ಮಹತ್ವದ ಕ್ರಮಗಳನ್ನು ಈ ಯೋಜನೆ ಮೂಲಕ ಕೈಗೊಳ್ಳಲಿದ್ದೇವೆ. ದೇಶದ ಯುವ ಜನರು ಈ ಅಭಿಯಾನದಲ್ಲಿ ಪಾಲ್ಗೊಳ್ಳಬೇಕು’ ಎಂದು ಅವರು ಕರೆ ನೀಡಿದರು.</p>.<p><strong>ಯೋಜನೆ ಪ್ರಮುಖಾಂಶ:</strong> </p><p>* ದೆಹಲಿ ಹರಿಯಾಣ ರಾಜಸ್ಥಾನ ಮತ್ತು ಗುಜರಾತಿನ 29 ಜಿಲ್ಲೆಗಳಲ್ಲಿ ವ್ಯಾಪಿಸಿರುವ ಅರಾವಳಿ ಪರ್ವತ ಶ್ರೇಣಿಯ ಸುತ್ತಲಿನ ಐದು ಕಿ.ಮೀ ಬಫರ್ ಪ್ರದೇಶದಲ್ಲಿ ಹಸಿರು ಹೊದಿಕೆಯ ವಿಸ್ತರಣೆ </p><p>* ಈ ರಾಜ್ಯಗಳಲ್ಲಿ ವಾಯು ಮಾಲಿನ್ಯ ತಗ್ಗಿಸಲು ನೆರವಾಗುವುದರ ಜತೆಗೆ ಸಾರ ಕಳೆದುಕೊಂಡಿರುವ 2.60 ಕೋಟಿ ಹೆಕ್ಟೇರ್ ಪ್ರದೇಶವನ್ನು 2030ರ ವೇಳೆಗೆ ಪುನಶ್ಚೇತನಗೊಳಿಸುವ ಗುರಿ </p><p>* ಅರಾವಳಿ ಪ್ರದೇಶದಲ್ಲಿ ಅರಣ್ಯೀಕರಣ ಜಲ ಮೂಲಗಳ ಪುನಶ್ಚೇತನದ ಮೂಲಕ ಜೀವವೈವಿಧ್ಯದ ಸಂರಕ್ಷಣೆ ಮತ್ತು ವೃದ್ಧಿಗೆ ಕ್ರಮ </p><p>* ಸ್ಥಳೀಯ ಸಮುದಾಯಗಳಿಗೆ ಉದ್ಯೋಗಾವಕಾಶ ಸೃಷ್ಟಿಯ ಜತೆಗೆ ಅವರ ಆದಾಯ ಹೆಚ್ಚಿಸಲು ನೆರವು </p><p>* ಈ 29 ಜಿಲ್ಲೆಗಳಲ್ಲಿ ಸುಮಾರು 1000 ನರ್ಸರಿಗಳ ಅಭಿವೃದ್ಧಿಗೆ ಒತ್ತು </p><p>* ಥಾರ್ ಮರುಭೂಮಿಯ ವಿಸ್ತರಣೆ ತಡೆಯುವ ಮೂಲಕ ದಹೆಲಿ ಜೈಪುರ ಗುರುಗ್ರಾಮ ಸೇರಿದಂತೆ ಹಲವು ನಗರಗಳನ್ನು ಅಪಾಯದಿಂದ ತಪ್ಪಿಸುವ ಗುರಿ</p>.<p><strong>ಅಪಾಯಕ್ಕೆ ಸಿಲುಕಿರುವ ಅರಾವಳಿ</strong> </p><p>ಚಂಬಲ್ ಸಬರಮತಿ ಮತ್ತು ಲುನಿಯಂಥ ಪ್ರಮುಖ ನದಿಗಳು ಅರಾವಳಿ ಪರ್ವತ ಶ್ರೇಣಿಯಲ್ಲಿ ಹರಿಯುತ್ತವೆ. ಅರಣ್ಯ ಪ್ರದೇಶ ಹುಲ್ಲುಗಾವಲು ಮತ್ತು ಜೌಗು ಪ್ರದೇಶಗಳಿಂದ ಕೂಡಿರುವ ಈ ಶ್ರೇಣಿಯಲ್ಲಿ ಹಲವು ಬಗೆಯ ಪ್ರಾಣಿ ಪಕ್ಷಿ ಜೀವಸಂಕುಲ ಆಶ್ರಯ ಪಡೆದಿವೆ. ಅಲ್ಲದೆ ಅಳಿವಿನಂಚಿನಲ್ಲಿ ಇರುವ ಹಲವು ಪ್ರಭೇದದ ಸಸ್ಯ ಮತ್ತು ಪ್ರಾಣಿಗಳೂ ಇಲ್ಲಿ ನೆಲೆ ಕಂಡುಕೊಂಡಿವೆ. ಈ ಶ್ರೇಣಿಯಲ್ಲಿ ಅರಣ್ಯ ನಾಶ ಗಣಿಗಾರಿಕೆ ಜಾನುವಾರುಗಳ ಮೇಯಿಸುವಿಕೆ ಅರಣ್ಯ ಒತ್ತುವರಿ ನದಿಗಳ ಬತ್ತುವಿಕೆಯಿಂದ ಮರುಭೂಮಿ ಪ್ರದೇಶ ವಿಸ್ತರಿಸುತ್ತಿದೆ. ಇದರಿಂದ ಇಲ್ಲಿನ ವನ್ಯ ಜೀವಿ ಸಂಕುಲ ಅಪಾಯಕ್ಕೆ ಸಿಲುಕುತ್ತಿವೆ. ಸಾರ ಕಳೆದುಕೊಂಡಿರುವ ಈ ಭಾಗದ ಭೂ ಪ್ರದೇಶದ ಪೈಕಿ ರಾಜಸ್ಥಾನದಲ್ಲಿ ಶೇ 81 ಗುಜರಾತಿನಲ್ಲಿ ಶೇ 15.8 ಹರಿಯಾಣದಲ್ಲಿ ಶೇ 1.7 ಹಾಗೂ ದೆಹಲಿಯಲ್ಲಿ ಶೇ 1.6ರಷ್ಟು ಪಾಲನ್ನು ಹೊಂದಿವೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>