ತಮ್ಮ ಬದುಕಿನ ಗತಿಸಿಹೋದ ದಿನಗಳನ್ನು ಮೆಲುಕು ಹಾಕಿದ ಅವರು, ‘2000ನೇ ಇಸವಿಯಲ್ಲಿ ಆದಾಯ ತೆರಿಗೆ ಆಯುಕ್ತನಾಗಿದ್ದಾಗ ದೆಹಲಿಯ ಕೊಳಗೇರಿಗಳಲ್ಲಿ ಕೆಲಸ ಮಾಡಲು ರಜೆ ಹಾಕಿದ್ದೆ. ಬಳಿಕ ಕೆಲಸಕ್ಕೆ ರಾಜೀನಾಮೆ ನೀಡಿ ಪೂರ್ಣಾವಧಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡೆ’ ಎಂದಿದ್ದಾರೆ.
‘ ಪಕ್ಷ ಕಟ್ಟುತ್ತೇನೆ, ಮುಖ್ಯಮಂತ್ರಿಯಾಗುತ್ತೇನೆ ಎಂದು ನಾನು ಆ ಸಮಯದಲ್ಲಿ ಯೋಚಿಸಿಯೇ ಇರಲಿಲ್ಲ. ನಾನು 10 ವರ್ಷ ಕೆಲಸ ಮಾಡಿದೆ. ಈ ವೇಳೆ ಕೂಡ ಪತ್ನಿ ನನಗೆ ಬೆಂಬಲ ನೀಡಿದರು. ಆ ವೇಳೆ ಅವರು ಎಷ್ಟೆಲ್ಲಾ ಕಷ್ಟ ಅನುಭವಿಸಿರಬಹುದು ಊಹಿಸಿ’ ಎಂದು ಹೇಳಿದ್ದಾರೆ.