ಗುವಾಹಟಿ:ಅಸ್ಸಾಂನ 22 ಜಿಲ್ಲೆಗಳಲ್ಲಿ ಮಳೆ ಮುಂದುವರೆದದ್ದು, ಬ್ರಹ್ಮಪುತ್ರ ನದಿ ಪಾತ್ರದಲ್ಲಿ ಭೀಕರ ಪ್ರವಾಹ ತಲೆದೋರಿದೆ. ಇದರಿಂದ 16,03,255 ಜನರು ಬಾಧಿತರಾಗಿದ್ದು, ನೆರೆಯಿಂದ ಸಾವಗೀಡಾದವರ ಸಂಖ್ಯೆ 34ಕ್ಕೆ ತಲುಪಿದೆ ಎಂದು ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.
ನೆರೆಯ ಹಿನ್ನೆಲೆಯಲ್ಲಿ ಸೂರು ಕಳೆದುಕೊಂಡ ಸುಮಾರು 12,597 ಜನರಿಗೆ 163 ಪರಿಹಾರ ಶಿಬಿರಗಳನ್ನು ತೆರೆಯಲಾಗಿದೆ.
ದಕ್ಷಿಣ ಅಸ್ಸಾಂನಲ್ಲಿ ಮಂಗಳವಾರ ನಸುಕಿನ ಜಾವ ಉಂಟಾದ ಭೂಕುಸಿತದಿಂದಾಗಿ ಮಕ್ಕಳು ಸೇರಿದಂತೆ 20 ಜನರು ಮೃತಪಟ್ಟಿದ್ದರು. ಕಛಾರ್ ಜಿಲ್ಲೆಯ ಕೋಲಾಪುರ್ ಗ್ರಾಮದಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಒಂದೇ ಕುಟುಂಬದ ಏಳು ಮಂದಿ ಸಾವಿಗೀಡಾಗಿದ್ದರು.
Assam: 22 dists of the state continue to reel under floods. Visuals from Goalpara where river Brahmaputra is flowing above danger level. Locals say "No one from govt has come to inspect our area. State govt should help us & provide some relief. Situation is very bad here" (02.07) pic.twitter.com/Irx0qFgDNW
ಬ್ರಹ್ಮಪುತ್ರ ನದಿ ಪಾತ್ರದಲ್ಲಿ ಅಪಾಯಮಟ್ಟ ಮೀರಿ ನೀರು ಹರಿಯುತ್ತಿದ್ದರೂ ಈ ಪ್ರದೇಶಕ್ಕೆ ಸರ್ಕಾರದ ಯಾವುದೇ ಪ್ರತಿನಿಧಿ ಭೇಟಿ ನೀಡಿ ಪರೀಕ್ಷಿಸಿಲ್ಲ. ಈ ಸಂದರ್ಭದಲ್ಲಿ ಸರ್ಕಾರವು ನಮಗೆ ಸಹಾಯ ಮಾಡಬೇಕು ಮತ್ತು ಪರಿಹಾರವನ್ನು ನೀಡಬೇಕು. ಇಲ್ಲಿ ಪರಿಸ್ಥಿತಿ ತುಂಬಾ ಆತಂಕಕಾಗಿಯಾಗಿದೆ ಎಂದು ಸ್ಥಳೀಯರು ತಿಳಿಸಿದ್ದನ್ನು ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
22 districts of Assam affected due to flood. Population of 16,03,255 affected, death toll due to flood stands at 34 after 1 death was reported in Matia today. 12,597 people staying in 163 relief camps: Assam State Disaster Management Authority pic.twitter.com/rsdOGWrPq1