<p><strong>ನವದೆಹಲಿ</strong>: ಮಧ್ಯಪ್ರದೇಶ, ರಾಜಸ್ಥಾನ ಹಾಗೂ ತೆಲಂಗಾಣ ವಿಧಾನಸಭಾ ಚುನಾವಣೆಯ ಫಲಿತಾಂಶಕ್ಕೆ ಸಂಬಂಧಿಸಿ ವಿದ್ಯುನ್ಮಾನ ಮಾಧ್ಯಮಗಳು ಮತ್ತು ಚುನಾವಣಾ ಏಜೆನ್ಸಿಗಳು ನಡೆಸಿದ ಮತಗಟ್ಟೆ ಸಮೀಕ್ಷೆಯು ಬಹುತೇಕ ನಿಜವಾಗಿದೆ. ಆದರೆ, ಛತ್ತೀಸಗಢದಲ್ಲಿ ಮತದಾರ ಪ್ರಭುಗಳು ಚುನಾವಣೋತ್ತರ ಸಮೀಕ್ಷೆಯನ್ನು ತಲೆಕೆಳಗೆ ಮಾಡಿ ಅಚ್ಚರಿ ಮೂಡಿಸಿದ್ದಾರೆ. </p>.<p>2024ರ ಲೋಕಸಭಾ ಚುನಾವಣೆಯ ‘ಸೆಮಿಫೈನಲ್’ ಎಂದೇ ಬಿಂಬಿತವಾಗಿದ್ದ ಐದು ರಾಜ್ಯದ ವಿಧಾನಸಭೆಗಳ ಪೈಕಿ ನಾಲ್ಕರ ಫಲಿತಾಂಶ ಹೊರಬಿದ್ದಿದೆ. </p>.<p>ತೆಲಂಗಾಣ ಹಾಗೂ ಛತ್ತೀಸಗಢದಲ್ಲಿ ಮತದಾರರು ಕಾಂಗ್ರೆಸ್ ಪಕ್ಷವನ್ನು ಅಧಿಕಾರದ ಚುಕ್ಕಾಣಿಯ ಸಮೀಪಕ್ಕೆ ಕರೆದೊಯ್ಯುತ್ತಾರೆ. ಅಲ್ಲದೇ, ಛತ್ತೀಸಗಢದಲ್ಲಿ ಕಾಂಗ್ರೆಸ್ಗೆ ಸರಳ ಬಹುಮತ ಲಭಿಸಲಿದೆ. ಬಿಜೆಪಿ ಪ್ರಬಲ ಪೈಪೋಟಿ ನೀಡಲಿದೆ ಎಂಬುದು ಬಹುತೇಕ ಸಮೀಕ್ಷೆಗಳ ಸಾರವಾಗಿತ್ತು.</p>.<p>ಆದರೆ, ತೆಲಂಗಾಣದಲ್ಲಿ ಮಾತ್ರವೇ ‘ಕೈ’ ಪಾಳಯ ಗೆಲುವಿನ ನಗೆ ಬೀರಿದೆ. ಛತ್ತೀಸಗಢದಲ್ಲಿ ಕಾಂಗ್ರೆಸ್ನ ಭೂಪೇಶ್ ಬಘೇಲ್ ಸರ್ಕಾರ ಮರಳಿ ಅಧಿಕಾರದ ಗದ್ದುಗೆ ಏರಲು ವಿಫಲವಾಗಿದೆ. ಇಲ್ಲಿ ಕಮಲ ಪಾಳಯ ಜಯಭೇರಿ ಬಾರಿಸಿದೆ. </p>.<p>2018ರ ಚುನಾವಣೆಯಲ್ಲೂ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಬಹುತೇಕ ಸಮೀಕ್ಷೆಗಳು ಹೇಳಿದ್ದವು. ಆದರೆ, ಕಾಂಗ್ರೆಸ್ ಅಧಿಕಾರಕ್ಕೆ ಬಂದಿತ್ತು.</p>.<p>ತೆಲಂಗಾಣದಲ್ಲಿ ಬಿಆರ್ಎಸ್ನ ಒಂದು ದಶಕದ ಆಡಳಿತ ಅಂತ್ಯಗೊಳ್ಳಲಿದೆ ಎಂದು ಹೆಚ್ಚಿನ ಸಮೀಕ್ಷೆಗಳು ಹೇಳಿದ್ದ ಭವಿಷ್ಯ ಬಹುತೇಕ ನಿಜವಾಗಿದೆ. </p>.<p>ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಬಿಜೆಪಿ ಅಧಿಕಾರದ ಸೂತ್ರ ಹಿಡಿಯಲಿದೆ ಎಂದು ಸಮೀಕ್ಷೆ ಹೇಳಿದ್ದವು.</p>.<p>ಮಧ್ಯಪ್ರದೇಶದಲ್ಲಿ ‘ಅಭೂತಪೂರ್ವ’ (140ಕ್ಕೂ ಅಧಿಕ ಸ್ಥಾನ) ಜಯಗಳಿಸಿ ಮತ್ತೆ ಬಿಜೆಪಿ ಅಧಿಕಾರಕ್ಕೇರಲಿದೆ ಎಂದು ‘ಇಂಡಿಯಾ ಟುಡೇ’, ‘ಇಂಡಿಯಾ ಟಿವಿ’ ಹಾಗೂ ‘ಟುಡೇಸ್ ಚಾಣಕ್ಯ’ ಸಮೀಕ್ಷೆಯಲ್ಲಿ ಹೇಳಲಾಗಿತ್ತು. ಸಿ ವೋಟರ್, ಟೈಮ್ಸ್ ನೌ ಹಾಗೂ ಟಿವಿ 9 ಭಾರತವರ್ಷ ಸಮೀಕ್ಷೆಗಳ ಪ್ರಕಾರ, ಕಾಂಗ್ರೆಸ್ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ತುರುಸಿನ ಸ್ಪರ್ಧೆ ಏರ್ಪಡಲಿದೆ. ಕಮಲ ಪಡೆ ಕೊಂಚ ಮೇಲುಗೈ ಸಾಧಿಸಿದೆ ಎಂಬುದು ಕೆಲ ಸಮೀಕ್ಷೆಗಳ ಲೆಕ್ಕಾಚಾರವಾಗಿತ್ತು. </p>.<p>ಆದರೆ, ಎಲ್ಲಾ ಸಮೀಕ್ಷೆಗಳ ಅಂದಾಜಿಗೂ ಮೀರಿ ಮಧ್ಯಪ್ರದೇಶದಲ್ಲಿ ಬಿಜೆಪಿಯು ಅತಿಹೆಚ್ಚು ಸ್ಥಾನಗಳಲ್ಲಿ ವಿಜಯ ದುಂದುಭಿ ಬಾರಿಸಿದೆ. ಸಮೀಕ್ಷೆ ಹೇಳಿದಂತೆ ರಾಜಸ್ಥಾನದಲ್ಲೂ ಜಯದ ಕೇಕೆ ಹಾಕಿದೆ.</p>.ತೆಲಂಗಾಣದ ನೂತನ ಸಿಎಂ ಆಗಿ ರೇವಂತ್ ರೆಡ್ಡಿ ಆಯ್ಕೆ: ಅವರ ಬಗ್ಗೆ ಮಾಹಿತಿ ಇಲ್ಲಿದೆ...ರೇವಂತ್ ರೆಡ್ಡಿ ಅಭಿನಂದಿಸಿದ ತೆಲಂಗಾಣ ಡಿಜಿಪಿ ಅಮಾನತು!.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಮಧ್ಯಪ್ರದೇಶ, ರಾಜಸ್ಥಾನ ಹಾಗೂ ತೆಲಂಗಾಣ ವಿಧಾನಸಭಾ ಚುನಾವಣೆಯ ಫಲಿತಾಂಶಕ್ಕೆ ಸಂಬಂಧಿಸಿ ವಿದ್ಯುನ್ಮಾನ ಮಾಧ್ಯಮಗಳು ಮತ್ತು ಚುನಾವಣಾ ಏಜೆನ್ಸಿಗಳು ನಡೆಸಿದ ಮತಗಟ್ಟೆ ಸಮೀಕ್ಷೆಯು ಬಹುತೇಕ ನಿಜವಾಗಿದೆ. ಆದರೆ, ಛತ್ತೀಸಗಢದಲ್ಲಿ ಮತದಾರ ಪ್ರಭುಗಳು ಚುನಾವಣೋತ್ತರ ಸಮೀಕ್ಷೆಯನ್ನು ತಲೆಕೆಳಗೆ ಮಾಡಿ ಅಚ್ಚರಿ ಮೂಡಿಸಿದ್ದಾರೆ. </p>.<p>2024ರ ಲೋಕಸಭಾ ಚುನಾವಣೆಯ ‘ಸೆಮಿಫೈನಲ್’ ಎಂದೇ ಬಿಂಬಿತವಾಗಿದ್ದ ಐದು ರಾಜ್ಯದ ವಿಧಾನಸಭೆಗಳ ಪೈಕಿ ನಾಲ್ಕರ ಫಲಿತಾಂಶ ಹೊರಬಿದ್ದಿದೆ. </p>.<p>ತೆಲಂಗಾಣ ಹಾಗೂ ಛತ್ತೀಸಗಢದಲ್ಲಿ ಮತದಾರರು ಕಾಂಗ್ರೆಸ್ ಪಕ್ಷವನ್ನು ಅಧಿಕಾರದ ಚುಕ್ಕಾಣಿಯ ಸಮೀಪಕ್ಕೆ ಕರೆದೊಯ್ಯುತ್ತಾರೆ. ಅಲ್ಲದೇ, ಛತ್ತೀಸಗಢದಲ್ಲಿ ಕಾಂಗ್ರೆಸ್ಗೆ ಸರಳ ಬಹುಮತ ಲಭಿಸಲಿದೆ. ಬಿಜೆಪಿ ಪ್ರಬಲ ಪೈಪೋಟಿ ನೀಡಲಿದೆ ಎಂಬುದು ಬಹುತೇಕ ಸಮೀಕ್ಷೆಗಳ ಸಾರವಾಗಿತ್ತು.</p>.<p>ಆದರೆ, ತೆಲಂಗಾಣದಲ್ಲಿ ಮಾತ್ರವೇ ‘ಕೈ’ ಪಾಳಯ ಗೆಲುವಿನ ನಗೆ ಬೀರಿದೆ. ಛತ್ತೀಸಗಢದಲ್ಲಿ ಕಾಂಗ್ರೆಸ್ನ ಭೂಪೇಶ್ ಬಘೇಲ್ ಸರ್ಕಾರ ಮರಳಿ ಅಧಿಕಾರದ ಗದ್ದುಗೆ ಏರಲು ವಿಫಲವಾಗಿದೆ. ಇಲ್ಲಿ ಕಮಲ ಪಾಳಯ ಜಯಭೇರಿ ಬಾರಿಸಿದೆ. </p>.<p>2018ರ ಚುನಾವಣೆಯಲ್ಲೂ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಬಹುತೇಕ ಸಮೀಕ್ಷೆಗಳು ಹೇಳಿದ್ದವು. ಆದರೆ, ಕಾಂಗ್ರೆಸ್ ಅಧಿಕಾರಕ್ಕೆ ಬಂದಿತ್ತು.</p>.<p>ತೆಲಂಗಾಣದಲ್ಲಿ ಬಿಆರ್ಎಸ್ನ ಒಂದು ದಶಕದ ಆಡಳಿತ ಅಂತ್ಯಗೊಳ್ಳಲಿದೆ ಎಂದು ಹೆಚ್ಚಿನ ಸಮೀಕ್ಷೆಗಳು ಹೇಳಿದ್ದ ಭವಿಷ್ಯ ಬಹುತೇಕ ನಿಜವಾಗಿದೆ. </p>.<p>ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಬಿಜೆಪಿ ಅಧಿಕಾರದ ಸೂತ್ರ ಹಿಡಿಯಲಿದೆ ಎಂದು ಸಮೀಕ್ಷೆ ಹೇಳಿದ್ದವು.</p>.<p>ಮಧ್ಯಪ್ರದೇಶದಲ್ಲಿ ‘ಅಭೂತಪೂರ್ವ’ (140ಕ್ಕೂ ಅಧಿಕ ಸ್ಥಾನ) ಜಯಗಳಿಸಿ ಮತ್ತೆ ಬಿಜೆಪಿ ಅಧಿಕಾರಕ್ಕೇರಲಿದೆ ಎಂದು ‘ಇಂಡಿಯಾ ಟುಡೇ’, ‘ಇಂಡಿಯಾ ಟಿವಿ’ ಹಾಗೂ ‘ಟುಡೇಸ್ ಚಾಣಕ್ಯ’ ಸಮೀಕ್ಷೆಯಲ್ಲಿ ಹೇಳಲಾಗಿತ್ತು. ಸಿ ವೋಟರ್, ಟೈಮ್ಸ್ ನೌ ಹಾಗೂ ಟಿವಿ 9 ಭಾರತವರ್ಷ ಸಮೀಕ್ಷೆಗಳ ಪ್ರಕಾರ, ಕಾಂಗ್ರೆಸ್ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ತುರುಸಿನ ಸ್ಪರ್ಧೆ ಏರ್ಪಡಲಿದೆ. ಕಮಲ ಪಡೆ ಕೊಂಚ ಮೇಲುಗೈ ಸಾಧಿಸಿದೆ ಎಂಬುದು ಕೆಲ ಸಮೀಕ್ಷೆಗಳ ಲೆಕ್ಕಾಚಾರವಾಗಿತ್ತು. </p>.<p>ಆದರೆ, ಎಲ್ಲಾ ಸಮೀಕ್ಷೆಗಳ ಅಂದಾಜಿಗೂ ಮೀರಿ ಮಧ್ಯಪ್ರದೇಶದಲ್ಲಿ ಬಿಜೆಪಿಯು ಅತಿಹೆಚ್ಚು ಸ್ಥಾನಗಳಲ್ಲಿ ವಿಜಯ ದುಂದುಭಿ ಬಾರಿಸಿದೆ. ಸಮೀಕ್ಷೆ ಹೇಳಿದಂತೆ ರಾಜಸ್ಥಾನದಲ್ಲೂ ಜಯದ ಕೇಕೆ ಹಾಕಿದೆ.</p>.ತೆಲಂಗಾಣದ ನೂತನ ಸಿಎಂ ಆಗಿ ರೇವಂತ್ ರೆಡ್ಡಿ ಆಯ್ಕೆ: ಅವರ ಬಗ್ಗೆ ಮಾಹಿತಿ ಇಲ್ಲಿದೆ...ರೇವಂತ್ ರೆಡ್ಡಿ ಅಭಿನಂದಿಸಿದ ತೆಲಂಗಾಣ ಡಿಜಿಪಿ ಅಮಾನತು!.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>