<p><strong>ಗುರುಗ್ರಾಮ:</strong> ಇಲ್ಲಿನ ಕ್ಲಬ್ವೊಂದರ ಮುಂಭಾಗದಲ್ಲಿ ಮಂಗಳವಾರ ಮುಂಜಾನೆ ನಡೆದ ಕಚ್ಚಾ ಬಾಂಬ್ ಸ್ಫೋಟದ ದಾಳಿಯ ಹೊಣೆಯನ್ನು ಪಾತಕಿ ರೋಹಿತ್ ಗೋದಾರಾ ಹೊತ್ತುಕೊಂಡಿದ್ದಾನೆ. ಈತ, ಕುಖ್ಯಾತ ಪಾತಕಿಗಳಾದ ಗೋಲ್ಡಿ ಬ್ರಾರ್ ಹಾಗೂ ಲಾರೆನ್ಸ್ ಬಿಷ್ಣೋಯಿಯ ಸಹಚರ ಎನ್ನಲಾಗಿದೆ.</p>.<p>‘ರಾಮ್– ರಾಮ್ ಜೈ ಶ್ರೀರಾಮ್. ನಾನು ರೋಹಿತ್ ಗೋದಾರಾ. ಗೋಲ್ಡಿ ಬ್ರಾರ್ನ ಸಹಚರ. ಚಂಡೀಗಢ ಹಾಗೂ ಗುರುಗ್ರಾಮದ ಸೆಕ್ಟರ್ 29ರಲ್ಲಿನ ಕ್ಲಬ್ಗಳ ಮುಂಭಾಗದಲ್ಲಿ ನಡೆದ ಸ್ಫೋಟಗಳ ರೂವಾರಿ’ ಎಂದು ರೋಹಿತ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾನೆ.</p>.<p>ಈ ಎರಡು ದಾಳಿಗಳು ಕೇವಲ ‘ಟ್ರೈಲರ್’ ಆಗಿದ್ದು, ಬಡವರ ಸುಲಿಗೆ ಮಾಡುವವರು ಹಾಗೂ ತೆರಿಗೆ ವಂಚಿಸಿ ಕೋಟ್ಯಂತರ ರೂಪಾಯಿ ಸಂಪಾದಿಸುವ ಕ್ಲಬ್ಗಳು ಹಾಗೂ ಹವಾಲಾ ದಂಧೆಕೋರರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಅವರು ಎಚ್ಚರಿಸಿದ್ದಾರೆ.</p>.<p>ಸ್ಫೋಟ ಪ್ರಕರಣ ಸಂಬಂಧ, ಗುರುಗ್ರಾಮ ಪೊಲೀಸರು ಸಚಿನ್ ತಾಲಿಯಾನ್ ಎಂಬಾತನನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಆತ ಹಲವು ಸಂಗತಿಗಳನ್ನು ಬಾಯಿಬಿಟ್ಟಿದ್ದು, ಅವುಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗುರುಗ್ರಾಮ:</strong> ಇಲ್ಲಿನ ಕ್ಲಬ್ವೊಂದರ ಮುಂಭಾಗದಲ್ಲಿ ಮಂಗಳವಾರ ಮುಂಜಾನೆ ನಡೆದ ಕಚ್ಚಾ ಬಾಂಬ್ ಸ್ಫೋಟದ ದಾಳಿಯ ಹೊಣೆಯನ್ನು ಪಾತಕಿ ರೋಹಿತ್ ಗೋದಾರಾ ಹೊತ್ತುಕೊಂಡಿದ್ದಾನೆ. ಈತ, ಕುಖ್ಯಾತ ಪಾತಕಿಗಳಾದ ಗೋಲ್ಡಿ ಬ್ರಾರ್ ಹಾಗೂ ಲಾರೆನ್ಸ್ ಬಿಷ್ಣೋಯಿಯ ಸಹಚರ ಎನ್ನಲಾಗಿದೆ.</p>.<p>‘ರಾಮ್– ರಾಮ್ ಜೈ ಶ್ರೀರಾಮ್. ನಾನು ರೋಹಿತ್ ಗೋದಾರಾ. ಗೋಲ್ಡಿ ಬ್ರಾರ್ನ ಸಹಚರ. ಚಂಡೀಗಢ ಹಾಗೂ ಗುರುಗ್ರಾಮದ ಸೆಕ್ಟರ್ 29ರಲ್ಲಿನ ಕ್ಲಬ್ಗಳ ಮುಂಭಾಗದಲ್ಲಿ ನಡೆದ ಸ್ಫೋಟಗಳ ರೂವಾರಿ’ ಎಂದು ರೋಹಿತ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾನೆ.</p>.<p>ಈ ಎರಡು ದಾಳಿಗಳು ಕೇವಲ ‘ಟ್ರೈಲರ್’ ಆಗಿದ್ದು, ಬಡವರ ಸುಲಿಗೆ ಮಾಡುವವರು ಹಾಗೂ ತೆರಿಗೆ ವಂಚಿಸಿ ಕೋಟ್ಯಂತರ ರೂಪಾಯಿ ಸಂಪಾದಿಸುವ ಕ್ಲಬ್ಗಳು ಹಾಗೂ ಹವಾಲಾ ದಂಧೆಕೋರರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಅವರು ಎಚ್ಚರಿಸಿದ್ದಾರೆ.</p>.<p>ಸ್ಫೋಟ ಪ್ರಕರಣ ಸಂಬಂಧ, ಗುರುಗ್ರಾಮ ಪೊಲೀಸರು ಸಚಿನ್ ತಾಲಿಯಾನ್ ಎಂಬಾತನನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಆತ ಹಲವು ಸಂಗತಿಗಳನ್ನು ಬಾಯಿಬಿಟ್ಟಿದ್ದು, ಅವುಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>