<p><strong>ಅಹಮದಾಬಾದ್: ‘</strong>ಏರ್ ಇಂಡಿಯಾ’ ಪ್ರಯಾಣಿಕ ವಿಮಾನ ಟೇಕಾಫ್ ಆದ ಕೆಲ ಕ್ಷಣಗಳಲ್ಲಿಯೇ ಪತನಗೊಂಡಿತ್ತು. ಈ ದುರಂತ ನಗರದಲ್ಲಿ ಆತಂಕದ ವಾತಾವರಣ ನಿರ್ಮಿಸಿತು. </p>.<p>ಇಡೀ ವಿಮಾನ ಬೆಂಕಿಗೆ ಆಹುತಿಯಾಗುತ್ತಿತ್ತು. ಅದು ಬಿದ್ದಿದ್ದ ಕಟ್ಟಡಕ್ಕೂ ಬಹುತೇಕ ಹಾನಿಯಾಗಿತ್ತು. ಹಲವು ಗಂಟೆಗಳ ಬಳಿಕವೂ ದುರಂತ ಸಂಭವಿಸಿದ ಸ್ಥಳದಿಂದ ದಟ್ಟ ಹೊಗೆ ಹೊರಹೊಮ್ಮುತ್ತಿತ್ತು. ಅದು ನಗರದ ವಿವಿಧ ಭಾಗಗಳಿಗೆ ಗೋಚರಿಸುತ್ತಿತ್ತು.</p>.<p><strong>ಓಡೋಡಿ ಬಂದರು:</strong></p>.<p>ಈ ದೃಶ್ಯಗಳಿಂದ ಆಘಾತಕ್ಕೆ ಒಳಗಾಗಿದ್ದ ನಗರದ ಜನರು, ಸಾಧ್ಯವಾದಷ್ಟು ಜೀವಗಳನ್ನು ಉಳಿಸಲೆಂದು ಓಡೋಡಿ ಬರುತ್ತಿದ್ದದ್ದು ಕಂಡು ಬಂದಿತು ಎಂದು ಬಿಬಿಸಿ ವರದಿ ಮಾಡಿದೆ.</p>.<p>ಅಗ್ನಿಶಾಮಕ ದಳದವರು ಬೆಂಕಿ ನಂದಿಸಲು ಮತ್ತು ಹೊಗೆ ನಿಯಂತ್ರಿಸಲು ಹರಸಾಹಸ ಪಡುತ್ತಿದ್ದರು. ಅವಶೇಷಗಳಡಿ ಸಿಲುಕಿದ್ದ ಮೃತ ದೇಹಗಳನ್ನು ಹೊರತರಲು ಶ್ರಮಿಸುತ್ತಿದ್ದರು. ದುರಂತ ಸಂಭವಿಸಿದ ಪ್ರದೇಶದತ್ತ ಆಂಬುಲೆನ್ಸ್ಗಳು ಧಾವಿಸಿ ಬಂದವು. ರಸ್ತೆಗಳಲ್ಲಿ ಸಂಚಾರವನ್ನು ನಿರ್ಬಂಧಿಸಿ ರಕ್ಷಣಾ ಕಾರ್ಯಗಳಿಗೆ ಒತ್ತು ನೀಡಲಾಗಿತ್ತು. </p>.<p>ವಿಮಾನದಲ್ಲಿ ಲಂಡನ್ಗೆ ಪ್ರಯಾಣಿಸುತ್ತಿದ್ದವರ ಸಂಬಂಧಿಕರು, ವಿಷಯ ತಿಳಿದ ಕೂಡಲೇ ಸ್ಥಳದತ್ತ ಆತಂಕದಿಂದ ಧಾವಿಸಿ ಬಂದರು. </p>.<p>ಅಹಮದಾಬಾದ್ನಿಂದ ಲಂಡನ್ಗೆ ಗುರುವಾರ ಮಧ್ಯಾಹ್ನ ಹೊರಟಿದ್ದ ವಿಮಾನ, ಟೇಕಾಫ್ ಆದ ಕೆಲ ಕ್ಷಣಗಳಲ್ಲಿಯೇ ಪತನಗೊಂಡಿತ್ತು. ವಿಮಾನದಲ್ಲಿ ಭಾರತ, ಬ್ರಿಟನ್, ಪೋರ್ಚುಗಲ್ ಮತ್ತು ಕೆನಡದ 242 ಪ್ರಜೆಗಳು ಪ್ರಯಾಣಿಸುತ್ತಿದ್ದರು. </p>.<p><strong>ಭಾರಿ ಶಬ್ದ, ಕಪ್ಪು ಹೊಗೆ:</strong></p>.<p>ಗುಜರಾತಿನ ಪ್ರಮುಖ ನಗರವಾದ ಅಹಮದಾಬಾದ್ನ ಜನರು, ವಿಮಾನ ಪತನದ ವೇಳೆ ಭಾರಿ ಪ್ರಮಾಣದ ಶಬ್ದ ಕೇಳಿಸಿಕೊಂಡರು. ಅದರ ಬೆನ್ನಲ್ಲೇ ಆಕಾಶದಲ್ಲಿ ದಟ್ಟವಾದ ಕಪ್ಪುಹೊಗೆ ಹೊರಹೊಮ್ಮುತ್ತಿದ್ದುದನ್ನು ಗಮನಿಸಿದರು.</p>.<p>‘ನಾವು ಮನೆಯಲ್ಲಿದ್ದಾಗ ಭಾರಿ ಶಬ್ದ ಕೇಳಿಸಿತು. ಏನಾಗಿದೆ ಎಂದು ಹೊರಗೆ ಬಂದು ನೋಡಿದಾಗ, ಆಗಸದಲ್ಲಿ ದಟ್ಟ ಹೊಗೆ ಆವರಿಸಿತ್ತು. ಕೂಡಲೇ ದುರಂತ ಸಂಭವಿಸಿದ ಸ್ಥಳಕ್ಕೆ ಬಂದೆವು. ಅಲ್ಲೆಲ್ಲ ವಿಮಾನದ ಅವಶೇಷಗಳು, ಮೃತ ದೇಹಗಳು ಚೆಲ್ಲಾಪಿಲ್ಲಿಯಾಗಿದ್ದವು’ ಎಂದು ಸ್ಥಳೀಯ ನಿವಾಸಿಯೊಬ್ಬರು ಆತಂಕದಿಂದ ಹೇಳಿದರು.</p>.<p>ಸಾರ್ವಜನಿಕ ಆಸ್ಪತ್ರೆ ಬಳಿಯ ವೈದ್ಯಕೀಯ ವಿದ್ಯಾರ್ಥಿಗಳ ಹಾಸ್ಟೆಲ್ ಕಟ್ಟಡದ ಮೇಲೆ ವಿಮಾನ ಪತನಗೊಂಡಿತ್ತು. ಈ ವೇಳೆ, ಹಾಸ್ಟೆಲ್ನಲ್ಲಿ ಎಷ್ಟು ವಿದ್ಯಾರ್ಥಿಗಳಿದ್ದರು ಎಂಬುದರ ಸ್ಪಷ್ಟತೆಯಿಲ್ಲ. ಆದರೆ ಪ್ರತ್ಯಕ್ಷದರ್ಶಿಯ ಪ್ರಕಾರ, ದುರಂತ ಸಂಭವಿಸಿದಾಗ ಹಲವು ವಿದ್ಯಾರ್ಥಿಗಳು ತಮ್ಮ ಜೀವ ಉಳಿಸಿಕೊಳ್ಳಲು ಹಾಸ್ಟೆಲ್ನ ವಿವಿಧ ಮಹಡಿಗಳಿಂದ ಕೆಳಗೆ ಹಾರಿದರು. </p>.<p>‘ಕಟ್ಟಡದ ಮೇಲೆ ಬಿದ್ದಿದ್ದ ವಿಮಾನದಿಂದ ಬೆಂಕಿ ಬರುತ್ತಿತ್ತು. ಈ ವೇಳೆ ಹಾಸ್ಟೆಲ್ನ ಹಲವು ವಿದ್ಯಾರ್ಥಿಗಳನ್ನು ರಕ್ಷಿಸಿದೆವು. ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸಿದೆವು’ ಎಂದು ಸ್ಥಳೀಯ ನಿವಾಸಿಯೊಬ್ಬರು ತಿಳಿಸಿದರು.</p>.ವಿಮಾನ ದುರಂತ: ಅನುಭವಿಗಳಾಗಿದ್ದ ಪೈಲಟ್ಗಳು.ವಿಮಾನ ದುರಂತ: ಮೃತಪಟ್ಟವರಲ್ಲಿ ಕೇರಳದ ದಾದಿ .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅಹಮದಾಬಾದ್: ‘</strong>ಏರ್ ಇಂಡಿಯಾ’ ಪ್ರಯಾಣಿಕ ವಿಮಾನ ಟೇಕಾಫ್ ಆದ ಕೆಲ ಕ್ಷಣಗಳಲ್ಲಿಯೇ ಪತನಗೊಂಡಿತ್ತು. ಈ ದುರಂತ ನಗರದಲ್ಲಿ ಆತಂಕದ ವಾತಾವರಣ ನಿರ್ಮಿಸಿತು. </p>.<p>ಇಡೀ ವಿಮಾನ ಬೆಂಕಿಗೆ ಆಹುತಿಯಾಗುತ್ತಿತ್ತು. ಅದು ಬಿದ್ದಿದ್ದ ಕಟ್ಟಡಕ್ಕೂ ಬಹುತೇಕ ಹಾನಿಯಾಗಿತ್ತು. ಹಲವು ಗಂಟೆಗಳ ಬಳಿಕವೂ ದುರಂತ ಸಂಭವಿಸಿದ ಸ್ಥಳದಿಂದ ದಟ್ಟ ಹೊಗೆ ಹೊರಹೊಮ್ಮುತ್ತಿತ್ತು. ಅದು ನಗರದ ವಿವಿಧ ಭಾಗಗಳಿಗೆ ಗೋಚರಿಸುತ್ತಿತ್ತು.</p>.<p><strong>ಓಡೋಡಿ ಬಂದರು:</strong></p>.<p>ಈ ದೃಶ್ಯಗಳಿಂದ ಆಘಾತಕ್ಕೆ ಒಳಗಾಗಿದ್ದ ನಗರದ ಜನರು, ಸಾಧ್ಯವಾದಷ್ಟು ಜೀವಗಳನ್ನು ಉಳಿಸಲೆಂದು ಓಡೋಡಿ ಬರುತ್ತಿದ್ದದ್ದು ಕಂಡು ಬಂದಿತು ಎಂದು ಬಿಬಿಸಿ ವರದಿ ಮಾಡಿದೆ.</p>.<p>ಅಗ್ನಿಶಾಮಕ ದಳದವರು ಬೆಂಕಿ ನಂದಿಸಲು ಮತ್ತು ಹೊಗೆ ನಿಯಂತ್ರಿಸಲು ಹರಸಾಹಸ ಪಡುತ್ತಿದ್ದರು. ಅವಶೇಷಗಳಡಿ ಸಿಲುಕಿದ್ದ ಮೃತ ದೇಹಗಳನ್ನು ಹೊರತರಲು ಶ್ರಮಿಸುತ್ತಿದ್ದರು. ದುರಂತ ಸಂಭವಿಸಿದ ಪ್ರದೇಶದತ್ತ ಆಂಬುಲೆನ್ಸ್ಗಳು ಧಾವಿಸಿ ಬಂದವು. ರಸ್ತೆಗಳಲ್ಲಿ ಸಂಚಾರವನ್ನು ನಿರ್ಬಂಧಿಸಿ ರಕ್ಷಣಾ ಕಾರ್ಯಗಳಿಗೆ ಒತ್ತು ನೀಡಲಾಗಿತ್ತು. </p>.<p>ವಿಮಾನದಲ್ಲಿ ಲಂಡನ್ಗೆ ಪ್ರಯಾಣಿಸುತ್ತಿದ್ದವರ ಸಂಬಂಧಿಕರು, ವಿಷಯ ತಿಳಿದ ಕೂಡಲೇ ಸ್ಥಳದತ್ತ ಆತಂಕದಿಂದ ಧಾವಿಸಿ ಬಂದರು. </p>.<p>ಅಹಮದಾಬಾದ್ನಿಂದ ಲಂಡನ್ಗೆ ಗುರುವಾರ ಮಧ್ಯಾಹ್ನ ಹೊರಟಿದ್ದ ವಿಮಾನ, ಟೇಕಾಫ್ ಆದ ಕೆಲ ಕ್ಷಣಗಳಲ್ಲಿಯೇ ಪತನಗೊಂಡಿತ್ತು. ವಿಮಾನದಲ್ಲಿ ಭಾರತ, ಬ್ರಿಟನ್, ಪೋರ್ಚುಗಲ್ ಮತ್ತು ಕೆನಡದ 242 ಪ್ರಜೆಗಳು ಪ್ರಯಾಣಿಸುತ್ತಿದ್ದರು. </p>.<p><strong>ಭಾರಿ ಶಬ್ದ, ಕಪ್ಪು ಹೊಗೆ:</strong></p>.<p>ಗುಜರಾತಿನ ಪ್ರಮುಖ ನಗರವಾದ ಅಹಮದಾಬಾದ್ನ ಜನರು, ವಿಮಾನ ಪತನದ ವೇಳೆ ಭಾರಿ ಪ್ರಮಾಣದ ಶಬ್ದ ಕೇಳಿಸಿಕೊಂಡರು. ಅದರ ಬೆನ್ನಲ್ಲೇ ಆಕಾಶದಲ್ಲಿ ದಟ್ಟವಾದ ಕಪ್ಪುಹೊಗೆ ಹೊರಹೊಮ್ಮುತ್ತಿದ್ದುದನ್ನು ಗಮನಿಸಿದರು.</p>.<p>‘ನಾವು ಮನೆಯಲ್ಲಿದ್ದಾಗ ಭಾರಿ ಶಬ್ದ ಕೇಳಿಸಿತು. ಏನಾಗಿದೆ ಎಂದು ಹೊರಗೆ ಬಂದು ನೋಡಿದಾಗ, ಆಗಸದಲ್ಲಿ ದಟ್ಟ ಹೊಗೆ ಆವರಿಸಿತ್ತು. ಕೂಡಲೇ ದುರಂತ ಸಂಭವಿಸಿದ ಸ್ಥಳಕ್ಕೆ ಬಂದೆವು. ಅಲ್ಲೆಲ್ಲ ವಿಮಾನದ ಅವಶೇಷಗಳು, ಮೃತ ದೇಹಗಳು ಚೆಲ್ಲಾಪಿಲ್ಲಿಯಾಗಿದ್ದವು’ ಎಂದು ಸ್ಥಳೀಯ ನಿವಾಸಿಯೊಬ್ಬರು ಆತಂಕದಿಂದ ಹೇಳಿದರು.</p>.<p>ಸಾರ್ವಜನಿಕ ಆಸ್ಪತ್ರೆ ಬಳಿಯ ವೈದ್ಯಕೀಯ ವಿದ್ಯಾರ್ಥಿಗಳ ಹಾಸ್ಟೆಲ್ ಕಟ್ಟಡದ ಮೇಲೆ ವಿಮಾನ ಪತನಗೊಂಡಿತ್ತು. ಈ ವೇಳೆ, ಹಾಸ್ಟೆಲ್ನಲ್ಲಿ ಎಷ್ಟು ವಿದ್ಯಾರ್ಥಿಗಳಿದ್ದರು ಎಂಬುದರ ಸ್ಪಷ್ಟತೆಯಿಲ್ಲ. ಆದರೆ ಪ್ರತ್ಯಕ್ಷದರ್ಶಿಯ ಪ್ರಕಾರ, ದುರಂತ ಸಂಭವಿಸಿದಾಗ ಹಲವು ವಿದ್ಯಾರ್ಥಿಗಳು ತಮ್ಮ ಜೀವ ಉಳಿಸಿಕೊಳ್ಳಲು ಹಾಸ್ಟೆಲ್ನ ವಿವಿಧ ಮಹಡಿಗಳಿಂದ ಕೆಳಗೆ ಹಾರಿದರು. </p>.<p>‘ಕಟ್ಟಡದ ಮೇಲೆ ಬಿದ್ದಿದ್ದ ವಿಮಾನದಿಂದ ಬೆಂಕಿ ಬರುತ್ತಿತ್ತು. ಈ ವೇಳೆ ಹಾಸ್ಟೆಲ್ನ ಹಲವು ವಿದ್ಯಾರ್ಥಿಗಳನ್ನು ರಕ್ಷಿಸಿದೆವು. ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸಿದೆವು’ ಎಂದು ಸ್ಥಳೀಯ ನಿವಾಸಿಯೊಬ್ಬರು ತಿಳಿಸಿದರು.</p>.ವಿಮಾನ ದುರಂತ: ಅನುಭವಿಗಳಾಗಿದ್ದ ಪೈಲಟ್ಗಳು.ವಿಮಾನ ದುರಂತ: ಮೃತಪಟ್ಟವರಲ್ಲಿ ಕೇರಳದ ದಾದಿ .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>