‘ಅಯೋಧ್ಯೆ ತೀರ್ಪು ಪ್ರಕಟವಾದ ದಿನ ನ. 9ರಂದು ಹೇಗೆ ವ್ಯಾಪಕ ಬಂದೋಬಸ್ತ್ ಮತ್ತು ಕಟ್ಟೆಚ್ಚರ ವಹಿಸಿದ್ದೆವೋ, ಡಿ. 6ರಂದು ಅಷ್ಟೇ ಕಟ್ಟೆಚ್ಚರ ಮತ್ತು ಬಂದೋಬಸ್ತ್ ಮಾಡಲಾಗಿದೆ. ನ.9ರಂದು ರೂಪಿಸಿದ ಯೋಜನೆಯ ಮುಂದುವರಿಕೆಯಾಗಿ ಡಿ. 6ರ ಭದ್ರತಾ ವ್ಯವಸ್ಥೆ ಇರಲಿದೆ’ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಪಿ.ವಿ. ರಾಮಶಾಸ್ತ್ರಿ ಹೇಳಿದ್ದಾರೆ.