<p><strong>ನವದೆಹಲಿ</strong>: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಜಾತಿ ಕುರಿತಂತೆ ಮಾತನಾಡಿರುವ ರಾಹುಲ್ ಗಾಂಧಿಯವರ ಹೇಳಿಕೆಯನ್ನು ಖಂಡಿಸಿರುವ ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗದ ಅಧ್ಯಕ್ಷ ಹಂಸರಾಜ್ ಅಹೀರ್ ಅವರು, ಕೂಡಲೇ ಕ್ಷಮೆಯಾಚನೆಗೆ ಒತ್ತಾಯಿಸಿದ್ದಾರೆ.</p><p>ಜಾತಿಗಳ ಕುರಿತಂತೆ ‘ಬುದ್ದಿಹೀನ ಮಾತು’ ಗಳಿಂದ ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ದೇಶದಲ್ಲಿ ವಿಭಜನೆಯ ಬೀಜ ಬಿತ್ತಲು ಯತ್ನಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. </p><p>‘ಗೌರವಾನ್ವಿತ ಪ್ರಧಾನ ಮಂತ್ರಿಗಳ ಬಗ್ಗೆ ರಾಹುಲ್ ಗಾಂಧಿಯವರು ನೀಡಿರುವ ಬುದ್ಧಿಹೀನ ಹೇಳಿಕೆ ಕುರಿತಂತೆ ದೇಶದಾದ್ಯಂತ ಇರುವ ಕೋಟ್ಯಂತರ ಹಿಂದುಳಿದ ವರ್ಗಗಳ ಜನ ಕೋಪದಿಂದ ಕುದಿಯುತ್ತಿದ್ದಾರೆ’ ಎಂದು ಅಹೀರ್ ಹೇಳಿದ್ದಾರೆ.</p><p> ಮೋದಿ ಅವರು ಬರುವ ‘ಮೋಧ್ ಘಾಂಛಿ’ ಸಮುದಾಯವನ್ನು ಸಮೀಕ್ಷೆ ವರದಿ ಆಧರಿಸಿ ಇತರೆ ಹಿಂದುಳಿದ ವರ್ಗಗಳ(ಒಬಿಸಿ) ಪಟ್ಟಿಗೆ ಸೇರಿಸುವ ಕುರಿತಂತೆ 1994ರ ಜುಲೈ 25ರಲ್ಲೇ ಗುಜರಾತ್ ಸರ್ಕಾರ ಅಧಿಸೂಚನೆ ಹೊರಡಿಸಿತ್ತು. </p><p>ಬಳಿಕ, 1997ರಲ್ಲಿ ‘ಮೋಧ್ ಘಾಂಛಿ’ ಸಮುದಾಯವನ್ನು ಇತರೆ ಹಿಂದುಳಿದ ವರ್ಗಗಳ(ಒಬಿಸಿ) ಪಟ್ಟಿಗೆ ಸೇರಿಸುವ ಕುರಿತಂತೆ ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗವು ಕೇಂದ್ರಕ್ಕೆ ಶಿಫಾರಸು ಮಾಡಿತ್ತು. ಅದರನ್ವಯ, 1999 ಅಕ್ಟೋಬರ್ 27ರಲ್ಲೇ ಅಧಿಸೂಚನೆ ಹೊರಡಿಸಲಾಗಿದೆ ಎಂದು ಅವರು ಹೇಳಿದ್ದಾರೆ.</p><p>‘ಆ ಎರಡೂ ನಿರ್ಧಾರಗಳು ಆದಾಗ ಮೋದಿಯವರು ಯಾವುದೇ ಅಧಿಕಾರದಲ್ಲಿ ಇರಲಿಲ್ಲ ’ಎಂದು ಅವರು ಸ್ಪಷ್ಟಪಡಿಸಿದ್ದಾರೆ.</p><p>ಓಬಿಸಿ ಬಗ್ಗೆ ರಾಹುಲ್ ಗಾಂಧಿ ದ್ವೇಷವನ್ನು ನೋಡಿದರೆ ಭಯಾನಕವೆನಿಸುತ್ತಿದೆ. ಕಾಂಗ್ರೆಸ್ ಮಾಜಿ ಅಧ್ಯಕ್ಷರು ಇದನ್ನು ಸ್ಪಷ್ಟವಾಗಿ ತಮ್ಮ ಪೂರ್ವಜರಿಂದ ಅನುವಂಶಿಕವಾಗಿ ಪಡೆದುಕೊಂಡಿದ್ದಾರೆ ಎಂದು ಅವರು ಕುಟುಕಿದ್ದಾರೆ.</p> .ಮೋದಿ ಜನ್ಮತಃ ಒಬಿಸಿ ವರ್ಗದವರಲ್ಲ: ರಾಹುಲ್ ಗಾಂಧಿ ಆರೋಪ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಜಾತಿ ಕುರಿತಂತೆ ಮಾತನಾಡಿರುವ ರಾಹುಲ್ ಗಾಂಧಿಯವರ ಹೇಳಿಕೆಯನ್ನು ಖಂಡಿಸಿರುವ ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗದ ಅಧ್ಯಕ್ಷ ಹಂಸರಾಜ್ ಅಹೀರ್ ಅವರು, ಕೂಡಲೇ ಕ್ಷಮೆಯಾಚನೆಗೆ ಒತ್ತಾಯಿಸಿದ್ದಾರೆ.</p><p>ಜಾತಿಗಳ ಕುರಿತಂತೆ ‘ಬುದ್ದಿಹೀನ ಮಾತು’ ಗಳಿಂದ ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ದೇಶದಲ್ಲಿ ವಿಭಜನೆಯ ಬೀಜ ಬಿತ್ತಲು ಯತ್ನಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. </p><p>‘ಗೌರವಾನ್ವಿತ ಪ್ರಧಾನ ಮಂತ್ರಿಗಳ ಬಗ್ಗೆ ರಾಹುಲ್ ಗಾಂಧಿಯವರು ನೀಡಿರುವ ಬುದ್ಧಿಹೀನ ಹೇಳಿಕೆ ಕುರಿತಂತೆ ದೇಶದಾದ್ಯಂತ ಇರುವ ಕೋಟ್ಯಂತರ ಹಿಂದುಳಿದ ವರ್ಗಗಳ ಜನ ಕೋಪದಿಂದ ಕುದಿಯುತ್ತಿದ್ದಾರೆ’ ಎಂದು ಅಹೀರ್ ಹೇಳಿದ್ದಾರೆ.</p><p> ಮೋದಿ ಅವರು ಬರುವ ‘ಮೋಧ್ ಘಾಂಛಿ’ ಸಮುದಾಯವನ್ನು ಸಮೀಕ್ಷೆ ವರದಿ ಆಧರಿಸಿ ಇತರೆ ಹಿಂದುಳಿದ ವರ್ಗಗಳ(ಒಬಿಸಿ) ಪಟ್ಟಿಗೆ ಸೇರಿಸುವ ಕುರಿತಂತೆ 1994ರ ಜುಲೈ 25ರಲ್ಲೇ ಗುಜರಾತ್ ಸರ್ಕಾರ ಅಧಿಸೂಚನೆ ಹೊರಡಿಸಿತ್ತು. </p><p>ಬಳಿಕ, 1997ರಲ್ಲಿ ‘ಮೋಧ್ ಘಾಂಛಿ’ ಸಮುದಾಯವನ್ನು ಇತರೆ ಹಿಂದುಳಿದ ವರ್ಗಗಳ(ಒಬಿಸಿ) ಪಟ್ಟಿಗೆ ಸೇರಿಸುವ ಕುರಿತಂತೆ ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗವು ಕೇಂದ್ರಕ್ಕೆ ಶಿಫಾರಸು ಮಾಡಿತ್ತು. ಅದರನ್ವಯ, 1999 ಅಕ್ಟೋಬರ್ 27ರಲ್ಲೇ ಅಧಿಸೂಚನೆ ಹೊರಡಿಸಲಾಗಿದೆ ಎಂದು ಅವರು ಹೇಳಿದ್ದಾರೆ.</p><p>‘ಆ ಎರಡೂ ನಿರ್ಧಾರಗಳು ಆದಾಗ ಮೋದಿಯವರು ಯಾವುದೇ ಅಧಿಕಾರದಲ್ಲಿ ಇರಲಿಲ್ಲ ’ಎಂದು ಅವರು ಸ್ಪಷ್ಟಪಡಿಸಿದ್ದಾರೆ.</p><p>ಓಬಿಸಿ ಬಗ್ಗೆ ರಾಹುಲ್ ಗಾಂಧಿ ದ್ವೇಷವನ್ನು ನೋಡಿದರೆ ಭಯಾನಕವೆನಿಸುತ್ತಿದೆ. ಕಾಂಗ್ರೆಸ್ ಮಾಜಿ ಅಧ್ಯಕ್ಷರು ಇದನ್ನು ಸ್ಪಷ್ಟವಾಗಿ ತಮ್ಮ ಪೂರ್ವಜರಿಂದ ಅನುವಂಶಿಕವಾಗಿ ಪಡೆದುಕೊಂಡಿದ್ದಾರೆ ಎಂದು ಅವರು ಕುಟುಕಿದ್ದಾರೆ.</p> .ಮೋದಿ ಜನ್ಮತಃ ಒಬಿಸಿ ವರ್ಗದವರಲ್ಲ: ರಾಹುಲ್ ಗಾಂಧಿ ಆರೋಪ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>