<p><strong>ನವದೆಹಲಿ:</strong> ದೆಹಲಿಯ ಮುಖ್ಯಮಂತ್ರಿಯಾಗಿ ಅರವಿಂದ ಕೇಜ್ರಿವಾಲ್ ಅವರು ಸತತ ಮೂರನೇ ಬಾರಿಗೆ ಭಾನುವಾರ ಪ್ರಮಾಣವಚನ ಸ್ವೀಕರಿಸಿದ್ದಾರೆ.</p>.<p>ರಾಷ್ಟ್ರ ರಾಜಧಾನಿಯನ್ನು ಜಗತ್ತಿನ ಅತ್ಯುತ್ತಮ ನಗರವನ್ನಾಗಿ ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರದ ಸಹಕಾರವನ್ನು ಈ ಸಂದರ್ಭದಲ್ಲಿ ಕೋರಿದ್ದಾರೆ.</p>.<p>ಚುನಾವಣಾ ಪ್ರಚಾರ ಸಂದರ್ಭದಲ್ಲಿ ಪ್ರತಿಸ್ಪರ್ಧಿಗಳು ತಮ್ಮ ವಿರುದ್ಧ ಆಡಿರುವ ಮಾತುಗಳಿಗೆ ಕ್ಷಮೆ ನೀಡುವುದಾಗಿಯೂ ಅವರು ಹೇಳಿದ್ದಾರೆ.</p>.<p>ಸಮಾರಂಭ ನಡೆದ ಚಾರಿತ್ರಿಕ ರಾಮಲೀಲಾ ಮೈದಾನವು ತ್ರಿವರ್ಣ ಧ್ವಜ ಮತ್ತು ಎಎಪಿ ಧ್ವಜಗಳಿಂದ ಕಂಗೊಳಿಸುತ್ತಿತ್ತು. ಈ ಹಿಂದೆ ಎರಡು ಬಾರಿಯೂ ಇದೇ ಮೈದಾನದಲ್ಲಿ ಕೇಜ್ರಿವಾಲ್ ಪ್ರಮಾಣವಚನ ಸ್ವೀಕರಿಸಿದ್ದರು.</p>.<p>ಮನೀಶ್ ಸಿಸೋಡಿಯಾ, ಸತ್ಯೇಂದ್ರ ಜೈನ್, ಗೋಪಾಲ್ ರಾಯ್, ಇಮ್ರಾನ್ ಹುಸೇನ್, ಕೈಲಾಶ್ ಗೆಹ್ಲೊಟ್ ಮತ್ತು ರಾಜೇಂದ್ರ ಪಾಲ್ ಗೌತಮ್ ಅವರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರು ಅಧಿಕಾರ ಮತ್ತು ಗೋಪ್ಯತೆಯ ಪ್ರಮಾಣ ಬೋಧಿಸಿದರು.</p>.<p>40 ನಿಮಿಷಗಳ ಕಾರ್ಯಕ್ರಮವು ಕೇಜ್ರಿವಾಲ್ ಅವರ ಭಾಷಣದೊಂದಿಗೆ ಮುಕ್ತಾಯವಾಯಿತು. ಔಪಚಾರಿಕ ವಿಧಿಗಳು ಪೂರ್ಣಗೊಂಡ ಬಳಿಕ ಮುಖ್ಯಮಂತ್ರಿ ಮಾತನಾಡಿದರು. ದೆಹಲಿಯ ಅಭಿವೃದ್ಧಿ ಮತ್ತು ರಾಜಧಾನಿಯ ಸುಗಮ ಆಡಳಿತಕ್ಕಾಗಿ ಕೇಂದ್ರದ ಜತೆಗೆ ಕೈಜೋಡಿಸಿ ಕೆಲಸ ಮಾಡುವುದಾಗಿ ಹೇಳಿದರು. ಪ್ರಧಾನಿ ಮೋದಿ ಅವರ ಆಶೀರ್ವಾದ ಕೋರುವುದಾಗಿಯೂ ಹೇಳಿದರು.</p>.<p>‘ಕೇಜ್ರಿವಾಲ್ ಎಲ್ಲವನ್ನೂ ಉಚಿತವಾಗಿ ಕೊಡುತ್ತಿದ್ದಾರೆ ಎಂದು ಕೆಲವರು ಹೇಳುತ್ತಿದ್ದಾರೆ. ತಾಯಿಯ ಪ್ರೀತಿಯಂತೆ ಅತ್ಯುತ್ತಮವಾದ ಎಲ್ಲವೂ ಈ ಜಗತ್ತಿನಲ್ಲಿ ಉಚಿತವಾಗಿಯೇ ಇವೆ. ಕೇಜ್ರಿವಾಲ್ಗೆ ದೆಹಲಿ ಜನರ ಮೇಲೆ ಪ್ರೀತಿ ಇದೆ. ಈ ಪ್ರೀತಿಯೂ ಉಚಿತವೇ. ವಿದ್ಯಾರ್ಥಿಗಳಿಂದ ನಾನು ಶುಲ್ಕ ಸಂಗ್ರಹಿಸಬೇಕೇ? ವೈದ್ಯಕೀಯ ತಪಾಸಣೆ ಮತ್ತು ಔಷಧಿಗಾಗಿ ರೋಗಿಗಳಿಂದ ಹಣ ಪಡೆಯಬೇಕೇ? ನಾನುಹಾಗೆ ಮಾಡಿದರೆ ಅದು ನಾಚಿಕೆಗೇಡು’ ಎಂದು ಹೇಳಿದರು.</p>.<p>ಕೇಜ್ರಿವಾಲ್ ಎಲ್ಲವನ್ನೂ ಉಚಿತವಾಗಿ ನೀಡುತ್ತಿದ್ದಾರೆ ಎಂಬುದು ಚುನಾವಣಾ ಪ್ರಚಾರದಲ್ಲಿ ಬಿಜೆಪಿಯ ದೊಡ್ಡ ಆರೋಪ ಆಗಿತ್ತು.</p>.<p><strong>ದೆಹಲಿ ನಿರ್ಮಾತೃಗಳು</strong><br />ಸಮಾರಂಭದಲ್ಲಿ 50 ವಿಶೇಷ ಅತಿಥಿಗಳಿದ್ದರು. ಅವರಲ್ಲಿ, ಆರು ವರ್ಷದ ಬಾಲಕಿಯ ಅಪಹರಣವನ್ನು ತಡೆದ ಬಸ್ ನಿರ್ವಾಹಕ ಅರುಣ್ ಕುಮಾರ್, ಬೇಸಾಯದಲ್ಲಿ ತೊಡಗಿಸಿಕೊಂಡಿರುವ ನಿವೃತ್ತ ಶಿಕ್ಷಕ ಮತ್ತು ದೆಹಲಿ ಮೆಟ್ರೊದ ಮಹಿಳಾ ಚಾಲಕಿ ಸೇರಿದ್ದರು.</p>.<p>‘ಪುಟಾಣಿ ಮಫ್ಲರ್ ಮನುಷ್ಯ’ ಕಾರ್ಯಕ್ರಮದ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದ. ಕಳೆದ ಮಂಗಳವಾರ ದೆಹಲಿ ಚುನಾವಣೆಯ ಮತಎಣಿಕೆ ದಿನ, ಕೇಜ್ರಿವಾಲ್ ಅವರಂತೆ ಮಫ್ಲರ್ ಧರಿಸಿದ್ದ ಒಂದು ವರ್ಷದ ಬಾಲಕನ ಫೋಟೊ ಟ್ವಿಟರ್ನಲ್ಲಿ ಭಾರಿ ಸಂಚಲನ ಮೂಡಿಸಿತ್ತು.</p>.<p>50 ವಿಶೇಷ ಅತಿಥಿಗಳಲ್ಲಿ ಈ ಬಾಲಕನೂ ಇದ್ದ. ವೈದ್ಯರು, ರಿಕ್ಷಾ ಚಾಲಕರು, ನೈರ್ಮಲ್ಯ ಕೆಲಸಗಾರರು ಕೂಡ ಈ ವಿಶೇಷ ಅತಿಥಿಗಳ ಗುಂಪಿನಲ್ಲಿ ಇದ್ದರು. ಇವರನ್ನು ‘ದೆಹಲಿಯ ನಿರ್ಮಾತೃ’ಗಳು ಎಂದು ಮುಖ್ಯಮಂತ್ರಿ ಬಣ್ಣಿಸಿದ್ದಾರೆ.</p>.<p><strong>ಮೂರನೇ ಅವಧಿ</strong><br />*ಕೇಜ್ರಿವಾಲ್ ಅವರು 2013ರಲ್ಲಿ ಮೊದಲ ಬಾರಿ ದೆಹಲಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. 49 ದಿನಗಳ ಬಳಿಕ, ಜನಲೋಕಪಾಲ ಮಸೂದೆಗೆ ಆಗ್ರಹಿಸಿ ರಾಜೀನಾಮೆ ನೀಡಿದ್ದರು</p>.<p>*2015ರಲ್ಲಿ ನಡೆದ ಮಧ್ಯಂತರ ಚುನಾವಣೆಯಲ್ಲಿ ಕೇಜ್ರಿವಾಲ್ ನೇತೃತ್ವದ ಎಎಪಿ 70 ಕ್ಷೇತ್ರಗಳ ಪೈಕಿ 67ರಲ್ಲಿ ಜಯಗಳಿಸಿತ್ತು. ಕೇಜ್ರಿವಾಲ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು</p>.<p>*ಈ ಬಾರಿ ಎಎಪಿ 62 ಕ್ಷೇತ್ರಗಳಲ್ಲಿ ಜಯ ಗಳಿಸಿದೆ</p>.<p><strong>ದೆಹಲಿಗೆ ಸೀಮಿತ</strong><br />*ಪ್ರಮಾಣವಚನ ಕಾರ್ಯಕ್ರಮಕ್ಕೆ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ರಾಜಕೀಯ ಪಕ್ಷಗಳ ನೇತಾರರನ್ನು ಆಹ್ವಾನಿಸುವ<br />ರೂಢಿ ಇದೆ. ಆದರೆ, ಕೇಜ್ರಿವಾಲ್ ಅದನ್ನು ಕೈಬಿಟ್ಟಿದ್ದಾರೆ</p>.<p>*ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು. ಆದರೆ, ತಮ್ಮ ಲೋಕಸಭಾ ಕ್ಷೇತ್ರ ವಾರಾಣಸಿಗೆ ಭೇಟಿ ನೀಡಿರುವ ಅವರು ಪ್ರಮಾಣವಚನಕ್ಕೆ ಬಂದಿಲ್ಲ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ದೆಹಲಿಯ ಮುಖ್ಯಮಂತ್ರಿಯಾಗಿ ಅರವಿಂದ ಕೇಜ್ರಿವಾಲ್ ಅವರು ಸತತ ಮೂರನೇ ಬಾರಿಗೆ ಭಾನುವಾರ ಪ್ರಮಾಣವಚನ ಸ್ವೀಕರಿಸಿದ್ದಾರೆ.</p>.<p>ರಾಷ್ಟ್ರ ರಾಜಧಾನಿಯನ್ನು ಜಗತ್ತಿನ ಅತ್ಯುತ್ತಮ ನಗರವನ್ನಾಗಿ ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರದ ಸಹಕಾರವನ್ನು ಈ ಸಂದರ್ಭದಲ್ಲಿ ಕೋರಿದ್ದಾರೆ.</p>.<p>ಚುನಾವಣಾ ಪ್ರಚಾರ ಸಂದರ್ಭದಲ್ಲಿ ಪ್ರತಿಸ್ಪರ್ಧಿಗಳು ತಮ್ಮ ವಿರುದ್ಧ ಆಡಿರುವ ಮಾತುಗಳಿಗೆ ಕ್ಷಮೆ ನೀಡುವುದಾಗಿಯೂ ಅವರು ಹೇಳಿದ್ದಾರೆ.</p>.<p>ಸಮಾರಂಭ ನಡೆದ ಚಾರಿತ್ರಿಕ ರಾಮಲೀಲಾ ಮೈದಾನವು ತ್ರಿವರ್ಣ ಧ್ವಜ ಮತ್ತು ಎಎಪಿ ಧ್ವಜಗಳಿಂದ ಕಂಗೊಳಿಸುತ್ತಿತ್ತು. ಈ ಹಿಂದೆ ಎರಡು ಬಾರಿಯೂ ಇದೇ ಮೈದಾನದಲ್ಲಿ ಕೇಜ್ರಿವಾಲ್ ಪ್ರಮಾಣವಚನ ಸ್ವೀಕರಿಸಿದ್ದರು.</p>.<p>ಮನೀಶ್ ಸಿಸೋಡಿಯಾ, ಸತ್ಯೇಂದ್ರ ಜೈನ್, ಗೋಪಾಲ್ ರಾಯ್, ಇಮ್ರಾನ್ ಹುಸೇನ್, ಕೈಲಾಶ್ ಗೆಹ್ಲೊಟ್ ಮತ್ತು ರಾಜೇಂದ್ರ ಪಾಲ್ ಗೌತಮ್ ಅವರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರು ಅಧಿಕಾರ ಮತ್ತು ಗೋಪ್ಯತೆಯ ಪ್ರಮಾಣ ಬೋಧಿಸಿದರು.</p>.<p>40 ನಿಮಿಷಗಳ ಕಾರ್ಯಕ್ರಮವು ಕೇಜ್ರಿವಾಲ್ ಅವರ ಭಾಷಣದೊಂದಿಗೆ ಮುಕ್ತಾಯವಾಯಿತು. ಔಪಚಾರಿಕ ವಿಧಿಗಳು ಪೂರ್ಣಗೊಂಡ ಬಳಿಕ ಮುಖ್ಯಮಂತ್ರಿ ಮಾತನಾಡಿದರು. ದೆಹಲಿಯ ಅಭಿವೃದ್ಧಿ ಮತ್ತು ರಾಜಧಾನಿಯ ಸುಗಮ ಆಡಳಿತಕ್ಕಾಗಿ ಕೇಂದ್ರದ ಜತೆಗೆ ಕೈಜೋಡಿಸಿ ಕೆಲಸ ಮಾಡುವುದಾಗಿ ಹೇಳಿದರು. ಪ್ರಧಾನಿ ಮೋದಿ ಅವರ ಆಶೀರ್ವಾದ ಕೋರುವುದಾಗಿಯೂ ಹೇಳಿದರು.</p>.<p>‘ಕೇಜ್ರಿವಾಲ್ ಎಲ್ಲವನ್ನೂ ಉಚಿತವಾಗಿ ಕೊಡುತ್ತಿದ್ದಾರೆ ಎಂದು ಕೆಲವರು ಹೇಳುತ್ತಿದ್ದಾರೆ. ತಾಯಿಯ ಪ್ರೀತಿಯಂತೆ ಅತ್ಯುತ್ತಮವಾದ ಎಲ್ಲವೂ ಈ ಜಗತ್ತಿನಲ್ಲಿ ಉಚಿತವಾಗಿಯೇ ಇವೆ. ಕೇಜ್ರಿವಾಲ್ಗೆ ದೆಹಲಿ ಜನರ ಮೇಲೆ ಪ್ರೀತಿ ಇದೆ. ಈ ಪ್ರೀತಿಯೂ ಉಚಿತವೇ. ವಿದ್ಯಾರ್ಥಿಗಳಿಂದ ನಾನು ಶುಲ್ಕ ಸಂಗ್ರಹಿಸಬೇಕೇ? ವೈದ್ಯಕೀಯ ತಪಾಸಣೆ ಮತ್ತು ಔಷಧಿಗಾಗಿ ರೋಗಿಗಳಿಂದ ಹಣ ಪಡೆಯಬೇಕೇ? ನಾನುಹಾಗೆ ಮಾಡಿದರೆ ಅದು ನಾಚಿಕೆಗೇಡು’ ಎಂದು ಹೇಳಿದರು.</p>.<p>ಕೇಜ್ರಿವಾಲ್ ಎಲ್ಲವನ್ನೂ ಉಚಿತವಾಗಿ ನೀಡುತ್ತಿದ್ದಾರೆ ಎಂಬುದು ಚುನಾವಣಾ ಪ್ರಚಾರದಲ್ಲಿ ಬಿಜೆಪಿಯ ದೊಡ್ಡ ಆರೋಪ ಆಗಿತ್ತು.</p>.<p><strong>ದೆಹಲಿ ನಿರ್ಮಾತೃಗಳು</strong><br />ಸಮಾರಂಭದಲ್ಲಿ 50 ವಿಶೇಷ ಅತಿಥಿಗಳಿದ್ದರು. ಅವರಲ್ಲಿ, ಆರು ವರ್ಷದ ಬಾಲಕಿಯ ಅಪಹರಣವನ್ನು ತಡೆದ ಬಸ್ ನಿರ್ವಾಹಕ ಅರುಣ್ ಕುಮಾರ್, ಬೇಸಾಯದಲ್ಲಿ ತೊಡಗಿಸಿಕೊಂಡಿರುವ ನಿವೃತ್ತ ಶಿಕ್ಷಕ ಮತ್ತು ದೆಹಲಿ ಮೆಟ್ರೊದ ಮಹಿಳಾ ಚಾಲಕಿ ಸೇರಿದ್ದರು.</p>.<p>‘ಪುಟಾಣಿ ಮಫ್ಲರ್ ಮನುಷ್ಯ’ ಕಾರ್ಯಕ್ರಮದ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದ. ಕಳೆದ ಮಂಗಳವಾರ ದೆಹಲಿ ಚುನಾವಣೆಯ ಮತಎಣಿಕೆ ದಿನ, ಕೇಜ್ರಿವಾಲ್ ಅವರಂತೆ ಮಫ್ಲರ್ ಧರಿಸಿದ್ದ ಒಂದು ವರ್ಷದ ಬಾಲಕನ ಫೋಟೊ ಟ್ವಿಟರ್ನಲ್ಲಿ ಭಾರಿ ಸಂಚಲನ ಮೂಡಿಸಿತ್ತು.</p>.<p>50 ವಿಶೇಷ ಅತಿಥಿಗಳಲ್ಲಿ ಈ ಬಾಲಕನೂ ಇದ್ದ. ವೈದ್ಯರು, ರಿಕ್ಷಾ ಚಾಲಕರು, ನೈರ್ಮಲ್ಯ ಕೆಲಸಗಾರರು ಕೂಡ ಈ ವಿಶೇಷ ಅತಿಥಿಗಳ ಗುಂಪಿನಲ್ಲಿ ಇದ್ದರು. ಇವರನ್ನು ‘ದೆಹಲಿಯ ನಿರ್ಮಾತೃ’ಗಳು ಎಂದು ಮುಖ್ಯಮಂತ್ರಿ ಬಣ್ಣಿಸಿದ್ದಾರೆ.</p>.<p><strong>ಮೂರನೇ ಅವಧಿ</strong><br />*ಕೇಜ್ರಿವಾಲ್ ಅವರು 2013ರಲ್ಲಿ ಮೊದಲ ಬಾರಿ ದೆಹಲಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. 49 ದಿನಗಳ ಬಳಿಕ, ಜನಲೋಕಪಾಲ ಮಸೂದೆಗೆ ಆಗ್ರಹಿಸಿ ರಾಜೀನಾಮೆ ನೀಡಿದ್ದರು</p>.<p>*2015ರಲ್ಲಿ ನಡೆದ ಮಧ್ಯಂತರ ಚುನಾವಣೆಯಲ್ಲಿ ಕೇಜ್ರಿವಾಲ್ ನೇತೃತ್ವದ ಎಎಪಿ 70 ಕ್ಷೇತ್ರಗಳ ಪೈಕಿ 67ರಲ್ಲಿ ಜಯಗಳಿಸಿತ್ತು. ಕೇಜ್ರಿವಾಲ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು</p>.<p>*ಈ ಬಾರಿ ಎಎಪಿ 62 ಕ್ಷೇತ್ರಗಳಲ್ಲಿ ಜಯ ಗಳಿಸಿದೆ</p>.<p><strong>ದೆಹಲಿಗೆ ಸೀಮಿತ</strong><br />*ಪ್ರಮಾಣವಚನ ಕಾರ್ಯಕ್ರಮಕ್ಕೆ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ರಾಜಕೀಯ ಪಕ್ಷಗಳ ನೇತಾರರನ್ನು ಆಹ್ವಾನಿಸುವ<br />ರೂಢಿ ಇದೆ. ಆದರೆ, ಕೇಜ್ರಿವಾಲ್ ಅದನ್ನು ಕೈಬಿಟ್ಟಿದ್ದಾರೆ</p>.<p>*ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು. ಆದರೆ, ತಮ್ಮ ಲೋಕಸಭಾ ಕ್ಷೇತ್ರ ವಾರಾಣಸಿಗೆ ಭೇಟಿ ನೀಡಿರುವ ಅವರು ಪ್ರಮಾಣವಚನಕ್ಕೆ ಬಂದಿಲ್ಲ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>