ಕೃಷಿ ಕಾನೂನುಗಳ ವಿರುದ್ಧ ರೈತರ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಪ್ರಭಾವಿ ಜಾಟ್ ಸಮುದಾಯದ ವಿಶ್ವಾಸ ಗಳಿಸುವ ತಂತ್ರವಾಗಿ ಬಿಜೆಪಿಯು ಚೌಧರಿ ಅವರನ್ನು ನೇಮಿಸಲಾಗಿದೆ ಎಂದು ಹೇಳಲಾಗುತ್ತಿದೆ. ಈ ಹಿಂದೆ, ಹರಿಯಾಣದಲ್ಲಿ ಒಪಿ ಧನಕರ್ ಮತ್ತು ರಾಜಸ್ಥಾನದಲ್ಲಿ ಸತೀಶ್ ಪೂನಿಯಾ ಅವರನ್ನು ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ಈ ಇಬ್ಬರೂ ನಾಯಕರು ಜಾಟ್ ಸಮುದಾಯದವರೇ ಆಗಿದ್ದರು. ಈಗ ಉತ್ತರ ಪ್ರದೇಶದಲ್ಲೂ ಜಾಟ್ ಸಮುದಾಯದವರಿಗೇ ಬಿಜೆಪಿ ಮಣೆ ಹಾಕಿದೆ.