‘ಪ್ರಧಾನಿ ನನ್ನ ಹೃದಯದಲ್ಲಿ ನೆಲೆಸಿದ್ದಾರೆ. ನಾನು ಅವರ ಹನುಮನಂತೆ ಇದ್ದೇನೆ. ವಿಮರ್ಶೆ ಮಾಡಬಯಸುವವರು ಬೇಕಿದ್ದರೆ ನನ್ನ ಹೃದಯವನ್ನು ತೆರೆದು ನೋಡಬಹುದು. ನಾನು ಪ್ರಧಾನ ಮಂತ್ರಿಯ ಭಾಯಾಚಿತ್ರವನ್ನು ಚುನಾವಣೆಯಲ್ಲಿ ಬಳಸಬೇಕಾಗಿಲ್ಲ’ ಎಂದು ಚಿರಾಗ್ ಶುಕ್ರವಾರ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಪ್ರಕಾಶ್ ಜಾವಡೇಕರ್, ‘ತಮ್ಮ ರಾಜಕೀಯ ಸಮೀಕರಣವನ್ನು ಬಿಜೆಪಿಯ ಹಿರಿಯ ನಾಯಕರೊಂದಿಗೆ ಚರ್ಚಿಸುತ್ತಾ, ವಿನಾಕಾರಣ ಮೈತ್ರಿಯಲ್ಲಿ ಗೊಂದಲ ಸೃಷ್ಟಿಸುತ್ತಿರುವ ಎಲ್ಜೆಪಿ ನಾಯಕ ಚಿರಾಗ್ ಒಬ್ಬ ಮತ ವಿಭಜಕ’ ಎಂದಿದ್ದರು.