<p><strong>ಪಟ್ನಾ:</strong> ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು 'ಇಫ್ತಾರ್ ಕೂಟ'ದಲ್ಲಿ ಪಾಲ್ಗೊಳ್ಳುವಂತೆ ನೀಡಿರುವ ಆಹ್ವಾನವನ್ನು ತಿರಸ್ಕರಿಸಿರುವುದಾಗಿ ಬಿಹಾರದ ಪ್ರಮುಖ ಮುಸ್ಲಿಂ ಸಂಘಟನೆಯೊಂದು ಶನಿವಾರ ಪ್ರಕಟಿಸಿದೆ.</p><p>ಕೇಂದ್ರ ಸರ್ಕಾರ ಪ್ರಸ್ತಾಪಿಸಿರುವ 'ವಕ್ಫ್ ತಿದ್ದುಪಡಿ ಮಸೂದೆ'ಗೆ ನಿತೀಶ್ ಬೆಂಬಲ ಸೂಚಿಸಿರುವುದಕ್ಕೆ ಪ್ರತಿಭಟನಾರ್ಥವಾಗಿ ಈ ತೀರ್ಮಾನ ಮಾಡಿರುವುದಾಗಿ ಸಂಘಟನೆ ತಿಳಿಸಿದೆ.</p><p>ಬಿಹಾರ, ಜಾರ್ಖಂಡ್ ಮತ್ತು ಒಡಿಶಾದಾದ್ಯಂತ ಬೆಂಬಲಿಗರನ್ನು ಹೊಂದಿರುವಾಗಿ ಹೇಳಿಕೊಂಡಿರುವ 'ಇಮಾರತ್ ಷರಿಯಾ' ಸಂಘಟನೆ, ಮುಖ್ಯಮಂತ್ರಿಗಳ ನಿವಾಸದಲ್ಲಿ ಭಾನುವಾರ (ಇಂದು) ಆಯೋಜನೆಗೊಂಡಿರುವ ಇಫ್ತಾರ್ ಕೂಟದ ಆಹ್ವಾನಕ್ಕೆ ಸಂಬಂಧಿಸಿದಂತೆ ನೀಡಿರುವ ಪ್ರತಿಕ್ರಿಯೆಯ ಪ್ರತಿಯನ್ನು ಹಂಚಿಕೊಂಡಿದೆ.</p><p>'ಮಾರ್ಚ್ 23ರಂದು ಸರ್ಕಾರಿ ಇಫ್ತಾರ್ನಲ್ಲಿ ಪಾಲ್ಗೊಳ್ಳದಿರಲು ನಿರ್ಧಾರ ತೆಗೆದುಕೊಳ್ಳಲಾಗಿದೆ. ಮುಸ್ಲಿಮರ ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಯನ್ನು ಮತ್ತಷ್ಟು ಹದಗೆಡಿಸುವ ವಕ್ಫ್ ಮಸೂದೆಗೆ ನೀಡುತ್ತಿರುವ ಬೆಂಬಲವನ್ನು ಗಮನಲ್ಲಿಟ್ಟುಕೊಂಡು ಈ ತೀರ್ಮಾನ ಮಾಡಲಾಗಿದೆ' ಎಂದು ಉಲ್ಲೇಖಿಸಿದೆ.</p><p>'ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸುವ ಜಾತ್ಯತೀತ ಆಡಳಿತ ನಡೆಸುವ ಭರವಸೆಯೊಂದಿಗೆ ನೀವು ಅಧಿಕಾರಕ್ಕೇದ್ದೀರಿ. ಆದರೆ, ಬಿಜೆಪಿ ಜೊತೆಗಿನ ನಿಮ್ಮ ಮೈತ್ರಿ ಹಾಗೂ ಸಂವಿಧಾನಬಾಹಿರ, ತರ್ಕಬದ್ಧವಲ್ಲದ ಶಾಸನಕ್ಕೆ ಬೆಂಬಲ ನೀಡುತ್ತಿರುವುದು, ನಿಮ್ಮ ಘೋಷಿತ ಬದ್ಧತೆಗೆ ವಿರುದ್ಧವಾಗಿದೆ' ಎಂದು ಟೀಕಿಸಿದೆ.</p><p>ಮುಖ್ಯಮಂತ್ರಿಗಳ ಇಫ್ತಾರ್ ಕೂಟವನ್ನು 'ಸಾಂಕೇತಿಕವಷ್ಟೇ' ಎಂದಿರುವ ಇಮಾರತ್ ಷರಿಯಾ, 'ಮುಸ್ಲೀಮರ ಬಗ್ಗೆ ಕಾಳಜಿಯಿಲ್ಲದ ನಿಮ್ಮ ಸರ್ಕಾರದ ಬೇಜವಾಬ್ದಾರಿ ಧೋರಣೆಯು ಇಂತಹ ಔಪಚಾರಿಕೆ ಸಭೆಗಳನ್ನು ಅರ್ಥಹೀನಗೊಳಿಸುತ್ತದೆ' ಎಂದು ಕುಟುಕಿದೆ.</p><p>ಸಂಘಟನೆಯ ಈ ನಿರ್ಧಾರದ ಬಗ್ಗೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಾಗಲೀ, ಅವರ ಪಕ್ಷ ಜೆಡಿ(ಯು) ಆಗಲೀ ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪಟ್ನಾ:</strong> ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು 'ಇಫ್ತಾರ್ ಕೂಟ'ದಲ್ಲಿ ಪಾಲ್ಗೊಳ್ಳುವಂತೆ ನೀಡಿರುವ ಆಹ್ವಾನವನ್ನು ತಿರಸ್ಕರಿಸಿರುವುದಾಗಿ ಬಿಹಾರದ ಪ್ರಮುಖ ಮುಸ್ಲಿಂ ಸಂಘಟನೆಯೊಂದು ಶನಿವಾರ ಪ್ರಕಟಿಸಿದೆ.</p><p>ಕೇಂದ್ರ ಸರ್ಕಾರ ಪ್ರಸ್ತಾಪಿಸಿರುವ 'ವಕ್ಫ್ ತಿದ್ದುಪಡಿ ಮಸೂದೆ'ಗೆ ನಿತೀಶ್ ಬೆಂಬಲ ಸೂಚಿಸಿರುವುದಕ್ಕೆ ಪ್ರತಿಭಟನಾರ್ಥವಾಗಿ ಈ ತೀರ್ಮಾನ ಮಾಡಿರುವುದಾಗಿ ಸಂಘಟನೆ ತಿಳಿಸಿದೆ.</p><p>ಬಿಹಾರ, ಜಾರ್ಖಂಡ್ ಮತ್ತು ಒಡಿಶಾದಾದ್ಯಂತ ಬೆಂಬಲಿಗರನ್ನು ಹೊಂದಿರುವಾಗಿ ಹೇಳಿಕೊಂಡಿರುವ 'ಇಮಾರತ್ ಷರಿಯಾ' ಸಂಘಟನೆ, ಮುಖ್ಯಮಂತ್ರಿಗಳ ನಿವಾಸದಲ್ಲಿ ಭಾನುವಾರ (ಇಂದು) ಆಯೋಜನೆಗೊಂಡಿರುವ ಇಫ್ತಾರ್ ಕೂಟದ ಆಹ್ವಾನಕ್ಕೆ ಸಂಬಂಧಿಸಿದಂತೆ ನೀಡಿರುವ ಪ್ರತಿಕ್ರಿಯೆಯ ಪ್ರತಿಯನ್ನು ಹಂಚಿಕೊಂಡಿದೆ.</p><p>'ಮಾರ್ಚ್ 23ರಂದು ಸರ್ಕಾರಿ ಇಫ್ತಾರ್ನಲ್ಲಿ ಪಾಲ್ಗೊಳ್ಳದಿರಲು ನಿರ್ಧಾರ ತೆಗೆದುಕೊಳ್ಳಲಾಗಿದೆ. ಮುಸ್ಲಿಮರ ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಯನ್ನು ಮತ್ತಷ್ಟು ಹದಗೆಡಿಸುವ ವಕ್ಫ್ ಮಸೂದೆಗೆ ನೀಡುತ್ತಿರುವ ಬೆಂಬಲವನ್ನು ಗಮನಲ್ಲಿಟ್ಟುಕೊಂಡು ಈ ತೀರ್ಮಾನ ಮಾಡಲಾಗಿದೆ' ಎಂದು ಉಲ್ಲೇಖಿಸಿದೆ.</p><p>'ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸುವ ಜಾತ್ಯತೀತ ಆಡಳಿತ ನಡೆಸುವ ಭರವಸೆಯೊಂದಿಗೆ ನೀವು ಅಧಿಕಾರಕ್ಕೇದ್ದೀರಿ. ಆದರೆ, ಬಿಜೆಪಿ ಜೊತೆಗಿನ ನಿಮ್ಮ ಮೈತ್ರಿ ಹಾಗೂ ಸಂವಿಧಾನಬಾಹಿರ, ತರ್ಕಬದ್ಧವಲ್ಲದ ಶಾಸನಕ್ಕೆ ಬೆಂಬಲ ನೀಡುತ್ತಿರುವುದು, ನಿಮ್ಮ ಘೋಷಿತ ಬದ್ಧತೆಗೆ ವಿರುದ್ಧವಾಗಿದೆ' ಎಂದು ಟೀಕಿಸಿದೆ.</p><p>ಮುಖ್ಯಮಂತ್ರಿಗಳ ಇಫ್ತಾರ್ ಕೂಟವನ್ನು 'ಸಾಂಕೇತಿಕವಷ್ಟೇ' ಎಂದಿರುವ ಇಮಾರತ್ ಷರಿಯಾ, 'ಮುಸ್ಲೀಮರ ಬಗ್ಗೆ ಕಾಳಜಿಯಿಲ್ಲದ ನಿಮ್ಮ ಸರ್ಕಾರದ ಬೇಜವಾಬ್ದಾರಿ ಧೋರಣೆಯು ಇಂತಹ ಔಪಚಾರಿಕೆ ಸಭೆಗಳನ್ನು ಅರ್ಥಹೀನಗೊಳಿಸುತ್ತದೆ' ಎಂದು ಕುಟುಕಿದೆ.</p><p>ಸಂಘಟನೆಯ ಈ ನಿರ್ಧಾರದ ಬಗ್ಗೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಾಗಲೀ, ಅವರ ಪಕ್ಷ ಜೆಡಿ(ಯು) ಆಗಲೀ ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>