ಬರಸಾತ್ ಲೋಕಸಭಾ ಕ್ಷೇತ್ರದಲ್ಲಿ ರ್ಯಾಲಿ ನಡೆಸಿದ ಅವರು, ‘ನಾನು ಎಂದೂ ಧಾರ್ಮಿಕ ಕೇಂದ್ರಗಳ ನಡುವೆ ತಾರತಮ್ಯ ಮಾಡಿಲ್ಲ. ಎಲ್ಲ ಧರ್ಮಗಳ ಪೂಜಾ ಸ್ಥಳಗಳನ್ನೂ ನಾನು ನವೀಕರಣ ಮಾಡಿಸಿದ್ದೇನೆ. ಸಿಸ್ಟರ್ ನಿವೇದಿತಾ ಅವರ ಮನೆ, ವಿವೇಕಾನಂದರ ಜನ್ಮಸ್ಥಳದ ನವೀಕರಣ ಕಾರ್ಯ ಮಾಡಿದ್ದೇನೆ. ರಾಮಕೃಷ್ಣ ಮಿಷನ್ ಸೇರಿದಂತೆ ಹಲವು ಸಾಮಾಜಿಕ ಧಾರ್ಮಿಕ ಸಂಸ್ಥೆಗಳನ್ನು ಬೆಂಬಲಿಸಿದ್ದೇನೆ’ ಎಂದು ಹೇಳಿದರು.