ಪಿಟಿಐ ಸಂಪಾದಕರ ಜತೆಗಿನ ಸಂವಾದದಲ್ಲಿ ಮಾತನಾಡಿದ ಅವರು, ‘ಜಯಲಲಿತಾ ಅವರು ಬದುಕಿರುವವರೆಗೂ ತಮಿಳುನಾಡಿನಲ್ಲಿ ಇತರ ಎಲ್ಲರಿಗಿಂತ ಶ್ರೇಷ್ಠ ಹಿಂದುತ್ವವಾದಿ ನಾಯಕಿ ಆಗಿದ್ದರು. 2014ಕ್ಕೂ ಮುನ್ನ ಒಂದು ಪಕ್ಷವಾಗಿ ಬಿಜೆಪಿ ಮತ್ತು ಒಬ್ಬರು ನಾಯಕಿಯಾಗಿ ಜಯಲಲಿತಾ ಅವರು ನಿಮ್ಮ ಮುಂದೆ ಇದ್ದಾಗ, ಹಿಂದೂ ಮತದಾರರ ಸಹಜ ಅಯ್ಕೆ ಜಯಲಲಿತಾ ಆಗಿರುತ್ತಿದ್ದರು. ಅವರು ತಮ್ಮ ಹಿಂದುತ್ವದ ಪರ ಒಲವನ್ನು ಬಹಿರಂಗವಾಗಿಯೇ ಪ್ರದರ್ಶಿಸಿದ್ದರು’ ಎಂದು ಹೇಳಿದರು.