ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ದೇಶಮುಖ್, ‘ಪ್ರಧಾನಿ ನರೇಂದ್ರ ಮೋದಿ ಅವರು ಭೋಪಾಲ್ನಲ್ಲಿ ಭಾಷಣ ಮಾಡಿದ ನಂತರ, ಅಜಿತ್ ಪವಾರ್ ಮತ್ತು ಅವರ ಬೆಂಬಲಿಗರು ಅವಸರದಲ್ಲಿ ಬಿಜೆಪಿ ಸರ್ಕಾರವನ್ನು ಸೇರಿಕೊಂಡರು ಎಂಬುದು ಇಡೀ ಮಹಾರಾಷ್ಟ್ರಕ್ಕೆ ತಿಳಿದಿದೆ’ ಎಂದು ಅವರು ಹೇಳಿದ್ದಾರೆ.
‘ಎನ್ಸಿಪಿಯು ವಿಭಜನೆಯಾಗುವ ಕೆಲವು ದಿನಗಳ ಮೊದಲು, ಪಕ್ಷವು ಸುಮಾರು ₹70,000 ಕೋಟಿ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಪ್ರಧಾನಿ ಮೋದಿ ಆರೋಪಿಸಿದ್ದರು. ಶರದ್ ಪವಾರ್ ಅವರ ರಾಜಕೀಯ ಜೀವನವನ್ನು ಮುಗಿಸಲು ಬಿಜೆಪಿಯು ಅಜಿತ್ ಪವಾರ್ ಅವರಿಗೆ ‘ಸುಪಾರಿ’ ನೀಡಿದೆ ಎಂದು ದೇಶಮುಖ್ ತಿಳಿಸಿದ್ದಾರೆ.
ಜುಲೈನಲ್ಲಿ ಮಹಾರಾಷ್ಟ್ರದ ಅಜಿತ್ ಪವಾರ್ ಮತ್ತು ಇತರ ಎಂಟು ಶಾಸಕರು ಬಿಜೆಪಿ ಮತ್ತು ಏಕನಾಥ ಶಿಂದೆ ನೇತೃತ್ವದ ಶಿವಸೇನಾ ಸರ್ಕಾರವನ್ನು ಸೇರಿದ ನಂತರ ಎನ್ಸಿಪಿ ವಿಭಜನೆಗೊಂಡಿತ್ತು.