ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ಹಯ್ಯ ಲಾಲ್‌ ಕುಟುಂಬಕ್ಕೆ ₹1.70 ಕೋಟಿ ದೇಣಿಗೆ ಸಂಗ್ರಹ: ಕಪಿಲ್ ಮಿಶ್ರಾ

Last Updated 2 ಜುಲೈ 2022, 13:35 IST
ಅಕ್ಷರ ಗಾತ್ರ

ಉದಯಪುರ, ರಾಜಸ್ಥಾನ: ಹತ್ಯೆಗೀಡಾದ ಟೇಲರ್ ಕನ್ಹಯ್ಯ ಲಾಲ್‌ ಕುಟುಂಬಕ್ಕೆ ಬಿಜೆಪಿ ನಾಯಕ ಕಪಿಲ್ ಮಿಶ್ರಾ ಅವರು ದೇಣಿಗೆ ಸ್ವರೂಪದಲ್ಲಿ ಸಂಗ್ರಹಿಸಿ ₹1 ಕೋಟಿ ನೆರವು ಒದಗಿಸಿದ್ದಾರೆ.

ಕನ್ಹಯ್ಯಲಾಲ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಅವರ ಕುಟುಂಬ ಸದಸ್ಯರನ್ನು ಭೇಟಿ ಮಾಡಿದ್ದ ಮಿಶ್ರಾ, ನಮಗೆ ₹1 ಕೋಟಿ ಸಂಗ್ರಹಿಸುವ ಗುರಿ ಇತ್ತು. ಆದರೆ, ಈಗಾಗಲೇ ₹1.70 ಕೋಟಿ ಸಂಗ್ರಹವಾಗಿದೆ ಎಂದರು. ಇದರಲ್ಲಿ ಮನೆ ಸಾಲ ತೀರಿಸಲು, ಮಕ್ಕಳ ಶಿಕ್ಷಣ ಉದ್ದೇಶಕ್ಕಾಗಿ ಕನ್ಹಯ್ಯಲಾಲ್‌ ಕುಟುಂಬಕ್ಕೆ ₹1 ಕೋಟಿ ವರ್ಗಾಯಿಸಲಾಗುವುದು ಎಂದು ತಿಳಿಸಿದರು.

ಉಳಿದಂತೆ, ಹತ್ಯೆ ವೇಳೆ ಗಾಯಗೊಂಡಿರುವ ಈಶ್ವರ್ ಅವರಿಗೆ ₹ 25 ಲಕ್ಷ, ರಾಜಸಮದ್ ಜಿಲ್ಲೆಯಲ್ಲಿ ಗುಂಪು ಹಲ್ಲೆಯಿಂದ ಗಾಯಗೊಂಡಿರುವ ಕಾನ್‌ಸ್ಟೆಬಲ್ ಸಂದೀಪ್ ಅವರಿಗೆ ₹ 5 ಲಕ್ಷ, ಮಹಾರಾಷ್ಟ್ರದ ಅಮರಾವತಿಯಲ್ಲಿ ಕೊಲೆಗೀಡಾದ ಉಮೇಶ್‌ ಪ್ರಹ್ಲಾದರಾವ್ ಕೊಲ್ಹೆ ಅವರ ಕುಟುಂಬಕ್ಕೆ ₹ 30 ಲಕ್ಷ ಆರ್ಥಿಕ ನೆರವು ನೀಡಲಾಗುವುದು ಎಂದು ಮಿಶ್ರಾ ಪ್ರಕಟಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT