ಪುದುಚೇರಿಯನ್ನು ವ್ಯಾಪಾರ (B), ಶಿಕ್ಷಣ (E), ಅಧ್ಯಾತ್ಮ (S) ಹಾಗೂ ಪ್ರವಾಸೋದ್ಯಮ (T) ಕೇಂದ್ರವಾಗಿಸುವ ಭರವಸೆಯನ್ನು ನೀಡಲಾಗಿದೆ. ತಮಿಳು ಕವಿ ಸುಬ್ರಹ್ಮಣ್ಯಭಾರತಿ ಅವರ ಪ್ರತಿಮೆ ಸ್ಥಾಪನೆ, ಹೂಡಿಕೆದಾರರನ್ನು ಆಕರ್ಷಿಸಲು ಜಾಗತಿಕ ಹೂಡಿಕೆದಾರರ ಸಮಾವೇಶ ಆಯೋಜನೆ, ಬಂದರು ಹಾಗೂ ಮೂಲಸೌಲಭ್ಯಗಳನ್ನು ಉತ್ತಮಪಡಿಸುವ ಮೂಲಕ ಮೀನುಗಾರರ ಅಭಿವೃದ್ಧಿಗೆ ಕ್ರಮ ಮುಂತಾದವುಗಳ ಉಲ್ಲೇಖವೂ ಪ್ರಣಾಳಿಕೆಯಲ್ಲಿದೆ.