ನವದೆಹಲಿ: ಮಹಿಳೆಯರಿಗೆ ಪ್ರಾರ್ಥಿಸುವ ಹಕ್ಕು ಇದೆ.ಶಬರಿಮಲೆಗೆ ಮಹಿಳೆಯರು ಪ್ರವೇಶಿಸಿರುವುದು ನನಗೆ ಸಂತೋಷವಾಗಿದೆ.ಸತಿ ಮತ್ತು ವರದಕ್ಷಿಣಿ ಪಿಡುಗುಗಳೂ ನಾಶವಾಗಬೇಕು ಎಂದು ಬಿಜೆಪಿ ಸಂಸದಉದಿತ್ ರಾಜ್ ಹೇಳಿದ್ದಾರೆ.
ಶಬರಿಮಲೆಗೆ ಮಹಿಳೆಯರು ಪ್ರವೇಶಿಸುವುದನ್ನು ಖಂಡಿಸಿ ಕೇರಳದಾದ್ಯಂತ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿರುವಾಗ ದೆಹಲಿಯ ಸಂಸದ ಮಹಿಳೆಯರ ಶಬರಿಮಲೆ ಪ್ರವೇಶವನ್ನು ಸ್ವಾಗತಿಸಿ ಟ್ವೀಟ್ ಮಾಡಿದ್ದಾರೆ.
In my personal capacity & chairman of Parisangh I support the entry of women in ayyappa temple. How woman can be impure when man is born from her.God is omnipresent means he is out of temple too. In the eyes of constitution both genders are equal
ಶಬರಿಮಲೆಗೆ ಮಹಿಳೆಯರ ಪ್ರವೇಶವನ್ನು ಖಂಡಿಸುತ್ತಿರುವರನ್ನು ಟೀಕಿಸಿದ ಉದಿತ್ ರಾಜ್, ಪುರುಷರು ಮಹಿಳೆಯ ಗರ್ಭದಿಂದಲೇ ಹುಟ್ಟಿರುವಾಗ ಮಹಿಳೆ ಹೇಗೆ ಅಪವಿತ್ರ ಆಗುತ್ತಾಳೆ. ದೇವರು ದೇವಾಲಯದ ಹೊರಗೂ ಇದ್ದಾರೆ. ಸಂವಿಧಾನದಲ್ಲಿ ಗಂಡು ಮತ್ತು ಹೆಣ್ಣು ಇಬ್ಬರೂ ಸಮಾನರು ಎಂದಿದ್ದಾರೆ.