<p><strong>ಗುವಾಹಟಿ:</strong> ವಿಧಾನಸಭೆಯಲ್ಲಿ ವಿರೋಧ ಪಕ್ಷದ ಸದಸ್ಯರನ್ನು ನಿಂದಿಸಿದ್ದಕ್ಕಾಗಿ ರಾಜ್ಯದ ಜನರ ಕ್ಷಮೆ ಕೋರುವಂತೆ ತಮ್ಮ ಪಕ್ಷದ ಶಾಸಕ ರುಪ್ಜ್ಯೋತಿ ಕುರ್ಮಿ ಅವರಿಗೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಶನಿವಾರ ಸೂಚಿಸಿದ್ದಾರೆ.</p><p>ಕುರ್ಮಿ ಅವರಿಗೆ ಪತ್ರ ಬರೆದಿರುವ ರಾಜ್ಯ ಬಿಜೆಪಿ ಅಧ್ಯಕ್ಷ ದಿಲೀಪ್ ಸೈಕಿಯಾ, ವಿಧಾನಸಭೆಯಲ್ಲಿ ಶುಕ್ರವಾರ ತಾವು (ರುಪ್ಜ್ಯೋತಿ ಕುರ್ಮಿ) ನಡೆದುಕೊಂಡ ರೀತಿ ಪ್ರಜಾಸತ್ತಾತ್ಮಕ ಸಂಪ್ರದಾಯಕ್ಕೆ ವಿರುದ್ಧವಾದದ್ದು ಎಂದು ಎಚ್ಚರಿಸಿದ್ದಾರೆ.</p><p>ಜೊರ್ಹಾತ್ ಜಿಲ್ಲೆಯ ಮರಿಯಾನಿ ವಿಧಾನಸಭಾ ಕ್ಷೇತ್ರದ ಶಾಸಕ ಕುರ್ಮಿ, ಸದನದಲ್ಲಿ ಚರ್ಚೆಯ ವೇಳೆ ವಿರೋಧ ಪಕ್ಷಗಳ ಶಾಸಕರೊಂದಿಗೆ ಶುಕ್ರವಾರ ವಾಗ್ವಾದ ನಡೆಸಿದ್ದರು. ಈ ವೇಳೆ ಅವಾಚ್ಯ ಪದಗಳನ್ನು ಬಳಸಿ ನಿಂದಿಸಿದ್ದರು. ನಂತರ ಅವುಗಳನ್ನು ಕಡತದಿಂದ ತೆಗೆಯಲಾಯಿತು.</p><p>ಕುರ್ಮಿ ವರ್ತನೆಯನ್ನು ಟೀಕಿಸಿರುವ ಸೈಕಿಯಾ, 'ಹಿರಿಯ ರಾಜಕಾರಣಿಯಾಗಿ ನಿಮ್ಮ ವರ್ತನೆಯನ್ನು ಕಂಡು ಬಿಜೆಪಿಯ ಸದಸ್ಯರಾಗಿ ನಮಗೆ ಆಘಾತವಾಗಿದೆ' ಎಂದು ಹೇಳಿದ್ದಾರೆ.</p><p>ಆದರ್ಶಗಳು ಮತ್ತು ಸಿದ್ದಾಂತಗಳಿಗೆ ದೃಢವಾಗಿ ನಿಲ್ಲುವ ಬಿಜೆಪಿಯು ಶಿಸ್ತು ಮತ್ತು ಸಹಿಷ್ಣುತೆಗೆ ಹೆಸರಾಗಿದೆ ಎಂಬುದನ್ನು ಒತ್ತಿ ಹೇಳಿರುವ ಅಧ್ಯಕ್ಷ, ಕುರ್ಮಿ ಅವರ ವರ್ತನೆ ಪಕ್ಷದ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದು ಟೀಕಿಸಿದ್ದಾರೆ.</p><p>ಮತ್ತೊಮ್ಮೆ ಇಂತಹ ವರ್ತನೆ ಪುನರಾವರ್ತಿಸದಂತೆ ಮನವಿ ಮಾಡುವುದಾಗಿಯೂ ಹೇಳಿರುವ ಅವರು, 'ಇದೇ ವೇಳೆ, ಈ ವಿಚಾರವಾಗಿ ರಾಜ್ಯದ ಜನರ ಕ್ಷಮೆ ಕೋರುವಂತೆ ನಿಮಗೆ ನಿರ್ದೇಶಿಸುತ್ತಿದ್ದೇವೆ' ಎಂದು ಪತ್ರದಲ್ಲಿ ತಿಳಿಸಿದ್ದಾರೆ.</p><p>ಕುರ್ಮಿ ಅವರು ತಮ್ಮ ವರ್ತನೆಗೆ ಸದನದಲ್ಲೇ ಕ್ಷಮೆ ಯಾಚಿಸಿದ್ದರು.</p><p>2006ರಿಂದ ಮರಿಯಾನಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಕುರ್ಮಿ, 2021ರಲ್ಲಿ ಬಿಜೆಪಿಗೆ ಸೇರಿದ್ದಾರೆ. ಅದಕ್ಕೂ ಮೊದಲು ಅವರು ಕಾಂಗ್ರೆಸ್ನಲ್ಲಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗುವಾಹಟಿ:</strong> ವಿಧಾನಸಭೆಯಲ್ಲಿ ವಿರೋಧ ಪಕ್ಷದ ಸದಸ್ಯರನ್ನು ನಿಂದಿಸಿದ್ದಕ್ಕಾಗಿ ರಾಜ್ಯದ ಜನರ ಕ್ಷಮೆ ಕೋರುವಂತೆ ತಮ್ಮ ಪಕ್ಷದ ಶಾಸಕ ರುಪ್ಜ್ಯೋತಿ ಕುರ್ಮಿ ಅವರಿಗೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಶನಿವಾರ ಸೂಚಿಸಿದ್ದಾರೆ.</p><p>ಕುರ್ಮಿ ಅವರಿಗೆ ಪತ್ರ ಬರೆದಿರುವ ರಾಜ್ಯ ಬಿಜೆಪಿ ಅಧ್ಯಕ್ಷ ದಿಲೀಪ್ ಸೈಕಿಯಾ, ವಿಧಾನಸಭೆಯಲ್ಲಿ ಶುಕ್ರವಾರ ತಾವು (ರುಪ್ಜ್ಯೋತಿ ಕುರ್ಮಿ) ನಡೆದುಕೊಂಡ ರೀತಿ ಪ್ರಜಾಸತ್ತಾತ್ಮಕ ಸಂಪ್ರದಾಯಕ್ಕೆ ವಿರುದ್ಧವಾದದ್ದು ಎಂದು ಎಚ್ಚರಿಸಿದ್ದಾರೆ.</p><p>ಜೊರ್ಹಾತ್ ಜಿಲ್ಲೆಯ ಮರಿಯಾನಿ ವಿಧಾನಸಭಾ ಕ್ಷೇತ್ರದ ಶಾಸಕ ಕುರ್ಮಿ, ಸದನದಲ್ಲಿ ಚರ್ಚೆಯ ವೇಳೆ ವಿರೋಧ ಪಕ್ಷಗಳ ಶಾಸಕರೊಂದಿಗೆ ಶುಕ್ರವಾರ ವಾಗ್ವಾದ ನಡೆಸಿದ್ದರು. ಈ ವೇಳೆ ಅವಾಚ್ಯ ಪದಗಳನ್ನು ಬಳಸಿ ನಿಂದಿಸಿದ್ದರು. ನಂತರ ಅವುಗಳನ್ನು ಕಡತದಿಂದ ತೆಗೆಯಲಾಯಿತು.</p><p>ಕುರ್ಮಿ ವರ್ತನೆಯನ್ನು ಟೀಕಿಸಿರುವ ಸೈಕಿಯಾ, 'ಹಿರಿಯ ರಾಜಕಾರಣಿಯಾಗಿ ನಿಮ್ಮ ವರ್ತನೆಯನ್ನು ಕಂಡು ಬಿಜೆಪಿಯ ಸದಸ್ಯರಾಗಿ ನಮಗೆ ಆಘಾತವಾಗಿದೆ' ಎಂದು ಹೇಳಿದ್ದಾರೆ.</p><p>ಆದರ್ಶಗಳು ಮತ್ತು ಸಿದ್ದಾಂತಗಳಿಗೆ ದೃಢವಾಗಿ ನಿಲ್ಲುವ ಬಿಜೆಪಿಯು ಶಿಸ್ತು ಮತ್ತು ಸಹಿಷ್ಣುತೆಗೆ ಹೆಸರಾಗಿದೆ ಎಂಬುದನ್ನು ಒತ್ತಿ ಹೇಳಿರುವ ಅಧ್ಯಕ್ಷ, ಕುರ್ಮಿ ಅವರ ವರ್ತನೆ ಪಕ್ಷದ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದು ಟೀಕಿಸಿದ್ದಾರೆ.</p><p>ಮತ್ತೊಮ್ಮೆ ಇಂತಹ ವರ್ತನೆ ಪುನರಾವರ್ತಿಸದಂತೆ ಮನವಿ ಮಾಡುವುದಾಗಿಯೂ ಹೇಳಿರುವ ಅವರು, 'ಇದೇ ವೇಳೆ, ಈ ವಿಚಾರವಾಗಿ ರಾಜ್ಯದ ಜನರ ಕ್ಷಮೆ ಕೋರುವಂತೆ ನಿಮಗೆ ನಿರ್ದೇಶಿಸುತ್ತಿದ್ದೇವೆ' ಎಂದು ಪತ್ರದಲ್ಲಿ ತಿಳಿಸಿದ್ದಾರೆ.</p><p>ಕುರ್ಮಿ ಅವರು ತಮ್ಮ ವರ್ತನೆಗೆ ಸದನದಲ್ಲೇ ಕ್ಷಮೆ ಯಾಚಿಸಿದ್ದರು.</p><p>2006ರಿಂದ ಮರಿಯಾನಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಕುರ್ಮಿ, 2021ರಲ್ಲಿ ಬಿಜೆಪಿಗೆ ಸೇರಿದ್ದಾರೆ. ಅದಕ್ಕೂ ಮೊದಲು ಅವರು ಕಾಂಗ್ರೆಸ್ನಲ್ಲಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>