<p><strong>ರಾಯಗಢ</strong>: ದೇಶದಲ್ಲಿ ಆರ್ಎಸ್ಎಸ್ – ಬಿಜೆಪಿ ದ್ವೇಷ ಹರಡುವ ಕೆಲಸದಲ್ಲಿ ತೊಡಗಿದ್ದು, ಎಷ್ಟೇ ದ್ವೇಷ ಹರಡಿದರೂ ಭಾರತೀಯರ ಡಿಎನ್ಎಯಲ್ಲಿಯೇ ಪ್ರೀತಿ ಇದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.</p><p>ಎರಡು ದಿನದ ವಿರಾಮದ ನಂತರ ಛತ್ತೀಸಗಢದ ರಾಯಗಢದಿಂದ ಭಾರತ್ ಜೋಡೊ ನ್ಯಾಯ ಯಾತ್ರೆ ಆರಂಭಿಸಿದ ರಾಹುಲ್ ಜನತೆಯನ್ನುದ್ದೇಶಿಸಿ ಮಾತನಾಡಿದ್ದಾರೆ. ‘ಸದ್ಯ ದೇಶದ ಮೂಲೆ ಮೂಲೆಗಳಲ್ಲಿ ಹಿಂಸೆ ಹರಡುತ್ತಿದೆ. ಭಾಷೆ, ಜನಾಂಗದ ಆಧಾರದಲ್ಲಿ ಹಿಂಸೆ ಹರಡಲಾಗುತ್ತಿದೆ. ಇಂತಹ ಚಿಂತನೆಗಳು ದೇಶವನ್ನು ದುರ್ಬಲಗೊಳಿಸುತ್ತವೆ’ ಎಂದರು.</p><p>‘ಈ ದೇಶದಲ್ಲಿ ದ್ವೇಷಕ್ಕೆ ಜಾಗವಿಲ್ಲ. ಭಿನ್ನ ಚಿಂತನೆಗಳನ್ನು, ನಂಬಿಕೆಗಳನ್ನು ಹೊಂದಿರುವವರು ಒಟ್ಟಾಗಿ ಬಾಳುತ್ತಿದ್ದಾರೆ’ ಎಂದು ಹೇಳಿದರು.</p><p>ಅಗ್ನಿಪಥ ಯೋಜನೆ ಕುರಿತು ಮಾತನಾಡಿದ ಅವರು ಕೇಂದ್ರ ಸರ್ಕಾರ ವಿರುದ್ಧ ಹರಿಹಾಯ್ದಿದ್ದಾರೆ. ‘ಎಲ್ಲಾ ರೀತಿಯ ರಕ್ಷಣಾ ಗುತ್ತಿಗೆಗಳನ್ನು ಅದಾನಿಗೆ ನೀಡಲಾಗುತ್ತಿದೆ. ಈ ವಿಷಯವನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸಿದಕ್ಕೆ ನನ್ನ ಸದಸ್ಯತ್ವವನ್ನೇ ರದ್ದುಗೊಳಿಸಲಾಯಿತು. ಅಲ್ಲದೇ ನನ್ನ ಅಧಿಕೃತ ನಿವಾಸವನ್ನು ಖಾಲಿ ಮಾಡುವಂತೆ ಹೇಳಲಾಯಿತು. ಜನರ ಹೃದಯದಲ್ಲಿ ವಾಸಿಸುವ ನನಗೆ ಮನೆಯ ಅಗತ್ಯವಿಲ್ಲ’ ಎಂದರು.</p><p>ರ್ಯಾಲಿ ವೇಳೆ ತಮ್ಮ ಮೊಬೈಲ್ ತೋರಿಸಿದ ರಾಹುಲ್ ಗಾಂಧಿ, ‘ಇದು ಚೀನಾದಲ್ಲಿ ತಯಾರಾದ ವಸ್ತುವಾಗಿದೆ. ಅಂಬಾನಿಯಂತಹ ಉದ್ಯಮಿಗಳಿಂದ ಭಾರತದ ಮಾರುಕಟ್ಟೆಯಲ್ಲಿ ಈ ವಸ್ತುಗಳು ಮಾರಾಟವಾಗುತ್ತಿದೆ. ಇದರಿಂದ ಚೀನಾ ಮತ್ತು ಅಂಬಾನಿಯ ಜೇಬು ತುಂಬುತ್ತಿದೆ. ಈ ಮೊಬೈಲ್ಗಳು ಛತ್ತೀಸಗಢದಲ್ಲಿಯೇ ತಯಾರಾಗಬೇಕೆಂಬುದು ನನ್ನ ಕನಸಾಗಿದೆ’ ಎಂದರು.</p><p>‘ರೈತರ ಆತ್ಮಹತ್ಯೆ, ಕಾರ್ಮಿಕರ ಪ್ರತಿಭಟನೆಗಳನ್ನು ತೋರಿಸದ ಮಾಧ್ಯಮಗಳು, ಅಂಬಾನಿ–ಅದಾನಿ ಮಕ್ಕಳ ಮದುವೆ, ವಿಶ್ವಕಪ್ ಪಂದ್ಯಗಳಂತಹ ವಿಷಯಗಳನ್ನಷ್ಟೇ ಬಿತ್ತರಿಸುತ್ತವೆ. ಜನರಿಗೆ ಸತ್ಯ ದರ್ಶನ ಮಾಡಲು, ಜನರ ಜೊತೆ ಸಂಪರ್ಕ ಜೋಡಿಸುವುದಕ್ಕೋಸ್ಕರವೇ ನಾನು ಈ ಯಾತ್ರೆ ಆರಂಭಿಸಬೇಕಾಯಿತು’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಯಗಢ</strong>: ದೇಶದಲ್ಲಿ ಆರ್ಎಸ್ಎಸ್ – ಬಿಜೆಪಿ ದ್ವೇಷ ಹರಡುವ ಕೆಲಸದಲ್ಲಿ ತೊಡಗಿದ್ದು, ಎಷ್ಟೇ ದ್ವೇಷ ಹರಡಿದರೂ ಭಾರತೀಯರ ಡಿಎನ್ಎಯಲ್ಲಿಯೇ ಪ್ರೀತಿ ಇದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.</p><p>ಎರಡು ದಿನದ ವಿರಾಮದ ನಂತರ ಛತ್ತೀಸಗಢದ ರಾಯಗಢದಿಂದ ಭಾರತ್ ಜೋಡೊ ನ್ಯಾಯ ಯಾತ್ರೆ ಆರಂಭಿಸಿದ ರಾಹುಲ್ ಜನತೆಯನ್ನುದ್ದೇಶಿಸಿ ಮಾತನಾಡಿದ್ದಾರೆ. ‘ಸದ್ಯ ದೇಶದ ಮೂಲೆ ಮೂಲೆಗಳಲ್ಲಿ ಹಿಂಸೆ ಹರಡುತ್ತಿದೆ. ಭಾಷೆ, ಜನಾಂಗದ ಆಧಾರದಲ್ಲಿ ಹಿಂಸೆ ಹರಡಲಾಗುತ್ತಿದೆ. ಇಂತಹ ಚಿಂತನೆಗಳು ದೇಶವನ್ನು ದುರ್ಬಲಗೊಳಿಸುತ್ತವೆ’ ಎಂದರು.</p><p>‘ಈ ದೇಶದಲ್ಲಿ ದ್ವೇಷಕ್ಕೆ ಜಾಗವಿಲ್ಲ. ಭಿನ್ನ ಚಿಂತನೆಗಳನ್ನು, ನಂಬಿಕೆಗಳನ್ನು ಹೊಂದಿರುವವರು ಒಟ್ಟಾಗಿ ಬಾಳುತ್ತಿದ್ದಾರೆ’ ಎಂದು ಹೇಳಿದರು.</p><p>ಅಗ್ನಿಪಥ ಯೋಜನೆ ಕುರಿತು ಮಾತನಾಡಿದ ಅವರು ಕೇಂದ್ರ ಸರ್ಕಾರ ವಿರುದ್ಧ ಹರಿಹಾಯ್ದಿದ್ದಾರೆ. ‘ಎಲ್ಲಾ ರೀತಿಯ ರಕ್ಷಣಾ ಗುತ್ತಿಗೆಗಳನ್ನು ಅದಾನಿಗೆ ನೀಡಲಾಗುತ್ತಿದೆ. ಈ ವಿಷಯವನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸಿದಕ್ಕೆ ನನ್ನ ಸದಸ್ಯತ್ವವನ್ನೇ ರದ್ದುಗೊಳಿಸಲಾಯಿತು. ಅಲ್ಲದೇ ನನ್ನ ಅಧಿಕೃತ ನಿವಾಸವನ್ನು ಖಾಲಿ ಮಾಡುವಂತೆ ಹೇಳಲಾಯಿತು. ಜನರ ಹೃದಯದಲ್ಲಿ ವಾಸಿಸುವ ನನಗೆ ಮನೆಯ ಅಗತ್ಯವಿಲ್ಲ’ ಎಂದರು.</p><p>ರ್ಯಾಲಿ ವೇಳೆ ತಮ್ಮ ಮೊಬೈಲ್ ತೋರಿಸಿದ ರಾಹುಲ್ ಗಾಂಧಿ, ‘ಇದು ಚೀನಾದಲ್ಲಿ ತಯಾರಾದ ವಸ್ತುವಾಗಿದೆ. ಅಂಬಾನಿಯಂತಹ ಉದ್ಯಮಿಗಳಿಂದ ಭಾರತದ ಮಾರುಕಟ್ಟೆಯಲ್ಲಿ ಈ ವಸ್ತುಗಳು ಮಾರಾಟವಾಗುತ್ತಿದೆ. ಇದರಿಂದ ಚೀನಾ ಮತ್ತು ಅಂಬಾನಿಯ ಜೇಬು ತುಂಬುತ್ತಿದೆ. ಈ ಮೊಬೈಲ್ಗಳು ಛತ್ತೀಸಗಢದಲ್ಲಿಯೇ ತಯಾರಾಗಬೇಕೆಂಬುದು ನನ್ನ ಕನಸಾಗಿದೆ’ ಎಂದರು.</p><p>‘ರೈತರ ಆತ್ಮಹತ್ಯೆ, ಕಾರ್ಮಿಕರ ಪ್ರತಿಭಟನೆಗಳನ್ನು ತೋರಿಸದ ಮಾಧ್ಯಮಗಳು, ಅಂಬಾನಿ–ಅದಾನಿ ಮಕ್ಕಳ ಮದುವೆ, ವಿಶ್ವಕಪ್ ಪಂದ್ಯಗಳಂತಹ ವಿಷಯಗಳನ್ನಷ್ಟೇ ಬಿತ್ತರಿಸುತ್ತವೆ. ಜನರಿಗೆ ಸತ್ಯ ದರ್ಶನ ಮಾಡಲು, ಜನರ ಜೊತೆ ಸಂಪರ್ಕ ಜೋಡಿಸುವುದಕ್ಕೋಸ್ಕರವೇ ನಾನು ಈ ಯಾತ್ರೆ ಆರಂಭಿಸಬೇಕಾಯಿತು’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>