ಶಿವಸೇನಾ ಮತ್ತು ಎನ್ಸಿಪಿ ಸರ್ಕಾರ ರಚನೆ ಮಾಡಲಿದ್ದು ಕಾಂಗ್ರೆಸ್ ಬಾಹ್ಯ ಬೆಂಬಲ ನೀಡಲಿದೆ ಎಂಬ ಮಾತುಗಳು ಮಹಾರಾಷ್ಟ್ರದ ರಾಜಕೀಯ ಪಡಸಾಲೆಯಲ್ಲಿ ಕೇಳಿ ಬರುತ್ತಿವೆ. ಈ ಬೆಳವಣಿಗೆಗಳ ಮಧ್ಯೆಚಂದ್ರಕಾಂತ್ ಪಾಟೀಲ್ ಅವರು ಶಿವಸೇನಾಗೆ ಶುಭಕೋರಿರುವುದು ಮೈತ್ರಿ ಮರಿಯುವುದರ ಸೂಚಕ ಎಂದೇ ಹೇಳಲಾಗುತ್ತಿದೆ ಎಂದು ಲೋಕಮಾತ ಪತ್ರಿಕೆ ವರದಿ ಮಾಡಿದೆ.