<p>ಜೈಪುರ: ರಾಜಸ್ಥಾನ ಬಿಜೆಪಿಯ ಪ್ರಮುಖ ನಾಯಕ, ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ ಅವರ ಆಪ್ತ ಪ್ರಹ್ಲಾದ್ ಗುಂಜಲ್ (63) ಅವರು ಕಾಂಗ್ರೆಸ್ಗೆ ಗುರುವಾರ ಸೇರ್ಪಡೆಯಾದರು. ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಎದುರು ಅವರನ್ನು ಕಾಂಗ್ರೆಸ್ ಕಣಕ್ಕಿಳಿಸುವ ನಿರೀಕ್ಷೆ ಇದೆ.</p>.<p>ಪ್ರಹ್ಲಾದ್ ಅವರು ಕೋಟಾ, ಬೂಂದಿ, ಬಾರಾ ಮತ್ತು ಝಾಲಾವಾಡ ಜಿಲ್ಲೆಗಳನ್ನು ಒಳಗೊಂಡಿರುವ ಹಾಡೋತಿ ಪ್ರದೇಶದ ಪ್ರಭಾವಿ ನಾಯಕರು. ಅವರ ಹಾಗೆ ತಳಮಟ್ಟದಿಂದ ಬಂದಂಥ ನಾಯಕರನ್ನು ಬಿಜೆಪಿಯು ವ್ಯವಸ್ಥಿತವಾಗಿ ತುಳಿಯುತ್ತಿದೆ ಎಂದು ರಾಜಸ್ಥಾನ ಕಾಂಗ್ರೆಸ್ ಅಧ್ಯಕ್ಷ</p>.<p>ಗೋವಿಂದ್ ಸಿಂಗ್ ಡೊಟಾಸ್ರಾ ಅವರು ಪ್ರಹ್ಲಾದ್ ಅವರನ್ನು ಪಕ್ಷಕ್ಕೆ ಬರಮಾಡಿಕೊಳ್ಳುವ ವೇಳೆ ಹೇಳಿದರು.</p>.<p>ರಾಜಸ್ಥಾನ ಮುಖ್ಯಮಂತ್ರಿ ಭಜನ್ಲಾಲ್ ಶರ್ಮಾ ಅವರನ್ನು ಉಲ್ಲೇಖಿಸಿ, ‘ನಾನು ಯಾವ ನಾಯಕರಿಗೂ ಕಿರಿಯನಲ್ಲ. ನಾನು ಮೊದಲಬಾರಿಗೆ ಶಾಸಕನಾಗಿದ್ದಾಗ, ಸದ್ಯದ ಮುಖ್ಯಮಂತ್ರಿಯು ಸರಪಂಚನಾಗಲು ಪ್ರಯತ್ನಿಸುತ್ತಿದ್ದರು. ನಾನು ಎರಡನೇ ಬಾರಿಗೆ ಶಾಸಕನಾದ ವೇಳೆ ಅವರು ಪಂಚಾಯತಿ ಸಮಿತಿಯ ಅಧ್ಯಕ್ಷರಾಗಲು ಪ್ರಯತ್ನಿಸುತ್ತಿದ್ದರು’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಜೈಪುರ: ರಾಜಸ್ಥಾನ ಬಿಜೆಪಿಯ ಪ್ರಮುಖ ನಾಯಕ, ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ ಅವರ ಆಪ್ತ ಪ್ರಹ್ಲಾದ್ ಗುಂಜಲ್ (63) ಅವರು ಕಾಂಗ್ರೆಸ್ಗೆ ಗುರುವಾರ ಸೇರ್ಪಡೆಯಾದರು. ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಎದುರು ಅವರನ್ನು ಕಾಂಗ್ರೆಸ್ ಕಣಕ್ಕಿಳಿಸುವ ನಿರೀಕ್ಷೆ ಇದೆ.</p>.<p>ಪ್ರಹ್ಲಾದ್ ಅವರು ಕೋಟಾ, ಬೂಂದಿ, ಬಾರಾ ಮತ್ತು ಝಾಲಾವಾಡ ಜಿಲ್ಲೆಗಳನ್ನು ಒಳಗೊಂಡಿರುವ ಹಾಡೋತಿ ಪ್ರದೇಶದ ಪ್ರಭಾವಿ ನಾಯಕರು. ಅವರ ಹಾಗೆ ತಳಮಟ್ಟದಿಂದ ಬಂದಂಥ ನಾಯಕರನ್ನು ಬಿಜೆಪಿಯು ವ್ಯವಸ್ಥಿತವಾಗಿ ತುಳಿಯುತ್ತಿದೆ ಎಂದು ರಾಜಸ್ಥಾನ ಕಾಂಗ್ರೆಸ್ ಅಧ್ಯಕ್ಷ</p>.<p>ಗೋವಿಂದ್ ಸಿಂಗ್ ಡೊಟಾಸ್ರಾ ಅವರು ಪ್ರಹ್ಲಾದ್ ಅವರನ್ನು ಪಕ್ಷಕ್ಕೆ ಬರಮಾಡಿಕೊಳ್ಳುವ ವೇಳೆ ಹೇಳಿದರು.</p>.<p>ರಾಜಸ್ಥಾನ ಮುಖ್ಯಮಂತ್ರಿ ಭಜನ್ಲಾಲ್ ಶರ್ಮಾ ಅವರನ್ನು ಉಲ್ಲೇಖಿಸಿ, ‘ನಾನು ಯಾವ ನಾಯಕರಿಗೂ ಕಿರಿಯನಲ್ಲ. ನಾನು ಮೊದಲಬಾರಿಗೆ ಶಾಸಕನಾಗಿದ್ದಾಗ, ಸದ್ಯದ ಮುಖ್ಯಮಂತ್ರಿಯು ಸರಪಂಚನಾಗಲು ಪ್ರಯತ್ನಿಸುತ್ತಿದ್ದರು. ನಾನು ಎರಡನೇ ಬಾರಿಗೆ ಶಾಸಕನಾದ ವೇಳೆ ಅವರು ಪಂಚಾಯತಿ ಸಮಿತಿಯ ಅಧ್ಯಕ್ಷರಾಗಲು ಪ್ರಯತ್ನಿಸುತ್ತಿದ್ದರು’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>