<p><strong>ಪೂಂಛ್/ಜಮ್ಮು:</strong> ಅಪ್ನಿ ಪಕ್ಷದ ಅಧ್ಯಕ್ಷ ಅಲ್ತಾಫ್ ಬುಖಾರಿ ವಿರುದ್ಧ ಬುಧವಾರ ಪರೋಕ್ಷವಾಗಿ ವಾಗ್ದಾಳಿ ನಡೆಸಿದ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ, ‘ಕಾಶ್ಮೀರದಲ್ಲಿ ಉಗ್ರರಿಗೆ ಹಣಕಾಸಿನ ನೆರವು ನೀಡಲು ಪಾಕಿಸ್ತಾನದಿಂದ ಹವಾಲ ಹಣ ತಂದಿದ್ದ ಪಕ್ಷಕ್ಕೆ ಬಿಜೆಪಿ ಬೆಂಬಲ ನೀಡುತ್ತಿದೆ’ಎಂದು ಆರೋಪಿಸಿದರು.</p>.<p>ಬುಖಾರಿ ಅವರನ್ನು 2019ರಲ್ಲಿ ಪಿಡಿಪಿಯಿಂದ ಉಚ್ಚಾಟಿಸಲಾಗಿತ್ತು. ಅವರ ಅಪ್ನಿ ಪಕ್ಷವು ಅನಂತನಾಗ್–ರಜೌರಿ ಲೋಕಸಭಾ ಕ್ಷೇತ್ರದಿಂದ ಮೆಹಬೂಬಾ ಹಾಗೂ ನ್ಯಾನಲ್ ಕಾನ್ಫರೆನ್ಸ್ ಮುಖಂಡ ಮಿಯಾನ್ ಅಲ್ತಾಫ್ ಅವರ ವಿರುದ್ಧ ಜಾಫರ್ ಇಕ್ಬಾಲ್ ಖಾನ್ ಮನ್ಹಾಸ್ ಅವರನ್ನು ಕಣಕ್ಕಿಳಿಸಿದೆ. ಈ ಕ್ಷೇತ್ರಕ್ಕೆ ಮೇ 25ರಂದು ಮತದಾನ ನಡೆಯಲಿದೆ. </p>.<p>‘ಪಹಲ್ಗಾಂನಲ್ಲಿ ಪ್ರವಾಸಿಗರ ಮೇಲೆ ಈಚೆಗೆ ನಡೆದ ದಾಳಿಯ ಬಗ್ಗೆ ತನಿಖೆ ನಡೆಸಬೇಕು. ಭಯೋತ್ಪಾದಕರಿಗೆ ನೆರವಾಗಲು ಪಾಕಿಸ್ತಾನದಿಂದ ಹವಾಲ ಹಣ ತಂದಿರುವ ಪ್ರಕರಣದಲ್ಲಿ ಪಕ್ಷವೊಂದರ ಪಾತ್ರದ ಬಗ್ಗೆಯೂ ತನಿಖೆ ನಡೆಸಬೇಕು’ ಎಂದು ಮೆಹಬೂಬಾ ಆಗ್ರಹಿಸಿದರು.</p>.<p>‘ನಾನು ಯಾರ ಹೆಸರನ್ನೂ ಉಲ್ಲೇಖಿಸುವುದಿಲ್ಲ. ಅದನ್ನು ನೀವು ಪತ್ತೆ ಹಚ್ಚಿಕೊಳ್ಳಿ’ ಎಂದೂ ಹೇಳಿದ್ದಾರೆ.</p>.<p>‘ತಾವು ರಾಷ್ಟ್ರೀಯವಾದಿಗಳು ಎನ್ನುತ್ತಿರುವ ಬಿಜೆಪಿಯವರು, ಹವಾಲ ಹಣ ತಂದಿರುವ ಪಕ್ಷಕ್ಕೆ ಬೆಂಬಲ ಘೋಷಿಸಿರುವುದು ಅಚ್ಚರಿಯುಂಟುಮಾಡಿದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪೂಂಛ್/ಜಮ್ಮು:</strong> ಅಪ್ನಿ ಪಕ್ಷದ ಅಧ್ಯಕ್ಷ ಅಲ್ತಾಫ್ ಬುಖಾರಿ ವಿರುದ್ಧ ಬುಧವಾರ ಪರೋಕ್ಷವಾಗಿ ವಾಗ್ದಾಳಿ ನಡೆಸಿದ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ, ‘ಕಾಶ್ಮೀರದಲ್ಲಿ ಉಗ್ರರಿಗೆ ಹಣಕಾಸಿನ ನೆರವು ನೀಡಲು ಪಾಕಿಸ್ತಾನದಿಂದ ಹವಾಲ ಹಣ ತಂದಿದ್ದ ಪಕ್ಷಕ್ಕೆ ಬಿಜೆಪಿ ಬೆಂಬಲ ನೀಡುತ್ತಿದೆ’ಎಂದು ಆರೋಪಿಸಿದರು.</p>.<p>ಬುಖಾರಿ ಅವರನ್ನು 2019ರಲ್ಲಿ ಪಿಡಿಪಿಯಿಂದ ಉಚ್ಚಾಟಿಸಲಾಗಿತ್ತು. ಅವರ ಅಪ್ನಿ ಪಕ್ಷವು ಅನಂತನಾಗ್–ರಜೌರಿ ಲೋಕಸಭಾ ಕ್ಷೇತ್ರದಿಂದ ಮೆಹಬೂಬಾ ಹಾಗೂ ನ್ಯಾನಲ್ ಕಾನ್ಫರೆನ್ಸ್ ಮುಖಂಡ ಮಿಯಾನ್ ಅಲ್ತಾಫ್ ಅವರ ವಿರುದ್ಧ ಜಾಫರ್ ಇಕ್ಬಾಲ್ ಖಾನ್ ಮನ್ಹಾಸ್ ಅವರನ್ನು ಕಣಕ್ಕಿಳಿಸಿದೆ. ಈ ಕ್ಷೇತ್ರಕ್ಕೆ ಮೇ 25ರಂದು ಮತದಾನ ನಡೆಯಲಿದೆ. </p>.<p>‘ಪಹಲ್ಗಾಂನಲ್ಲಿ ಪ್ರವಾಸಿಗರ ಮೇಲೆ ಈಚೆಗೆ ನಡೆದ ದಾಳಿಯ ಬಗ್ಗೆ ತನಿಖೆ ನಡೆಸಬೇಕು. ಭಯೋತ್ಪಾದಕರಿಗೆ ನೆರವಾಗಲು ಪಾಕಿಸ್ತಾನದಿಂದ ಹವಾಲ ಹಣ ತಂದಿರುವ ಪ್ರಕರಣದಲ್ಲಿ ಪಕ್ಷವೊಂದರ ಪಾತ್ರದ ಬಗ್ಗೆಯೂ ತನಿಖೆ ನಡೆಸಬೇಕು’ ಎಂದು ಮೆಹಬೂಬಾ ಆಗ್ರಹಿಸಿದರು.</p>.<p>‘ನಾನು ಯಾರ ಹೆಸರನ್ನೂ ಉಲ್ಲೇಖಿಸುವುದಿಲ್ಲ. ಅದನ್ನು ನೀವು ಪತ್ತೆ ಹಚ್ಚಿಕೊಳ್ಳಿ’ ಎಂದೂ ಹೇಳಿದ್ದಾರೆ.</p>.<p>‘ತಾವು ರಾಷ್ಟ್ರೀಯವಾದಿಗಳು ಎನ್ನುತ್ತಿರುವ ಬಿಜೆಪಿಯವರು, ಹವಾಲ ಹಣ ತಂದಿರುವ ಪಕ್ಷಕ್ಕೆ ಬೆಂಬಲ ಘೋಷಿಸಿರುವುದು ಅಚ್ಚರಿಯುಂಟುಮಾಡಿದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>