ರ್ಯಾಲಿ ವೇಳೆ ಒಂದು ಡ್ರೋಣ್ ಬಳಸಲು ಅನುಮತಿ ನೀಡಬೇಕೆಂದು ನಾವು ಕೊಲ್ಕತ್ತಾ ಪೊಲೀಸರಲ್ಲಿ ವಿನಂತಿಸಿದ್ದೇವೆ.ರ್ಯಾಲಿ ಪ್ರದೇಶದಲ್ಲಿನ ಆಗು ಹೋಗುಗಳ ಮೇಲೆ ನಿಗಾ ಇರಿಸಲು ಡ್ರೋಣ್ ಹಾರಾಟಕ್ಕೆ ಅನುಮತಿ ನೀಡಬೇಕು. ಸುರಕ್ಷಾ ಉದ್ದೇಶದಿಂದ ಡ್ರೋಣ್ ಬಳಸಲಾಗುತ್ತದೆ ಎಂದು ಪಶ್ಚಿಮ ಬಂಗಾಳದ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.ರ್ಯಾಲಿ ವೇಳೆ ಯಾವುದೇ ಅಹಿತಕರ ಘಟನೆಗ ಳು ನಡೆಯದಂತೆ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಘೋಷ್ ಹೇಳಿದ್ದಾರೆ.