<p><strong>ನವದೆಹಲಿ</strong>: ಬಿಹಾರ, ಜಾರ್ಖಂಡ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ರಸ್ತೆ ನಿರ್ಮಾಣ ಗುತ್ತಿಗೆದಾರರೊಬ್ಬರ ಮನೆ ಮೇಲೆ ಕೇಂದ್ರ ನೇರ ತೆರಿಗೆ ಮಂಡಳಿಯ (ಸಿಬಿಡಿಟಿ) ಅಧಿಕಾರಿಗಳು ಈಚೆಗೆ ದಾಳಿ ನಡೆಸಿದ್ದು, ಪೂರಕ ಆಧಾರವಿಲ್ಲದ ಸುಮಾರು ₹ 100 ಕೋಟಿ ಕಪ್ಪು ಹಣವನ್ನು ಪತ್ತೆಹಚ್ಚಿದ್ದಾರೆ.</p>.<p class="bodytext">ಸಿಬಿಡಿಟಿಯು ಆದಾಯ ತೆರಿಗೆ ಇಲಾಖೆಗೆ ನೀತಿಯನ್ನು ರೂಪಿಸಲಿದೆ. ಅ.27ರಂದು ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳ, ಮಹಾರಾಷ್ಟ್ರದಲ್ಲಿ ದಾಳಿ ನಡೆಯಿತು. ₹ 5.71 ಕೋಟಿ ನಗದು ಜಪ್ತಿ ಮಾಡಲಾಗಿದೆ. ವಿವಿಧ ಬ್ಯಾಂಕ್ಗಳ 10 ಲಾಕರ್ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಸಿಬಿಡಿಟಿ ಈ ಕುರಿತ ಹೇಳಿಕೆಯಲ್ಲಿ ತಿಳಿಸಿದೆ.</p>.<p class="bodytext">ಲಾಭದಿಂದ ಹಲವು ಪರಿಕರಗಳನ್ನು ಖರೀದಿಸಿ, ವೆಚ್ಚವಾಗಿ ತೋರಿಸಲಾಗುತ್ತಿತ್ತು. ಬಳಿಕ ಪರಿಕರಗಳನ್ನು ಮಾರಾಟ ಮಾಡಿ ನಗದೀಕರಣ ಮಾಡಿಕೊಳ್ಳುತ್ತಿತ್ತು. ಈ ನಗದಿಗೆ ದಾಖಲೆಗಳು ಇರಲಿಲ್ಲ ಎಂದು ತಿಳಿಸಿದೆ.</p>.<p class="bodytext">ಕೈಬರಹದ ಡೈರಿಗಳನ್ನು ಕಮಿಷನ್ ಏಜೆಂಟರ ಸ್ಥಳದಿಂದ ಜಪ್ತಿ ಮಾಡಿದ್ದು, ವಹಿವಾಟಿಗೆ ಸ್ಪಷ್ಟ ದಾಖಲೆಗಳು ಇರಲಿಲ್ಲ. ಬಿಲ್ ಮತ್ತು ಸ್ವೀಕೃತಿ ಪತ್ರಗಳು ಇರಲಿಲ್ಲ ಎಂದು ಹೇಳಿಕೆ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಬಿಹಾರ, ಜಾರ್ಖಂಡ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ರಸ್ತೆ ನಿರ್ಮಾಣ ಗುತ್ತಿಗೆದಾರರೊಬ್ಬರ ಮನೆ ಮೇಲೆ ಕೇಂದ್ರ ನೇರ ತೆರಿಗೆ ಮಂಡಳಿಯ (ಸಿಬಿಡಿಟಿ) ಅಧಿಕಾರಿಗಳು ಈಚೆಗೆ ದಾಳಿ ನಡೆಸಿದ್ದು, ಪೂರಕ ಆಧಾರವಿಲ್ಲದ ಸುಮಾರು ₹ 100 ಕೋಟಿ ಕಪ್ಪು ಹಣವನ್ನು ಪತ್ತೆಹಚ್ಚಿದ್ದಾರೆ.</p>.<p class="bodytext">ಸಿಬಿಡಿಟಿಯು ಆದಾಯ ತೆರಿಗೆ ಇಲಾಖೆಗೆ ನೀತಿಯನ್ನು ರೂಪಿಸಲಿದೆ. ಅ.27ರಂದು ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳ, ಮಹಾರಾಷ್ಟ್ರದಲ್ಲಿ ದಾಳಿ ನಡೆಯಿತು. ₹ 5.71 ಕೋಟಿ ನಗದು ಜಪ್ತಿ ಮಾಡಲಾಗಿದೆ. ವಿವಿಧ ಬ್ಯಾಂಕ್ಗಳ 10 ಲಾಕರ್ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಸಿಬಿಡಿಟಿ ಈ ಕುರಿತ ಹೇಳಿಕೆಯಲ್ಲಿ ತಿಳಿಸಿದೆ.</p>.<p class="bodytext">ಲಾಭದಿಂದ ಹಲವು ಪರಿಕರಗಳನ್ನು ಖರೀದಿಸಿ, ವೆಚ್ಚವಾಗಿ ತೋರಿಸಲಾಗುತ್ತಿತ್ತು. ಬಳಿಕ ಪರಿಕರಗಳನ್ನು ಮಾರಾಟ ಮಾಡಿ ನಗದೀಕರಣ ಮಾಡಿಕೊಳ್ಳುತ್ತಿತ್ತು. ಈ ನಗದಿಗೆ ದಾಖಲೆಗಳು ಇರಲಿಲ್ಲ ಎಂದು ತಿಳಿಸಿದೆ.</p>.<p class="bodytext">ಕೈಬರಹದ ಡೈರಿಗಳನ್ನು ಕಮಿಷನ್ ಏಜೆಂಟರ ಸ್ಥಳದಿಂದ ಜಪ್ತಿ ಮಾಡಿದ್ದು, ವಹಿವಾಟಿಗೆ ಸ್ಪಷ್ಟ ದಾಖಲೆಗಳು ಇರಲಿಲ್ಲ. ಬಿಲ್ ಮತ್ತು ಸ್ವೀಕೃತಿ ಪತ್ರಗಳು ಇರಲಿಲ್ಲ ಎಂದು ಹೇಳಿಕೆ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>