<p><strong>ಲೇಹ್ :</strong> ಬಾಲಿವುಡ್ ಸಿನಿಮಾವೊಂದರ ಚಿತ್ರೀರಣದ ವೇಳೆ ನಿರ್ಮಾಣ ತಂಡದ 100ಕ್ಕೂ ಹೆಚ್ಚು ಕಾರ್ಮಿಕರು ಕಲುಷಿತ ಆಹಾರ ಸೇವಿಸಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ. </p><p>ಭಾನುವಾರ ತಡ ರಾತ್ರಿ ಚಿತ್ರ ನಿರ್ಮಾಣ ತಂಡದಲ್ಲಿ ತೀವ್ರ ಹೊಟ್ಟೆ ನೋವು, ತಲೆನೋವು ಹಾಗೂ ವಾಂತಿಯಿಯಾದ ಕಾರಣ ಅಸ್ವಸ್ಥಗೊಂಡವರನ್ನು ಎಸ್ಎನ್ಎಂ ಆಸ್ಪತ್ರೆಗೆ ಸೇರಿಸಲಾಗಿತ್ತು. </p><p>ಕಲುಷಿತ ಆಹಾರ ಸೇವನೆಯಿಂದ ಅಸ್ವಸ್ಥಗೊಂಡ ಕಾರ್ಮಿಕರು ಬಾಲಿವುಡ್ನ ಸಿನಿಮಾದ ನಿರ್ಮಾಣ ತಂಡದಲ್ಲಿ ಕೆಲಸ ಮಾಡಲೆಂದು ಬೇರೆಡೆಯಿಂದ ಬಂದಿದ್ದರು. 600 ಕ್ಕೂ ಹೆಚ್ಚು ಮಂದಿ ಕಲುಷಿತ ಆಹಾರ ಸೇವಿಸಿದ್ದಾರೆ. ಆಹಾರದ ಮಾದರಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಅಧಿಕೃತವಾಗಿ ತಿಳಿಸಿದ್ದಾರೆ. </p><p>ಆಸ್ಪತ್ರೆಯ ಸಿಂಬಂದ್ದಿಗಳೆಲ್ಲರೂ ಪರಿಸ್ಥಿತಿಯನ್ನು ಪರಿಣಾಮಕಾರಿಯಾಗಿ ನಿಭಾಯಿಸಿದರು. ಪೊಲೀಸರು ಕಿಕ್ಕಿರಿದ ಜನರನ್ನು ನಿಯಂತ್ರಿಸುವಲ್ಲಿ ಕೈ ಜೋಡಿಸಿದರು. ಈಗಾಗಲೇ ಹಲವರು ಚೇತರಿಸಿಕೊಂಡ್ಡಿದ್ದಾರೆ. ಇನ್ನು ಕೆಲವರು ಚಿಕಿತ್ಸೆ ಪಡೆಯುತ್ತಿರುವುದಾಗಿ ವೈದ್ಯರು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲೇಹ್ :</strong> ಬಾಲಿವುಡ್ ಸಿನಿಮಾವೊಂದರ ಚಿತ್ರೀರಣದ ವೇಳೆ ನಿರ್ಮಾಣ ತಂಡದ 100ಕ್ಕೂ ಹೆಚ್ಚು ಕಾರ್ಮಿಕರು ಕಲುಷಿತ ಆಹಾರ ಸೇವಿಸಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ. </p><p>ಭಾನುವಾರ ತಡ ರಾತ್ರಿ ಚಿತ್ರ ನಿರ್ಮಾಣ ತಂಡದಲ್ಲಿ ತೀವ್ರ ಹೊಟ್ಟೆ ನೋವು, ತಲೆನೋವು ಹಾಗೂ ವಾಂತಿಯಿಯಾದ ಕಾರಣ ಅಸ್ವಸ್ಥಗೊಂಡವರನ್ನು ಎಸ್ಎನ್ಎಂ ಆಸ್ಪತ್ರೆಗೆ ಸೇರಿಸಲಾಗಿತ್ತು. </p><p>ಕಲುಷಿತ ಆಹಾರ ಸೇವನೆಯಿಂದ ಅಸ್ವಸ್ಥಗೊಂಡ ಕಾರ್ಮಿಕರು ಬಾಲಿವುಡ್ನ ಸಿನಿಮಾದ ನಿರ್ಮಾಣ ತಂಡದಲ್ಲಿ ಕೆಲಸ ಮಾಡಲೆಂದು ಬೇರೆಡೆಯಿಂದ ಬಂದಿದ್ದರು. 600 ಕ್ಕೂ ಹೆಚ್ಚು ಮಂದಿ ಕಲುಷಿತ ಆಹಾರ ಸೇವಿಸಿದ್ದಾರೆ. ಆಹಾರದ ಮಾದರಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಅಧಿಕೃತವಾಗಿ ತಿಳಿಸಿದ್ದಾರೆ. </p><p>ಆಸ್ಪತ್ರೆಯ ಸಿಂಬಂದ್ದಿಗಳೆಲ್ಲರೂ ಪರಿಸ್ಥಿತಿಯನ್ನು ಪರಿಣಾಮಕಾರಿಯಾಗಿ ನಿಭಾಯಿಸಿದರು. ಪೊಲೀಸರು ಕಿಕ್ಕಿರಿದ ಜನರನ್ನು ನಿಯಂತ್ರಿಸುವಲ್ಲಿ ಕೈ ಜೋಡಿಸಿದರು. ಈಗಾಗಲೇ ಹಲವರು ಚೇತರಿಸಿಕೊಂಡ್ಡಿದ್ದಾರೆ. ಇನ್ನು ಕೆಲವರು ಚಿಕಿತ್ಸೆ ಪಡೆಯುತ್ತಿರುವುದಾಗಿ ವೈದ್ಯರು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>