ಹಿರಿಯ ನಟಿ ಶಬಾನಾ ಆಜ್ಮಿ, ಸ್ವರಾ ಭಾಸ್ಕರ್, ನಟ ಪ್ರಕಾಶ್ ರಾಜ್, ಲೇಖಕ ಜಾವೇದ್ ಅಖ್ತರ್, ನಿರ್ದೇಶಕ ಇಮ್ತಿಯಾಜ್ ಅಲಿ ಹಾಗೂ ರಂಗನಟ ಸೋನಲ್ ಝಾ ಅವರು ಕನ್ಹಯ್ಯ ಪರ ಪ್ರಚಾರ ನಡೆಸಲಿದ್ದಾರೆ. ಇವರಲ್ಲದೆ ‘ನರ್ಮದಾ ಉಳಿಸಿ’ ಆಂದೋಲನದ ಮುಖ್ಯಸ್ಥೆ ಮೇಧಾ ಪಾಟ್ಕರ್ ಹಾಗೂ ಗುಜರಾತ್ನ ಇನ್ನೊಬ್ಬ ಯುವ ನಾಯಕ ಹಾರ್ದಿಕ್ ಪಟೇಲ್ ಅವರನ್ನೂ ಪ್ರಚಾರಕ್ಕಾಗಿ ಬಳಸಿಕೊಳ್ಳಲು ಸಿಪಿಎಂ ನಾಯಕರು ಪ್ರಯತ್ನಿಸುತ್ತಿದ್ದಾರೆ.