’ಗಾಯಕ ಶುಭನೀತ್ ಸಿಂಗ್ ಅವರ ಭಾರತದ ಪ್ರವಾಸವನ್ನು ರದ್ದು ಮಾಡಲಾಗಿದೆ. ಹೀಗಾಗಿ ಈ ಪ್ರದರ್ಶನಕ್ಕೆ ಟಿಕೆಟ್ ಕಾಯ್ದಿರಿಸಿದ ಗ್ರಾಹಕರ ಸಂಪೂರ್ಣ ಟಿಕೆಟ್ ಮೊತ್ತವನ್ನು ಹಿಂದಿರುಗಿಸಲಾಗುತ್ತದೆ. 7–10 ಕೆಲಸದ ದಿನಗಳಲ್ಲಿ ಮೂಲ ಖಾತೆಗೆ ಟಿಕೆಟ್ನ ಮೊತ್ತ ವರ್ಗಾವಣೆಯಾಗುತ್ತದೆ’ ಎಂದು ಬುಕ್ ಮೈ ಷೋ ಹೇಳಿದೆ.
ಇದಕ್ಕೂ ಮುನ್ನ ಬುಧವಾರ ಬೆಳಿಗ್ಗೆ ‘ಎಕ್ಸ್’ನಲ್ಲಿ #UninstallBookMyShow ಎನ್ನುವ ಹ್ಯಾಷ್ಟ್ಯಾಗ್ ಟ್ರೆಂಡ್ ಆಗಿತ್ತು.
ಖಾಲಿಸ್ತಾನ ಪ್ರತ್ಯೇಕತಾವಾದಿ ನಾಯಕ ಹರ್ದೀಪ್ ಸಿಂಗ್ ನಿಜ್ಜಾರ್ (45) ಕೊಲೆಯಲ್ಲಿ ಭಾರತದ ಕೈವಾಡ ಇದೆ ಎಂದು ಕೆನಡಾದ ಪ್ರಧಾನಿ ಜಸ್ಟಿನ್ ಟ್ರಡೋ ಆರೋಪಿಸಿದ್ದರು. ಬಳಿಕ ಭಾರತದ ಅಧಿಕಾರಿಯನ್ನು ಸೋಮವಾರ ಕೆನಡಾ ಉಚ್ಚಾಟಿಸಿತ್ತು. ಇದರ ಬೆನ್ನಲ್ಲೇ ಮಂಗಳವಾರ ಭಾರತವು, ಕೆನಡಾದ ರಾಜತಾಂತ್ರಿಕ ಅಧಿಕಾರಿಯನ್ನು ಉಚ್ಚಾಟಿಸಿತ್ತು.
ಇದರಿಂದಾಗಿ ಉಭಯ ದೇಶಗಳ ನಡುವಿನ ಸಂಬಂಧ ಹಳಸಿದ್ದು, ವ್ಯಾಪಾರ ಸಂಬಂಧ ನಡೆಯಬೇಕಿದ್ದ ಮಾತುಕತೆ ನಿಂತು ಹೋಗಿದೆ.