ಹೈದರಬಾದ್: ಮಹಿಳೆಯರಿಗೆ ಟೊಮೆಟೊ ವಿತರಿಸುವ ಮೂಲಕ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರ ಮಗ ಕೆ.ಟಿ ರಾಮ್ರಾವ್ ಅವರ ಹುಟ್ಟುಹಬ್ಬವನ್ನು ಆಚರಿಸಲಾಗಿದೆ.
ಭಾರತ ರಾಷ್ಟ್ರ ಸಮಿತಿ(ಬಿಆರ್ಎಸ್) ಪಕ್ಷದ ಕಾರ್ಯಧ್ಯಕ್ಷ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಕೆ. ಟಿ. ರಾಮ್ರಾವ್ ಇಂದು ತಮ್ಮ 47ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಪಕ್ಷದ ವಾರಂಗಲ್ ಮುಖಂಡ ರಾಜನಾಳ ಶ್ರೀಹರಿ ತಮ್ಮ ನಾಯಕನ ಹುಟ್ಟುಹಬ್ಬವನ್ನು ವಿಭಿನ್ನವಾಗಿ ಆಚರಿಸಲು ಬಯಸಿದ್ದು, ಮಹಿಳೆಯರಿಗೆ ಟೊಮೆಟೊ ವಿತರಿಸಿದ್ದಾರೆ.
'ಮುಖ್ಯಮಂತ್ರಿಯಾಗಿ ಕೆ. ಟಿ. ರಾಮ್ರಾವ್ ಅವರನ್ನು ಕಾಣುವ ಆಸೆಯಿದೆ. ಚೌರಸ್ತಾ ಸೆಂಟರ್ನಲ್ಲಿ ಸುಮಾರು 250-300 ಮಹಿಳೆಯರಿಗೆ ತಲಾ ಒಂದೂವರೆ ಕೆ.ಜಿ ಟೊಮೆಟೊವನ್ನು ಬುಟ್ಟಿಯಲ್ಲಿ ವಿತರಿಸಲಾಗಿದೆ' ಎಂದು ಶ್ರೀಹರಿ ತಿಳಿಸಿದ್ದಾರೆ.