<p><strong>ಹೈದರಾಬಾದ್</strong>: ತಮ್ಮ ಸೋದರಸಂಬಂಧಿ ಮತ್ತು ಪಕ್ಷದ ಮಾಜಿ ನಾಯಕಿ ಕೆ. ಕವಿತಾ ಅವರು ಮಾಡಿರುವ ಆರೋಪಗಳನ್ನು ಆಕೆಯ ವಿವೇಚನೆಗೆ ಬಿಡುವುದಾಗಿ ಬಿಆರ್ಎಸ್ ಶಾಸಕ ಟಿ.ಹರೀಶ್ ರಾವ್ ಅವರು ಶನಿವಾರ ಹೇಳಿದ್ದಾರೆ.</p><p>ವಿದೇಶ ಪ್ರವಾಸದಿಂದ ಹಿಂದಿರುಗಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 25 ವರ್ಷಗಳ ನನ್ನ ರಾಜಕೀಯ ಜೀವನ ತೆರೆದ ಪುಸ್ತಕದಂತಿದೆ. ಕೆಲ ಸಮಯದಿಂದ ಕೆಲವು ರಾಜಕೀಯ ಪಕ್ಷಗಳು ನನ್ನ ವಿರುದ್ಧ ಮಾಡುತ್ತಿರುವ ಆರೋಪಗಳ್ಳನ್ನೇ ಅವಳು(ಕವಿತಾ) ಮಾಡಿದ್ದಾಳೆ. ಏಕೆ ಈ ಆರೋಪಗಳನ್ನು ಅವಳು ಮಾಡಿದಳು? ಅದನ್ನು ನಾನು ಆಕೆಯ ವಿವೇಚನೆಗೆ ಬಿಡುತ್ತೇನೆ’ ಎಂದು ಹೇಳಿದ್ದಾರೆ.</p><p>‘ತೆಲಂಗಾಣ ರಾಜ್ಯ ಸ್ಥಾಪನೆಯಲ್ಲಿ ಮತ್ತು ರಾಜ್ಯ ರಚನೆಯಾದ ನಂತರ ಅದರ ಅಭಿವೃದ್ಧಿಯಲ್ಲಿ ನನ್ನ ಪಾತ್ರ ಮತ್ತು ಸಮರ್ಪಣೆ ಎಲ್ಲರಿಗೂ ತಿಳಿದಿದೆ’ ಎಂದಿದ್ದಾರೆ.</p><p>‘ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ಮತ್ತು ಜನರ ಸಮಸ್ಯೆಗಳನ್ನು ಪರಿಹರಿಸಲು ಇತರ ಬಿಆರ್ಎಸ್ ನಾಯಕರೊಂದಿಗೆ ಸಾಮೂಹಿಕ ಪ್ರಯತ್ನಗಳನ್ನು ಮಾಡುವುದಾಗಿ’ ಅವರು ಹೇಳಿದ್ದಾರೆ.</p><p>ಕಾಲೇಶ್ವರಂ ಯೋಜನೆಯ ವಿಚಾರದಲ್ಲಿ ಹರೀಶ್ ರಾವ್ ಮತ್ತು ಮತ್ತೊಬ್ಬ ಸೋದರ ಸಂಬಂಧಿ ಜೆ. ಸಂತೋಷ್ ಕುಮಾರ್ ಅವರು ತಮ್ಮ ತಂದೆ ಕೆಸಿಆರ್ ಅವರ ಪ್ರತಿಷ್ಠೆಗೆ ಧಕ್ಕೆ ತಂದಿದ್ದಾರೆ ಎಂದು ಕವಿತಾ ಆರೋಪಿಸಿದ್ದರು.</p><p>ಅಲ್ಲದೇ, ನಮ್ಮ ಕುಟುಂಬದ ವಿರುದ್ಧ ಹರೀಶ್ ರಾವ್ ಪಿತೂರಿ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದರು.</p><p>ಇದಾದ ಬೆನ್ನಲ್ಲೇ, ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ ಕವಿತಾ ಅವರನ್ನು ಪಕ್ಷದಿಂದ ಅಮಾನತು ಮಾಡಲಾಗಿತ್ತು.</p><p>ಸೆಪ್ಟೆಂಬರ್ 2ರಂದು ಕವಿತಾ ಅವರು ವಿಧಾನ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೈದರಾಬಾದ್</strong>: ತಮ್ಮ ಸೋದರಸಂಬಂಧಿ ಮತ್ತು ಪಕ್ಷದ ಮಾಜಿ ನಾಯಕಿ ಕೆ. ಕವಿತಾ ಅವರು ಮಾಡಿರುವ ಆರೋಪಗಳನ್ನು ಆಕೆಯ ವಿವೇಚನೆಗೆ ಬಿಡುವುದಾಗಿ ಬಿಆರ್ಎಸ್ ಶಾಸಕ ಟಿ.ಹರೀಶ್ ರಾವ್ ಅವರು ಶನಿವಾರ ಹೇಳಿದ್ದಾರೆ.</p><p>ವಿದೇಶ ಪ್ರವಾಸದಿಂದ ಹಿಂದಿರುಗಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 25 ವರ್ಷಗಳ ನನ್ನ ರಾಜಕೀಯ ಜೀವನ ತೆರೆದ ಪುಸ್ತಕದಂತಿದೆ. ಕೆಲ ಸಮಯದಿಂದ ಕೆಲವು ರಾಜಕೀಯ ಪಕ್ಷಗಳು ನನ್ನ ವಿರುದ್ಧ ಮಾಡುತ್ತಿರುವ ಆರೋಪಗಳ್ಳನ್ನೇ ಅವಳು(ಕವಿತಾ) ಮಾಡಿದ್ದಾಳೆ. ಏಕೆ ಈ ಆರೋಪಗಳನ್ನು ಅವಳು ಮಾಡಿದಳು? ಅದನ್ನು ನಾನು ಆಕೆಯ ವಿವೇಚನೆಗೆ ಬಿಡುತ್ತೇನೆ’ ಎಂದು ಹೇಳಿದ್ದಾರೆ.</p><p>‘ತೆಲಂಗಾಣ ರಾಜ್ಯ ಸ್ಥಾಪನೆಯಲ್ಲಿ ಮತ್ತು ರಾಜ್ಯ ರಚನೆಯಾದ ನಂತರ ಅದರ ಅಭಿವೃದ್ಧಿಯಲ್ಲಿ ನನ್ನ ಪಾತ್ರ ಮತ್ತು ಸಮರ್ಪಣೆ ಎಲ್ಲರಿಗೂ ತಿಳಿದಿದೆ’ ಎಂದಿದ್ದಾರೆ.</p><p>‘ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ಮತ್ತು ಜನರ ಸಮಸ್ಯೆಗಳನ್ನು ಪರಿಹರಿಸಲು ಇತರ ಬಿಆರ್ಎಸ್ ನಾಯಕರೊಂದಿಗೆ ಸಾಮೂಹಿಕ ಪ್ರಯತ್ನಗಳನ್ನು ಮಾಡುವುದಾಗಿ’ ಅವರು ಹೇಳಿದ್ದಾರೆ.</p><p>ಕಾಲೇಶ್ವರಂ ಯೋಜನೆಯ ವಿಚಾರದಲ್ಲಿ ಹರೀಶ್ ರಾವ್ ಮತ್ತು ಮತ್ತೊಬ್ಬ ಸೋದರ ಸಂಬಂಧಿ ಜೆ. ಸಂತೋಷ್ ಕುಮಾರ್ ಅವರು ತಮ್ಮ ತಂದೆ ಕೆಸಿಆರ್ ಅವರ ಪ್ರತಿಷ್ಠೆಗೆ ಧಕ್ಕೆ ತಂದಿದ್ದಾರೆ ಎಂದು ಕವಿತಾ ಆರೋಪಿಸಿದ್ದರು.</p><p>ಅಲ್ಲದೇ, ನಮ್ಮ ಕುಟುಂಬದ ವಿರುದ್ಧ ಹರೀಶ್ ರಾವ್ ಪಿತೂರಿ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದರು.</p><p>ಇದಾದ ಬೆನ್ನಲ್ಲೇ, ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ ಕವಿತಾ ಅವರನ್ನು ಪಕ್ಷದಿಂದ ಅಮಾನತು ಮಾಡಲಾಗಿತ್ತು.</p><p>ಸೆಪ್ಟೆಂಬರ್ 2ರಂದು ಕವಿತಾ ಅವರು ವಿಧಾನ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>