ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬಡಗಾಮ್ ಜಿಲ್ಲೆಯಲ್ಲಿ ಆಗಸ್ಟ್ 15ರಂದು ಅಲ್ಪಸಂಖ್ಯಾತರ ನೆಲೆಗಳ ಮೇಲೆ ನಡೆಸಲಾಗಿದ್ದ ಗ್ರೆನೇಡ್ ದಾಳಿಯ ಸಂಬಂಧ ಲಷ್ಕರ್ ಎ ತಯಬಾದ ಉಗ್ರನೊಬ್ಬನನ್ನು ಭದ್ರತಾ ಪಡೆಯವರು ಸೋಮವಾರ ಬಂಧಿಸಿದ್ದಾರೆ. ಇದರೊಂದಿಗೆ ಈ ಪ್ರಕರಣದಡಿ ಬಂಧನಕ್ಕೊಳಗಾಗಿರುವವರ ಸಂಖ್ಯೆ ಮೂರಕ್ಕೆ ಏರಿದೆ.