<p><strong>ಜೈಪುರ</strong>: ವಿದ್ಯುತ್ ತಂತಿ ತಗುಲಿ ಖಾಸಗಿ ಬಸ್ಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಬಸ್ನಲ್ಲಿದ್ದ ಇಬ್ಬರು ಪ್ರಯಾಣಿಕರು ಮೃತಪಟ್ಟು, 10 ಮಂದಿ ಗಾಯಗೊಂಡಿರುವ ಘಟನೆ ರಾಜಸ್ಥಾನದ ಮನೋಹರಪುರದಲ್ಲಿ ಮಂಗಳವಾರ ನಡೆದಿದೆ. </p><p>ಬೆಂಕಿ ಅವಘಡಕ್ಕೀಡಾದ ಡಬ್ಬಲ್ ಡೆಕ್ಕರ್ ಸ್ಲೀಪರ್ ಬಸ್ ಉತ್ತರ ಪ್ರದೇಶದ ಫಿಲಿಬಿತ್ನಿಂದ ತೆರಳುತ್ತಿತ್ತು. ಅದರಲ್ಲಿ ಇಟ್ಟಿಗೆ ಫ್ಯಾಕ್ಟರಿಯ ಸುಮಾರು 50 ಕಾರ್ಮಿಕರಿದ್ದರು ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ತೇಜ್ಪಾಲ್ ಸಿಂಗ್ ಮಾಹಿತಿ ನೀಡಿದ್ದಾರೆ. </p> .ಕಸಾಪಗೆ ಆಡಳಿತಾಧಿಕಾರಿ ನೇಮಕ | KM ಗಾಯತ್ರಿ ಅಧಿಕಾರ ಸ್ವೀಕಾರ: ಜೋಶಿಗೆ ಹಿನ್ನಡೆ.ಕಿಚ್ಚ ಸುದೀಪ್ ಕಡೆಯಿಂದ ಗಿಲ್ಲಿ ನಟಗೆ ವಿಶೇಷ ಉಡುಗೊರೆ: ಆ ಪೆಟ್ಟಿಗೆಯಲ್ಲಿ ಏನಿದೆ?. <p>ಬಸ್ನ ಮೇಲ್ಭಾಗದಲ್ಲಿ ಮೋಟಾರ್ ಸೈಕಲ್, ಸೈಕಲ್ ಸೇರಿದಂತೆ ಮನೆಯ ಹಲವು ವಸ್ತುಗಳನ್ನು ಇರಿಸಲಾಗಿತ್ತು. ಬಸ್ ಮೋಹನಪುರ ಸಮೀಪಿಸಿದಾಗ ವಿದ್ಯುತ್ ತಂತಿ ಬಸ್ಗೆ ತಾಗಿದೆ. ಮೇಲಿದ್ದ ವಸ್ತುಗಳಿಗೆ ತಂತಿ ತಾಗಿದರಿಂದ ತಕ್ಷಣ ವಿದ್ಯುತ್ ಪ್ರವಹಿಸಿ ಬೆಂಕಿ ಹೊತ್ತಿಕೊಂಡಿದೆ ಎಂದೂ ಸಿಂಗ್ ಹೇಳಿದ್ದಾರೆ. </p><p>ಬಸ್ನಲ್ಲಿ ಕೆಲವು ಗ್ಯಾಸ್ ಸಿಲಿಂಡರ್ಗಳನ್ನೂ ಇರಿಸಲಾಗಿತ್ತು. ಆ ಪೈಕಿ ಎರಡು ಸಿಲಿಂಡರ್ಗಳಿಗೆ ಬೆಂಕಿ ಹೊತ್ತಿಕೊಂಡಿದೆ. ತಕ್ಷಣವೇ ಹಲವು ಪ್ರಯಾಣಿಕರು ಬಸ್ನಿಂದ ಹೊರಗೆ ಜಿಗಿದು ಪಾರಾಗಿದ್ದಾರೆ ಎಂದು ಜೈಪುರ ಜಿಲ್ಲಾಧಿಕಾರಿ ಜಿತೇಂದ್ರ ಸೋನಿ ಹೇಳಿದ್ದಾರೆ.</p>.ಭಾರತದಲ್ಲಿ ChatGPT Go ಒಂದು ವರ್ಷ ಉಚಿತ ಎಂದ ಓಪನ್ಎಐ: ನ. 4ರಿಂದ ಆರಂಭ.12 ರಾಜ್ಯಗಳಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ: EC ವಿರುದ್ಧ ಕಾಂಗ್ರೆಸ್ ವಾಗ್ದಾಳಿ. <p>ಘಟನೆಯ ಸಂಬಂಧ ತನಿಖೆ ನಡೆಸಲಾಗುವುದು ಎಂದು ಉಪಮುಖ್ಯಮಂತ್ರಿ ಮತ್ತು ಸಾರಿಗೆ ಸಚಿವ ಪ್ರೇಮ್ ಚಂದ್ ಬೈರ್ವಾ ಹೇಳಿದ್ದಾರೆ.</p><p>ಇತ್ತೀಚೆಗೆ ಹೈದರಾಬಾದ್ನಿಂದ ಬೆಂಗಳೂರಿಗೆ ಹೊರಟಿದ್ದ ಖಾಸಗಿ ಸಂಸ್ಥೆಯ ಎಸಿ ಸ್ಲೀಪರ್ ಬಸ್ಗೆ ಬೆಂಕಿ ಹೊತ್ತಿಕೊಂಡು 19 ಪ್ರಯಾಣಿಕರು ಸಜೀವ ದಹನರಾದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಜೈಪುರ</strong>: ವಿದ್ಯುತ್ ತಂತಿ ತಗುಲಿ ಖಾಸಗಿ ಬಸ್ಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಬಸ್ನಲ್ಲಿದ್ದ ಇಬ್ಬರು ಪ್ರಯಾಣಿಕರು ಮೃತಪಟ್ಟು, 10 ಮಂದಿ ಗಾಯಗೊಂಡಿರುವ ಘಟನೆ ರಾಜಸ್ಥಾನದ ಮನೋಹರಪುರದಲ್ಲಿ ಮಂಗಳವಾರ ನಡೆದಿದೆ. </p><p>ಬೆಂಕಿ ಅವಘಡಕ್ಕೀಡಾದ ಡಬ್ಬಲ್ ಡೆಕ್ಕರ್ ಸ್ಲೀಪರ್ ಬಸ್ ಉತ್ತರ ಪ್ರದೇಶದ ಫಿಲಿಬಿತ್ನಿಂದ ತೆರಳುತ್ತಿತ್ತು. ಅದರಲ್ಲಿ ಇಟ್ಟಿಗೆ ಫ್ಯಾಕ್ಟರಿಯ ಸುಮಾರು 50 ಕಾರ್ಮಿಕರಿದ್ದರು ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ತೇಜ್ಪಾಲ್ ಸಿಂಗ್ ಮಾಹಿತಿ ನೀಡಿದ್ದಾರೆ. </p> .ಕಸಾಪಗೆ ಆಡಳಿತಾಧಿಕಾರಿ ನೇಮಕ | KM ಗಾಯತ್ರಿ ಅಧಿಕಾರ ಸ್ವೀಕಾರ: ಜೋಶಿಗೆ ಹಿನ್ನಡೆ.ಕಿಚ್ಚ ಸುದೀಪ್ ಕಡೆಯಿಂದ ಗಿಲ್ಲಿ ನಟಗೆ ವಿಶೇಷ ಉಡುಗೊರೆ: ಆ ಪೆಟ್ಟಿಗೆಯಲ್ಲಿ ಏನಿದೆ?. <p>ಬಸ್ನ ಮೇಲ್ಭಾಗದಲ್ಲಿ ಮೋಟಾರ್ ಸೈಕಲ್, ಸೈಕಲ್ ಸೇರಿದಂತೆ ಮನೆಯ ಹಲವು ವಸ್ತುಗಳನ್ನು ಇರಿಸಲಾಗಿತ್ತು. ಬಸ್ ಮೋಹನಪುರ ಸಮೀಪಿಸಿದಾಗ ವಿದ್ಯುತ್ ತಂತಿ ಬಸ್ಗೆ ತಾಗಿದೆ. ಮೇಲಿದ್ದ ವಸ್ತುಗಳಿಗೆ ತಂತಿ ತಾಗಿದರಿಂದ ತಕ್ಷಣ ವಿದ್ಯುತ್ ಪ್ರವಹಿಸಿ ಬೆಂಕಿ ಹೊತ್ತಿಕೊಂಡಿದೆ ಎಂದೂ ಸಿಂಗ್ ಹೇಳಿದ್ದಾರೆ. </p><p>ಬಸ್ನಲ್ಲಿ ಕೆಲವು ಗ್ಯಾಸ್ ಸಿಲಿಂಡರ್ಗಳನ್ನೂ ಇರಿಸಲಾಗಿತ್ತು. ಆ ಪೈಕಿ ಎರಡು ಸಿಲಿಂಡರ್ಗಳಿಗೆ ಬೆಂಕಿ ಹೊತ್ತಿಕೊಂಡಿದೆ. ತಕ್ಷಣವೇ ಹಲವು ಪ್ರಯಾಣಿಕರು ಬಸ್ನಿಂದ ಹೊರಗೆ ಜಿಗಿದು ಪಾರಾಗಿದ್ದಾರೆ ಎಂದು ಜೈಪುರ ಜಿಲ್ಲಾಧಿಕಾರಿ ಜಿತೇಂದ್ರ ಸೋನಿ ಹೇಳಿದ್ದಾರೆ.</p>.ಭಾರತದಲ್ಲಿ ChatGPT Go ಒಂದು ವರ್ಷ ಉಚಿತ ಎಂದ ಓಪನ್ಎಐ: ನ. 4ರಿಂದ ಆರಂಭ.12 ರಾಜ್ಯಗಳಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ: EC ವಿರುದ್ಧ ಕಾಂಗ್ರೆಸ್ ವಾಗ್ದಾಳಿ. <p>ಘಟನೆಯ ಸಂಬಂಧ ತನಿಖೆ ನಡೆಸಲಾಗುವುದು ಎಂದು ಉಪಮುಖ್ಯಮಂತ್ರಿ ಮತ್ತು ಸಾರಿಗೆ ಸಚಿವ ಪ್ರೇಮ್ ಚಂದ್ ಬೈರ್ವಾ ಹೇಳಿದ್ದಾರೆ.</p><p>ಇತ್ತೀಚೆಗೆ ಹೈದರಾಬಾದ್ನಿಂದ ಬೆಂಗಳೂರಿಗೆ ಹೊರಟಿದ್ದ ಖಾಸಗಿ ಸಂಸ್ಥೆಯ ಎಸಿ ಸ್ಲೀಪರ್ ಬಸ್ಗೆ ಬೆಂಕಿ ಹೊತ್ತಿಕೊಂಡು 19 ಪ್ರಯಾಣಿಕರು ಸಜೀವ ದಹನರಾದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>