ಮಾಹಿತಿಯನ್ನು ನಿರೀಕ್ಷಿಸುತ್ತಿದ್ದೇವೆ: ಜೈಶಂಕರ್
ಭುವನೇಶ್ವರ (ರಾಯಿಟರ್ಸ್): ಸಿಖ್ ಪ್ರತ್ಯೇಕವಾದಿ ಹತ್ಯೆ ಪ್ರಕರಣದಲ್ಲಿ ಮೂವರು ಭಾರತೀಯರ ಬಂಧನದ ಬಗ್ಗೆ ಕೆನಡಾ ಪೊಲೀಸರಿಂದ ಮಾಹಿತಿಗಾಗಿ ಕಾಯುತ್ತಿದ್ದೇವೆ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಶನಿವಾರ ತಿಳಿಸಿದ್ದಾರೆ.
ಭುವನೇಶ್ವರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬಂಧನದ ಸುದ್ದಿಯನ್ನು ನೋಡಿದ್ದೇನೆ. ಬಂಧಿತರು ಯಾವುದಾದರೂ ಗುಂಪಿನ ಸದಸ್ಯರಾಗಿದ್ದ ಹಿನ್ನೆಲೆ ಹೊಂದಿರುವವರು ಎಂಬ ಶಂಕೆ ಇದೆ. ಯಾವುದಕ್ಕೂ, ಕೆನಡಾ ಪೊಲೀಸರು ನೀಡುವ ಮಾಹಿತಿ ನಿರೀಕ್ಷಿಸುತ್ತಿದ್ದೇವೆ’ ಎಂದರು.