ನವದೆಹಲಿ: ಅಧಿಕಾರಿಯೊಬ್ಬರನ್ನು ಹಾಲಿ ಹುದ್ದೆಯಿಂದ ಬಿಡುಗಡೆಗೊಳಿಸಲು ₹20,000 ಲಂಚ ಪಡೆದ ಆರೋಪದ ಮೇಲೆ ವಾರಾಣಸಿಯಲ್ಲಿ ರೈಲ್ವೆಯ ಹಿರಿಯ ಸೆಕ್ಷನ್ ಎಂಜಿನಿಯರ್ ಅವರನ್ನು ಸಿಬಿಐ ಬಂಧಿಸಿದೆ ಎಂದು ಗುರುವಾರ ಅಧಿಕಾರಿಗಳು ತಿಳಿಸಿದ್ದಾರೆ.
ಈಶಾನ್ಯ ರೈಲ್ವೆಯಲ್ಲಿ ಕೆಲಸ ಮಾಡುತ್ತಿರುವ ಬಂಧಿತ ಆರೋಪಿ ಸಂಜಯ್ ಕುಮಾರ್ ಅಧಿಕಾರಿಯೊಬ್ಬರನ್ನು ಪ್ರಸ್ತುತ ಹುದ್ದೆಯಿಂದ ಬಿಡುಗಡೆಗೊಳಿಸಲು ₹50,000 ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಹೀಗಾಗಿ ಕುಮಾರ್ ವಿರುದ್ಧ ಅಧಿಕಾರಿ ಕೇಂದ್ರೀಯ ತನಿಖಾ ದಳಕ್ಕೆ ( ಸಿಬಿಐ) ದೂರು ನೀಡಿದ್ದರು.
ಬಳಿಕ ಎಫ್ಐಆರ್ ದಾಖಲಿಸಿದ ಸಿಬಿಐ, ₹20,000 ಲಂಚ ಪಡೆಯುವಾಗ ಅಧಿಕಾರಿಯನ್ನು ಬಂಧಿಸಿದೆ. ಅಲ್ಲದೆ ಆರೋಪಿಯ ನಿವಾಸಗಳ ಮೇಲೆ ದಾಳಿ ನಡೆಸಿದೆ.