ಕೋಲ್ಕತ್ತ: ‘ಪಶ್ಚಿಮ ಬಂಗಾಳದಲ್ಲಿ ನಡೆದ ಚುನಾವಣೋತ್ತರ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಉತ್ತರ 24 ಪರಗಣ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬನನ್ನು ಕೇಂದ್ರ ತನಿಖಾ ದಳವು (ಸಿಬಿಐ) ಬಂಧಿಸಿದೆ’ ಎಂದು ಮೂಲಗಳು ಶುಕ್ರವಾರ ತಿಳಿಸಿದೆ.
‘ಮೇ 2ರಂದು ವಿಧಾನಸಭೆ ಚುನಾವಣೆಯ ಫಲಿತಾಂಶ ಘೋಷಣೆಯಾದ ಬಳಿಕ ನಡೆದ ಬಿಜೆಪಿ ಕಾರ್ಯಕರ್ತರೊಬ್ಬರ ತಾಯಿಯ ಹತ್ಯೆ ಪ್ರಕರಣದ ಆರೋಪಿ ರತನ್ ಹಲ್ದಾರ್ನನ್ನು ಜಗದಾಲ್ ಪ್ರದೇಶದಲ್ಲಿ ಬಂಧಿಸಲಾಗಿದೆ’ ಎಂದು ಮೂಲಗಳು ಹೇಳಿವೆ.
ಈ ಹತ್ಯೆ ಪ್ರಕರಣ ಸಂಬಂಧ ಆಗಸ್ಟ್ 28ರಂದು ಬಿಜೋಯ್ ಘೋಷ್ ಮತ್ತು ಆಸಿಮ್ ಘೋಷ್ ಎಂಬವರನ್ನು ಸಿಬಿಐಯು ಬಂಧಿಸಿತ್ತು.